ಬಂಡೆದ್ದು ಬದುಕೇವು

ಬಡವರಾದೆವು ನಾವು
ಬಂಧುಗಳು ಯಾರುಂಟು?
ನಾವು ಬಸಿದಾ ಬೆವರು
ಯಾರ ಹೊಟೇಲುಂಟು ?

ಕಣ್ಣ ಹನಿ ಹರಿಸಿದೆವು
ಮಗುವಂತೆ ಬೆಳಸಿದೆವು
ಕಂಡೋರ ಮನೆಗೆಲ್ಲ
ಕೊಟ್ಟು ಬಂದೆವಲ್ಲ
ತಲೆ ಮ್ಯಾಲೆ ಸಾಲ
ಹೊತ್ತು ತಂದೆವಲ್ಲ.

ಮೂಳೆ ಮೂಳೆಯ ತೇದು
ಬೆಳೆಸಿದೆವು ನಾವು
ನಮ್ಮ ಕಂದಮ್ಮಗಳು
ನಮಗಿಲ್ಲವೆ?
ನಮ್ಮ ಕೈಯ್ಯಾರ
ಬಾಳ ಕೊಲ್ಲಿಸುತಾರೆ
ಕಿವಿ ಕಣ್ಣು ಕರುಳು
ಇಲ್ಲಿಲ್ಲವೆ?

ಬಟ್ಟೆ ಕೇಳಿದರೆ
ಗೊಮ್ಮಟನ ತೋರುವರು
ಹೊಟ್ಟೆ ಹಸಿವೆಂದರೆ
ವ್ರತವೆಂದು ಹೇಳುವರು.

ಬಡವರು ನಾವೆಂದು
ಬೇರಾರು ಮೂಸೊಲ್ಲ
ಕಂಡೋರ ಒಡಲಿಗೆ
ದುಡಿಯೋಯ ನಿಂತಿಲ್ಲ.

ಬಂಧುಗಳು ಯಾರಿಲ್ಲ
ಸಾವು ಬಂದೈತೆ
ದಾರಿಗುಂಟ ಒಳ್ಳೆ
ಸೀರೆ ಹಾಸೈತೆ.

ಸಾವು ಬಂದೈತೆಂದು
ಹೋದೇವ ನಾವು?
ಬಂಧುಗಳೆ ಇಲ್ಲೆಂದು
ಭೂಮಿ ಬಿಟ್ಟೇವ?
ಸಾವ ಸರದಾರನ
ಸೋಲಿಸಿ ಕಳಿಸೇವು
ಬಂಡೆದ್ದು ಭೂಮೀಲೆ
ನಾವು ಬದುಕೇವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣದ ಆತಂಕಗಳು
Next post ಸರಳವಾಗಿ ಬದುಕುವುದೇ ಲೇಸು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys