ನಮ್ಮೂರ ಹೋಳಿ ಹಾಡು – ೯

ಕಾಮ ನೀನು ಧೂಮವಾದಿ
ಸೋಮನಾಥನ ಕಣ್ಣಿಗೆ
ಪ್ರೇಮದಾ ನುಡಿ ಏನು ಹೇಳಿದಿ
ಕಾಮಿನಿ ರತಿ ದೇವಿಗೆ

ನಿನ್ನ ಪೋಲುವೆ ಪುರುಷರು
ಜಗದೊಳಿನ್ನೂ
ಹುಟ್ಯಾರೆಂದಿಗೆ?
ನನ್ನ ಮುತ್ತೈದೆ ತನಕೆ
ಭಂಗ ತಂದ್ಯಾ ಇಂದಿಗೆ ||೧||

ಮಾರ ನಿನ್ನ ರೂಪ ನೋಡಿ
ಸೈರಿಸದೀ ಅಮರ್‍ಯಾರೋ
ದೂರಿ ಎಲ್ಲರೂ
ಶಿವನ ಕಣ್ಣಿಗೆ ಮಾರುಗೊಟ್ಟ
ಪಾಪತ್ಮರೂ ||೨||

ಸ್ಮರನೆ ನಿನ್ನಯ ಮನಕೆ
ತಾರಕನುಪದ್ರವ ಕೊಟ್ಟನೆ
ಹರಿವಿರಂಚಿಯೂ
ಗುರುಬೃಹಸ್ಪತಿ
ಕರೆದು ಪೇಳಿದರ್‍ಯೋಚನೆ ||೩||

ಮೋಸದಿಂದಲಿ
ಭಾಷೆಗೊಂಡರು
ಈಸನಗ್ನಿಗಣ್ಣಿಗೆ ನಾಶಗೈದನು
ಗುರುವರನು ಬಹು
ದೊರೆಯಾದನು ಭೂಮಿಗೆ ||೪||

ಕಡು ಚೆಲುವ ಕಂದರ್ಪ
ನಿನ್ನಯ ಮಡದಿ ರತಿಯಳ ದುಃಖವಾ
ಬಿಡುವಳೋ ಸೈ
ಗಡಗಡ ನೇ ತಾ
ಹುಡಿಯೊಳಗೆ ಹೊರಳಾಡುತಾ ||೫||

ಮಾರ ಬಾಣಕೆ ಮನು – ಮುನ್ಯಾದಿಯ
ದಾರಿ ತಪ್ಪಿಸಿ ಮುತ್ತಿದೆ|
ಮೂರು ಲೋಕದಿ ನಿನ್ನ
ಮಿಕ್ಕುವರಾರು
ಕದನದೊಳಿಂದಿಗೆ ||೬||

ಭೂಮಿಯೊಳುತ್ಪತ್ಯವೆಂಬುದು
ಕಾಮ ನಿನ್ನಿಂದಲ್ಲದೇ!
ನೀ ಮರಣ ಹೊಂದಿದರೆ
ಜಗತ್ರಯ ತಾ
ಮುಳಿಗಿ ಹೋಯಿತಲ್ಲದೆ ||೭||

ಕ್ಷಿತಿಯೊಳಗೆ ಪತಿವ್ರತಾ
ಶಿರೋಮಣಿಯಾ|
ರತಿ ಎಂಬ ಚೆಲುವೆಯಾ
ಪತಿವಳಿದ ರಂಡೆತನವ ವಹಿಸಿ
ಕ್ಷಿತಿಗೆಯಾದಳು ಪಾಪಿಯಾ ||೮||

ಕಾಲಕಾಲಾಂತರದಿ ರತಿಯಾ
ತಾಳಿಕರಿಮಣಿಯ ತೆಗೆಯದೆ
ಪಾಲನೇತ್ರನ ದಯದಿ
ಬಾಲೆ ನಿನ್ನನು ನೆನೆಲದೆ ||೯||

ನೆನಪಿದಾಕ್ಷಣ ಮನಸಿಜನು ಎಂದೆನೆಸಿ
ರತಿಯಳ ಪಾಲಿಸೋ|
ತನು ಕಳೆದರೂ ಮನದಿಗೂಡಿ
ಜೀವ ಜಗತ್ರಯವನು ಪಾಲಿಸೋ ||೧೦||

ಕ್ಷಿತಿಗೆ ರತಿ ಮನ್ಮಥರಿಬ್ಬರೂ
ಪತಿ ಸೋಮೇಶನ ಕರುಣದಿ |
ಸಕಲನುಚರಾಚರೆಗೆವುಪ
ಸಮ ರತಿಯ ಗೂಡುತಾ ಸೌಖ್ಯದಿ ||೧೧||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಪುರುಷನ ಕುರಿತು
Next post ಗುಬ್ಬಾರೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys