ಸರಳವಾಗಿ ಬದುಕುವುದೇ ಲೇಸು

ಸರಳವಾಗಿ ಬದುಕುವುದೇ ಲೇಸು
ಹೃದಯ ಶ್ರೀಮಂತಿಕೆಯಿಂದ|
ಸಿರಿಯ ಒಣ ಜಂಬ ಪ್ರತಿಷ್ಠೆ
ಬಡಿವಾರಗಳ ತೋರಿಕೆ ಇಲ್ಲದೆ||

ಸರಳತೆಯಿಂದ ಜಗತ್ತನ್ನೇ
ಗೆಲ್ಲಬಹುದು
ಸರಳತೆಯಿಂದಲಿ ಸ್ನೇಹ
ಸಂಯಮತೆಯ ಗಳಿಸಬಹುದು|
ಸರಳತೆಯಿಂದಲಿ
ಬುದ್ದಿ ಸಿದ್ಧಿಗಳ ಸಂಪಾದಿಸಬಹುದು
ಸರಳತೆಯಿಂದಲಿ ನಮ್ಮ ಗೌರವ
ದ್ವಿಗುಣಗೊಳಿಸಬಹುದು||

ಸರಳತೆಯಿಂದಲಿ ಕುಚೇಲ
ಕೃಷ್ಣನ ಸ್ನೇಹಿತನಾದನು|
ಸರಳತೆಯಿಂದಲಿ ಹನುಮಂತ
ರಾಮಸೇವಾ ಭಾಗ್ಯವ ಪಡೆದರು|
ಸರಳತೆಯಿಂದಲಿ ಅನ್ನಮಯ್ಯ
ಬಾಲಾಜಿಯ ಸೇವೆಗೈದರು|
ಸರಳಸಜ್ಜನಿಕೆಯಿಂದಲಿ ಬಸವಣ್ಣ
ವಿಶ್ವ ಮಾನವನಾಗಿ
ಜಗಜ್ಯೋತಿಯಾದರು|
ಸರಳತೆಯಿಂದಲಿ ಗಾಂಧೀಜಿ
ವಿಶ್ವದಿ ಮಹಾತ್ಮನೆನಿಸಿದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡೆದ್ದು ಬದುಕೇವು
Next post ಅವನ ಕತೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…