ಶಾಪ


ಒಂದೂರು ಊರೊಳಗೊಂದು ದುರ್ಗ ದುರ್ಗ
ದೊಳಗೊಂದು ಅರಮನೆ ಅರಮನೆ

ಯೊಳಗೊಂದು ಮನೆ ಮನೆ
ಗೇಳು ಬಾಗಿಲು ಹದಿನಾಲ್ಕು ಕಿಟಕಿ

ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ
ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ

ಅಮವಾಸ್ಯೆ ರಾತ್ರಿ ಮೂರನೇ ಝಾವ
ಮನೆಯೊಳಗೆ ಮೌನವೋ ಮೌನ

ತೆರೆದಾವು ಏಳು ಬಾಗಿಲು ಹದಿನಾಲ್ಕು ಕಿಟಕಿ
ಅಮವಾಸ್ಯೆ ರಾತ್ರಿ ಮೂರನೇ ಝಾವ

ಎಚ್ಚರಾಗುತ್ತಾಳೆ ನಿದ್ರಿಸುವ ಸುಂದರಿ
ಎದ್ದು ಬರುತ್ತಾಳೆ ಹೊರಗೆ

ಅಂಗಣದಲ್ಲಿ ನಿಂತು ಆಕಾಶ ನೋಡುತ್ತಾಳೆ
ಆಕಾಶದಲ್ಲಿ ಚಂದ್ರನಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ-ಎನ್ನುತ್ತಾಳೆ
ಆಕಾಶದಲ್ಲಿ ಚಂದ್ರನೇ ಇಲ್ಲ.

ಊರೊಳಗೊಂದು ಕರೆ ಕರೆ
ತುಂಬ ನೀರು ನೀರಿನ ತನಕ ಸೋಪಾನ ಸಾಲು

ಸಾಲಿಗೆ ಸಾಲು ಕುಳಿತ ಶಿಲಾಬಾಲೆ
ಗಳೊಂದು ನೂರು ನೂರು

ನಿದ್ರಿಸುವ ಸುಂದರಿ ಬರುತ್ತಾಳೆ ಕೆರೆಗೆ ಒಂಟಿ
ಊರೊಳಗೆ ಇರುಳೋ ಇರುಳು

ಸೋಪಾನದಲ್ಲಿ ಕುಳಿತು ಕೆರೆಯೊಳಗೆ ನೋಡುತ್ತಾಳೆ
ಕೆರೆಯೊಳಗೆ ಚಂದ್ರನಿಲ್ಲ

ಕೆರೆಯೊಳಗೆ ಚಂದ್ರನಿಲ್ಲ-ಎನ್ನುತ್ತಾಳೆ
ಕೆರೆಯೊಳಗೆ ಚಂದ್ರನೇ ಇಲ್ಲ

ಅಳುತ್ತಾಳೆ ರಾಜಕುಮಾರಿ ಸೋಪಾನದಲ್ಲಿ ಕುಳಿತು
ಕೆರೆಗೆ ಬಿದ್ದಾವು ಕಣ್ಣೀರ ಬಿಂದು

ಎದ್ದೀತು ಗಾಳಿ ಉಕ್ಕೀತು ನೀರು
ಅಳುವಂತೆ ಶಿಲಾಬಾಲೆಗಳು ನೂರು ನೂರು

ಬಂದಾಳು ಮನೆಗೆ ರಾಜಕುಮಾರಿ ಒಂಟಿ
ಅಮಾವಾಸ್ಯೆ ರಾತ್ರಿ ನಾಲ್ಕನೇ ಝಾವ

ಏಳು ಬಾಗಿಲು ಹದಿನಾಲ್ಕು ಕಿಟಕಿ ಮುಚ್ಚಿಕೊಳ್ಳುತ್ತಾವೆ
ನಿದ್ದೆ ಹೋಗುತ್ತಾಳೆ ನಿದ್ರಿಸುವ ಸುಂದರಿ

ಋತುಗಳು ಬರುತ್ತಾವೆ ಹೋಗುತ್ತಾವೆ ಬಾಗಿಲು ಕಿಟಕಿ
ತೆರೆಯುತ್ತಾವೆ ಮುಚ್ಚುತ್ತಾವೆ

ಊರ ಹೊರಗೆಲ್ಲ ಅರೆಗಾಲ ಬರೆಗಾಲ ಬಂದರೂ ಈ
ಕೆರೆನೀರು ಬತ್ತುವುದಿಲ್ಲ

ಕೆರೆ ನೀರು ಬತ್ತುವುದಿಲ್ಲ-ಎನ್ನುತ್ತಾರೆ ಜನ
ಈ ಕಣ್ಣೀರು ಬತ್ತುವುದೆ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಾನೇ
Next post ನಾವು ಕಂಡದ್ದು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…