ಸರಳವಾಗಿ ಬದುಕುವುದೇ ಲೇಸು

ಸರಳವಾಗಿ ಬದುಕುವುದೇ ಲೇಸು
ಹೃದಯ ಶ್ರೀಮಂತಿಕೆಯಿಂದ|
ಸಿರಿಯ ಒಣ ಜಂಬ ಪ್ರತಿಷ್ಠೆ
ಬಡಿವಾರಗಳ ತೋರಿಕೆ ಇಲ್ಲದೆ||

ಸರಳತೆಯಿಂದ ಜಗತ್ತನ್ನೇ
ಗೆಲ್ಲಬಹುದು
ಸರಳತೆಯಿಂದಲಿ ಸ್ನೇಹ
ಸಂಯಮತೆಯ ಗಳಿಸಬಹುದು|
ಸರಳತೆಯಿಂದಲಿ
ಬುದ್ದಿ ಸಿದ್ಧಿಗಳ ಸಂಪಾದಿಸಬಹುದು
ಸರಳತೆಯಿಂದಲಿ ನಮ್ಮ ಗೌರವ
ದ್ವಿಗುಣಗೊಳಿಸಬಹುದು||

ಸರಳತೆಯಿಂದಲಿ ಕುಚೇಲ
ಕೃಷ್ಣನ ಸ್ನೇಹಿತನಾದನು|
ಸರಳತೆಯಿಂದಲಿ ಹನುಮಂತ
ರಾಮಸೇವಾ ಭಾಗ್ಯವ ಪಡೆದರು|
ಸರಳತೆಯಿಂದಲಿ ಅನ್ನಮಯ್ಯ
ಬಾಲಾಜಿಯ ಸೇವೆಗೈದರು|
ಸರಳಸಜ್ಜನಿಕೆಯಿಂದಲಿ ಬಸವಣ್ಣ
ವಿಶ್ವ ಮಾನವನಾಗಿ
ಜಗಜ್ಯೋತಿಯಾದರು|
ಸರಳತೆಯಿಂದಲಿ ಗಾಂಧೀಜಿ
ವಿಶ್ವದಿ ಮಹಾತ್ಮನೆನಿಸಿದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡೆದ್ದು ಬದುಕೇವು
Next post ಅವನ ಕತೆ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys