Home / ಕವನ / ಕವಿತೆ / ಕೇರಳದ ಹುಡುಗಿಯರು

ಕೇರಳದ ಹುಡುಗಿಯರು

ಕೇರಳದ ಹುಡುಗಿಯರು ಸದಾ ಶೋಡಶಿಯರು
ಎಂದರೆ ಅತಿಶಯೋಕ್ತಿ ಹೌದು ಅಲ್ಲ
ಕಾರಣ ಇದ್ದೀತು ಹೀಗೆ-

ಕೇರಳದ ಮಣ್ಣು
ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ
ಛಲೋ ಹೊಸ ಹೆಣ್ಣು-ಎಂದರೆ ಈ
ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ
ಜೀವಂತ ಒಡ್ಡಿದ ಬೆತ್ತಲೆ ದೇಹ-

ಇಲ್ಲಿ ಈ ಬಯಲಿನ ಸೊಬಗಿನ
ತೆಂಗಿನ ನಾರಿನ ನೀರಿನ ಕೊಂಪೆಯ ಕೇರಿಯ
ಕಳ್ಳಿನ ಕಾಮದ ಜಗಳದ ಕೇಕೆಯ ಫೇರಿಯ
ಎದ್ದ ನಗರಗಳ ಬಿದ್ದ ಬೀದಿಗಳ ಜನಗಳ ಸಂಘರ್ಷದ ಸೆಕೆಗೆ

ಈ ಭೂಮಿಯಲ್ಲಿ ಅವತರಿಸಿದ ಶಾಪಗ್ರಸ್ತೆಯರು
ಈ ಭೂಮಿಯ ಸೆಳವಿಗೆ ತುಯ್ಯುತ್ತಾರೆ ಈ ಕಡಲಿನ ತೆರೆಗಳ
ಏರಿಳಿತದ ಕರೆಗೆ ಓಗೊಡುತ್ತಾರೆ

ಪ್ರಮೋದೆ ಪ್ರಮೀಳೆಯ ಸುಕುಮಾರ ಕತೆಯ ಪರಿಷೆಯಲ್ಲಿ
ದುರಂತ ಕಾಣದಿರಬಹುದು ಕಣ್ಣುಗಳ ಹಿಂದೆ
ನಿರಾಸೆ ಮಾಯ್ದಿರಬಹುದು ಕಾಡಿಗೆಯ ಹಿಂದೆ
ನಿಟ್ಟುಸಿರು ಕೇಳದಿರಬಹುದು ಚೆಲ್ಲಾಟದ ಹಿಂದೆ

ಕತೆಗೂ ವಾಸ್ತವತೆಗೂ ಅಂತರವಾಗಿ ನಿಂತ ಇವರಲ್ಲಿ
“ಆ!” ಎಂದು ಆಶ್ಚರ್ಯ ಚಿಮ್ಮಿದಾಗಲೂ ಕಣ್ಣುಗಳಲ್ಲಿ
ಅಥವಾ ವೇದನೆ ಹರಿದಾಗಲೂ ಕೆನ್ನೆಗಳಲ್ಲಿ
ಅಥವಾ ರೋಮಾಂಚ ಮೂಡಿದಾಗಲೂ ಮೈಯಲ್ಲಿ
ಬದುಕು ಒಂದಲ್ಲ ಒಂದು ವಿಧ ಮೂರ್ತಗೊಂಡಾಗಲೂ ಇವರಲ್ಲಿ

ತುರುಬಿನ ಈ ಎಣ್ಣೆಯ ಕಣ್ಣಿನ ಈ ಸೆಳಕಿನ
ಕಂಕುಳ ಈ ಬೆವರಿನ ಸುವಾಸದ ಆಕರ್ಷದ ಹಿಂದೆ
ಬದುಕಿನ ಉದಯಾಸ್ತಮದ ವ್ಯಂಗ್ಯದಲ್ಲೂ
ಇದರ ನಿಷ್ಠುರ ಕ್ರೌರ್ಯದಲ್ಲೂ

ಎಲ್ಲರನ್ನೂ ಎಚ್ಚರಿಸಿ ಹಂಗಿಸಿ ನಗುವ ಭಂಗಿ
ಹೆಜ್ಜೆಯಲ್ಲಿ ಗೆಜ್ಜೆಯಲ್ಲಿ ಇವರ ಉದಾಸೀನದ ಒಜ್ಜೆಯಲ್ಲಿ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ