ಸೀರೆ ಝಾಡಿಸಿದಳೆಂದರೆ

ಮಕ್ಕಳು ಆಡುತ್ತಿರುತ್ತವೆ
ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ
ದುಡಿವ ಜನ ದುಡಿಯುತ್ತಿರುತ್ತಾರೆ
ಓಡಾಡುವವರು ಓಡಾಡುತ್ತಿರುತ್ತಾರೆ
ಮಲಗಿರುವವರು ಮಲಗಿರುತ್ತಾರೆ
ಕುಳಿತಿರುವವರು ಕುಳಿತಿರುತ್ತಾರೆ
ಹೊಟ್ಟೆಗೋ ಹೊಟ್ಟೆಕಿಚ್ಚಿಗೋ
ಕರುಳ ಕರೆಗೋ ಸಂಚು ಹೊಂಚುಗಳಿಗೋ
ಸೆಳೆದಾಟಗಳಿಗೋ ಹಲವರು
ಹಲವು ವಿಧಗಳಲ್ಲಿ ಬಡಿದಾಡುತ್ತಿರುತ್ತಾರೆ
ಇಲ್ಲೇ ಇಲ್ಲೇ ಶಾಶ್ವತವಾಗಿ ಇರುತ್ತೇವೆಂಬಂತೆ
ಅಷ್ಟಾವಕ್ರಗಳಲ್ಲೂ ಎಲ್ಲಾ ಸುಸೂತ್ರ
ನಡೆದಿರುತ್ತದೆ ಬದುಕು ಜಟಕಾ ಬಂಡಿ
ಇವನೆಲ್ಲ ಹೊತ್ತ ಈ ತಾಯಿ
ಸುಮ್ಮನೆ ಬಿಮ್ಮನೆ ಬೀಗಿಕೊಂಡಿದ್ದರೆ
ಎಲ್ಲ ಸಲೀಸಾಗಿ ಸಾಗುತ್ತಿರುತ್ತದೆ
ಅವಳಿಗೆ ಹೊಟ್ಟೆ ನೋವಾಗಿ
ಹೊಡೆಮರಳಿತೆಂದರೆ
ಬೇಜಾರಾಗಿ ಒಮ್ಮೆ ಮೈ ನಡುಗಿಸಿದಳೆಂದರೆ…
ಅಥವಾ ಬಾಯಿ ತೆರೆದು ಆಕಳಿಸಿದಳೆಂದರೆ….
ಅಥವಾ ಅವಳಿಗೆ ಸೀನು ಬಂದು
ಸುಡು ಸುಡು ದ್ರವದ ಸೀನು
ಸೀದಿದಳೆಂದರೆ….
ಅಥವಾ ತನ್ನ ಸೀರೆ ನೆರಿಗೆಗಳ
ಸರಿಪಡಿಸಿಕೊಳ್ಳಲು ಸೀರೆ ಝಾಡಿಸಿದಳೆಂದರೆ…
ಅಥವಾ ಯಾಕಾದರೂ ನಿಟ್ಟುಸಿರು ಬಿಟ್ಟು
ಭೋರೆಂದು ಉಸಿರು ಬಿಡತೊಡಗಿದಳೆಂದರೆ…
ನಿಂತವರು ನಿಂತಲ್ಲಿ ಕುಂತವರು ಕುಂತಲ್ಲಿ
ಮಲಗಿದವರು ಅಲ್ಲೆ ಓಡಾಡುವವರು ಅಲ್ಲಲ್ಲೆ
ಬಡಿದಾಡುವವರು ಕಚ್ಚಾಡುವವರು
ಪ್ರೀತಿಸುವವರು ರಮಿಸುವವರು
ರೋಗಿಗಳು ಭೋಗಿಗಳು ಯುವಕರು ಮುದುಕರು
ಕೂಸು ಕುನ್ನಿ ಗಂಡು ಹೆಣ್ಣು ಎಲ್ಲ ಎಲ್ಲರೂ
ನೆಲಸಮ ಮಣ್ಣಲ್ಲಿ ಮಣ್ಣು
ಇಲ್ಲಿ ಉಳಿದ ಬಾಯಿ ಬಡಕೊಳ್ಳುವವರು
ಪತ್ರಿಕೆ-ಆಕಾಶವಾಣಿ-ದೂರವಾಣಿ ಸುದ್ದಿಗಳಿಗೆ
ಕೆಲವು ದಿನ ಆಹಾರ ಸಿಗುವುದು
ಅನುಕಂಪಗಳ ಸುರಿಮಳೆ ಸುರಿಯುತ್ತದೆ
ಸಹಾಯ ಹಸ್ತ ಭೂಮಂಡಲದುದ್ದ ಚಾಚುತ್ತವೆ
ಕೆಲಕಾಲ ಗತಿಸಿದಂತೆಲ್ಲಾ
ಈ ತಾಯಿಯ ಮೈಮೇಲಾದ ಗಾಯ
ಮಾದು ಹೋಗಿಬಿಡುತ್ತವೆ
ಎಂದಿನಂತೆ ಆಡುವವರು ಆಡುತ್ತಾರೆ
ಹೊಡೆದಾಡುವವರು ಹೋರಾಡುವವರು
ದುಡಿಯುವವರು ದುಃಖಿಸುವವರು
ನಗುವವರು ಕೆಲೆಯುವವರು
ತಂತಮ್ಮ ಪರಿಗಳ ಬದುಕುತ್ತಾರೆ
ಮತ್ತೆ ಈ ತಾಯಿ ಸುಮ್ಮನೆ ಬಿಮ್ಮನೆ
ಬೀಗುತ್ತ ಸಾಗುತ್ತಾಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಲ್ಲ
Next post ಡಿ.ಆರ್‍. ಡಿಯರ್‍

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys