ಶಾಪ


ಒಂದೂರು ಊರೊಳಗೊಂದು ದುರ್ಗ ದುರ್ಗ
ದೊಳಗೊಂದು ಅರಮನೆ ಅರಮನೆ

ಯೊಳಗೊಂದು ಮನೆ ಮನೆ
ಗೇಳು ಬಾಗಿಲು ಹದಿನಾಲ್ಕು ಕಿಟಕಿ

ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ
ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ

ಅಮವಾಸ್ಯೆ ರಾತ್ರಿ ಮೂರನೇ ಝಾವ
ಮನೆಯೊಳಗೆ ಮೌನವೋ ಮೌನ

ತೆರೆದಾವು ಏಳು ಬಾಗಿಲು ಹದಿನಾಲ್ಕು ಕಿಟಕಿ
ಅಮವಾಸ್ಯೆ ರಾತ್ರಿ ಮೂರನೇ ಝಾವ

ಎಚ್ಚರಾಗುತ್ತಾಳೆ ನಿದ್ರಿಸುವ ಸುಂದರಿ
ಎದ್ದು ಬರುತ್ತಾಳೆ ಹೊರಗೆ

ಅಂಗಣದಲ್ಲಿ ನಿಂತು ಆಕಾಶ ನೋಡುತ್ತಾಳೆ
ಆಕಾಶದಲ್ಲಿ ಚಂದ್ರನಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ-ಎನ್ನುತ್ತಾಳೆ
ಆಕಾಶದಲ್ಲಿ ಚಂದ್ರನೇ ಇಲ್ಲ.

ಊರೊಳಗೊಂದು ಕರೆ ಕರೆ
ತುಂಬ ನೀರು ನೀರಿನ ತನಕ ಸೋಪಾನ ಸಾಲು

ಸಾಲಿಗೆ ಸಾಲು ಕುಳಿತ ಶಿಲಾಬಾಲೆ
ಗಳೊಂದು ನೂರು ನೂರು

ನಿದ್ರಿಸುವ ಸುಂದರಿ ಬರುತ್ತಾಳೆ ಕೆರೆಗೆ ಒಂಟಿ
ಊರೊಳಗೆ ಇರುಳೋ ಇರುಳು

ಸೋಪಾನದಲ್ಲಿ ಕುಳಿತು ಕೆರೆಯೊಳಗೆ ನೋಡುತ್ತಾಳೆ
ಕೆರೆಯೊಳಗೆ ಚಂದ್ರನಿಲ್ಲ

ಕೆರೆಯೊಳಗೆ ಚಂದ್ರನಿಲ್ಲ-ಎನ್ನುತ್ತಾಳೆ
ಕೆರೆಯೊಳಗೆ ಚಂದ್ರನೇ ಇಲ್ಲ

ಅಳುತ್ತಾಳೆ ರಾಜಕುಮಾರಿ ಸೋಪಾನದಲ್ಲಿ ಕುಳಿತು
ಕೆರೆಗೆ ಬಿದ್ದಾವು ಕಣ್ಣೀರ ಬಿಂದು

ಎದ್ದೀತು ಗಾಳಿ ಉಕ್ಕೀತು ನೀರು
ಅಳುವಂತೆ ಶಿಲಾಬಾಲೆಗಳು ನೂರು ನೂರು

ಬಂದಾಳು ಮನೆಗೆ ರಾಜಕುಮಾರಿ ಒಂಟಿ
ಅಮಾವಾಸ್ಯೆ ರಾತ್ರಿ ನಾಲ್ಕನೇ ಝಾವ

ಏಳು ಬಾಗಿಲು ಹದಿನಾಲ್ಕು ಕಿಟಕಿ ಮುಚ್ಚಿಕೊಳ್ಳುತ್ತಾವೆ
ನಿದ್ದೆ ಹೋಗುತ್ತಾಳೆ ನಿದ್ರಿಸುವ ಸುಂದರಿ

ಋತುಗಳು ಬರುತ್ತಾವೆ ಹೋಗುತ್ತಾವೆ ಬಾಗಿಲು ಕಿಟಕಿ
ತೆರೆಯುತ್ತಾವೆ ಮುಚ್ಚುತ್ತಾವೆ

ಊರ ಹೊರಗೆಲ್ಲ ಅರೆಗಾಲ ಬರೆಗಾಲ ಬಂದರೂ ಈ
ಕೆರೆನೀರು ಬತ್ತುವುದಿಲ್ಲ

ಕೆರೆ ನೀರು ಬತ್ತುವುದಿಲ್ಲ-ಎನ್ನುತ್ತಾರೆ ಜನ
ಈ ಕಣ್ಣೀರು ಬತ್ತುವುದೆ ಇಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...