ಶಾಪ


ಒಂದೂರು ಊರೊಳಗೊಂದು ದುರ್ಗ ದುರ್ಗ
ದೊಳಗೊಂದು ಅರಮನೆ ಅರಮನೆ

ಯೊಳಗೊಂದು ಮನೆ ಮನೆ
ಗೇಳು ಬಾಗಿಲು ಹದಿನಾಲ್ಕು ಕಿಟಕಿ

ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ
ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ

ಅಮವಾಸ್ಯೆ ರಾತ್ರಿ ಮೂರನೇ ಝಾವ
ಮನೆಯೊಳಗೆ ಮೌನವೋ ಮೌನ

ತೆರೆದಾವು ಏಳು ಬಾಗಿಲು ಹದಿನಾಲ್ಕು ಕಿಟಕಿ
ಅಮವಾಸ್ಯೆ ರಾತ್ರಿ ಮೂರನೇ ಝಾವ

ಎಚ್ಚರಾಗುತ್ತಾಳೆ ನಿದ್ರಿಸುವ ಸುಂದರಿ
ಎದ್ದು ಬರುತ್ತಾಳೆ ಹೊರಗೆ

ಅಂಗಣದಲ್ಲಿ ನಿಂತು ಆಕಾಶ ನೋಡುತ್ತಾಳೆ
ಆಕಾಶದಲ್ಲಿ ಚಂದ್ರನಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ-ಎನ್ನುತ್ತಾಳೆ
ಆಕಾಶದಲ್ಲಿ ಚಂದ್ರನೇ ಇಲ್ಲ.

ಊರೊಳಗೊಂದು ಕರೆ ಕರೆ
ತುಂಬ ನೀರು ನೀರಿನ ತನಕ ಸೋಪಾನ ಸಾಲು

ಸಾಲಿಗೆ ಸಾಲು ಕುಳಿತ ಶಿಲಾಬಾಲೆ
ಗಳೊಂದು ನೂರು ನೂರು

ನಿದ್ರಿಸುವ ಸುಂದರಿ ಬರುತ್ತಾಳೆ ಕೆರೆಗೆ ಒಂಟಿ
ಊರೊಳಗೆ ಇರುಳೋ ಇರುಳು

ಸೋಪಾನದಲ್ಲಿ ಕುಳಿತು ಕೆರೆಯೊಳಗೆ ನೋಡುತ್ತಾಳೆ
ಕೆರೆಯೊಳಗೆ ಚಂದ್ರನಿಲ್ಲ

ಕೆರೆಯೊಳಗೆ ಚಂದ್ರನಿಲ್ಲ-ಎನ್ನುತ್ತಾಳೆ
ಕೆರೆಯೊಳಗೆ ಚಂದ್ರನೇ ಇಲ್ಲ

ಅಳುತ್ತಾಳೆ ರಾಜಕುಮಾರಿ ಸೋಪಾನದಲ್ಲಿ ಕುಳಿತು
ಕೆರೆಗೆ ಬಿದ್ದಾವು ಕಣ್ಣೀರ ಬಿಂದು

ಎದ್ದೀತು ಗಾಳಿ ಉಕ್ಕೀತು ನೀರು
ಅಳುವಂತೆ ಶಿಲಾಬಾಲೆಗಳು ನೂರು ನೂರು

ಬಂದಾಳು ಮನೆಗೆ ರಾಜಕುಮಾರಿ ಒಂಟಿ
ಅಮಾವಾಸ್ಯೆ ರಾತ್ರಿ ನಾಲ್ಕನೇ ಝಾವ

ಏಳು ಬಾಗಿಲು ಹದಿನಾಲ್ಕು ಕಿಟಕಿ ಮುಚ್ಚಿಕೊಳ್ಳುತ್ತಾವೆ
ನಿದ್ದೆ ಹೋಗುತ್ತಾಳೆ ನಿದ್ರಿಸುವ ಸುಂದರಿ

ಋತುಗಳು ಬರುತ್ತಾವೆ ಹೋಗುತ್ತಾವೆ ಬಾಗಿಲು ಕಿಟಕಿ
ತೆರೆಯುತ್ತಾವೆ ಮುಚ್ಚುತ್ತಾವೆ

ಊರ ಹೊರಗೆಲ್ಲ ಅರೆಗಾಲ ಬರೆಗಾಲ ಬಂದರೂ ಈ
ಕೆರೆನೀರು ಬತ್ತುವುದಿಲ್ಲ

ಕೆರೆ ನೀರು ಬತ್ತುವುದಿಲ್ಲ-ಎನ್ನುತ್ತಾರೆ ಜನ
ಈ ಕಣ್ಣೀರು ಬತ್ತುವುದೆ ಇಲ್ಲ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...