ಬಂಡೆದ್ದು ಬದುಕೇವು

ಬಡವರಾದೆವು ನಾವು
ಬಂಧುಗಳು ಯಾರುಂಟು?
ನಾವು ಬಸಿದಾ ಬೆವರು
ಯಾರ ಹೊಟೇಲುಂಟು ?

ಕಣ್ಣ ಹನಿ ಹರಿಸಿದೆವು
ಮಗುವಂತೆ ಬೆಳಸಿದೆವು
ಕಂಡೋರ ಮನೆಗೆಲ್ಲ
ಕೊಟ್ಟು ಬಂದೆವಲ್ಲ
ತಲೆ ಮ್ಯಾಲೆ ಸಾಲ
ಹೊತ್ತು ತಂದೆವಲ್ಲ.

ಮೂಳೆ ಮೂಳೆಯ ತೇದು
ಬೆಳೆಸಿದೆವು ನಾವು
ನಮ್ಮ ಕಂದಮ್ಮಗಳು
ನಮಗಿಲ್ಲವೆ?
ನಮ್ಮ ಕೈಯ್ಯಾರ
ಬಾಳ ಕೊಲ್ಲಿಸುತಾರೆ
ಕಿವಿ ಕಣ್ಣು ಕರುಳು
ಇಲ್ಲಿಲ್ಲವೆ?

ಬಟ್ಟೆ ಕೇಳಿದರೆ
ಗೊಮ್ಮಟನ ತೋರುವರು
ಹೊಟ್ಟೆ ಹಸಿವೆಂದರೆ
ವ್ರತವೆಂದು ಹೇಳುವರು.

ಬಡವರು ನಾವೆಂದು
ಬೇರಾರು ಮೂಸೊಲ್ಲ
ಕಂಡೋರ ಒಡಲಿಗೆ
ದುಡಿಯೋಯ ನಿಂತಿಲ್ಲ.

ಬಂಧುಗಳು ಯಾರಿಲ್ಲ
ಸಾವು ಬಂದೈತೆ
ದಾರಿಗುಂಟ ಒಳ್ಳೆ
ಸೀರೆ ಹಾಸೈತೆ.

ಸಾವು ಬಂದೈತೆಂದು
ಹೋದೇವ ನಾವು?
ಬಂಧುಗಳೆ ಇಲ್ಲೆಂದು
ಭೂಮಿ ಬಿಟ್ಟೇವ?
ಸಾವ ಸರದಾರನ
ಸೋಲಿಸಿ ಕಳಿಸೇವು
ಬಂಡೆದ್ದು ಭೂಮೀಲೆ
ನಾವು ಬದುಕೇವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣದ ಆತಂಕಗಳು
Next post ಸರಳವಾಗಿ ಬದುಕುವುದೇ ಲೇಸು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…