ದ್ವಾರಕೆ ಮುಳುಗಿದಾಗ

ಮತ್ತೆ ಅಳಿದುಳಿದ ಮಂದಿ ಹೊರಟಾಗ
ಕತ್ತಲೆಗೆ
ದೂಳು ಹೊಗೆ ಮತ್ತು ಶಬ್ದ ನಿಂತಾಗ
ಕತ್ತಲೆಗೆ
ಬದುಕಿ ಉಳಿದ ಭೂಮಿಯತ್ತ ನೋಡಿದಾಗ
ಕತ್ತಲೆಗೆ

ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ
ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ
ಕೇಳಿಸಿತು-ಮನುಷ್ಯ ಧ್ವನಿಯಲ್ಲ
ನೊರೆಯಾಡುವ ನೆರೆ ನೀರು ನೀರೇ
ಕಾಣಿಸಿತು-ಮಣ್ಣಲ್ಲ

ಹೀಗೆ ಅಂದಿರುಳು ಪ್ರಯಾಣದಲ್ಲಿ ಕಳೆದು ಮಸುಕಾದಾಗ
ಹೊಸ ಭೂಮಿಗೆ ಬಂದೆವು ಹೊಸ ಪರಿಸರದಲ್ಲಿ ಯಾವುದೂ
ಅರ್ಥವಾಗದೆ ನಮಗೆ ನಾವೇ ಗುರುತಿಲ್ಲದೆ ಅಲೆದೆವು
ಒಂದು ದುರಂತ ಮೌನದ ಭಾರದ ಕೆಳಗೆ ಕುಸಿದೆವು

ಭವಿಷ್ಯದಲ್ಲಿ ವಂಚಿತರಾಗಿ ಕಳೆದ ಕಲ್ಪದ ಅರೆಮರೆವಿನಲ್ಲಿ
ಚಳಿಗೆ ಗಾಳಿಗೆ ಸ್ವಲ್ಪ ಸ್ವಲ್ಪವೇ ಸವೆದೆವು
ಅನಾಥ ಶಿಲ್ಪಗಳಾಗಿ ಉಳಿದೆವು
ಅವಶೇಷಗಳಂತೆ ಕಾದೆವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭಿಸಾರಿಕೆ
Next post ಭವ್ಯ ಅಕ್ಕರೇ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…