ಅಭಿಸಾರಿಕೆ

ಹೊರಟೆ ಎಲ್ಲಿಗೆ ಅಭಿಸಾರಿಕೆ
ನಿರ್ಧಯಳೇ ಕಂದನ ಕರೆಗೆ
ಬಿಂಕ ಬಿನ್ನಾಣವ ಉಟ್ಟು
ಮುತ್ತು ರತ್ನವ ತೊಟ್ಟು
ಹೊರಟೆ ಎಲ್ಲಗೆ ನೀ ಎಲ್ಲಿಗೆ?
ಈ ಸೌಂದರ್ಯದ ಪ್ರಖರತೆ
ಆಗಬಾರದೆ ಅತ್ಮದ್ದು

ಹಿಂದೊಮ್ಮೆ ಹೊರಟಿದ್ದಳು ಅಕ್ಕ
ದೂರಾಗಿಸಲು ಮನದೊಳಗಿನ ದುಃಖ
ಭವಬಂಧನವ ತೊರೆದು
ಚೆನ್ನನ ಬೆನ್ನು ಹಿಡಿದು,
ಅಂದು ಆತ್ಮಸಾಕ್ಷಾತ್ಕಾರವಾದರೆ
ಇಂದು?

ನೀ ಎನ ತೊರೆದು ಹೊರಟಿರುವೆ
ನಿನಗ್ಯಾವ ಚೆನ್ನ ಕಾದಿಹನು
ಇನ್ನೊಬ್ಬ ಅಕ್ಕ ನೀನಾಗದಿದ್ದರೂ
ಆಗಬೇಡ ನೀ ಅಭಿಸಾರಿಕೆ
ಬೇಡ ಬೇಡ ಸಖಿ
ನಿನ್ನಧಃಪತನದ ಗತಿ
ಕೊಟ್ಟದ್ದಲ್ಲ ವಿಧಿ
ನೀನೇ ಅಗ್ನಿಯನ್ನಪ್ಪಿದರೂ
ಅಗ್ನಿಯೇ ನಿನ್ನನಪ್ಪಿದರೂ
ಸುಡುವುದು ನಿನ್ನೊಡಲು ಮಾತ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳಗಿನವನು
Next post ದ್ವಾರಕೆ ಮುಳುಗಿದಾಗ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys