ನಮ್ಮೂರ ಹೋಳಿ ಹಾಡು – ೯

ಕಾಮ ನೀನು ಧೂಮವಾದಿ
ಸೋಮನಾಥನ ಕಣ್ಣಿಗೆ
ಪ್ರೇಮದಾ ನುಡಿ ಏನು ಹೇಳಿದಿ
ಕಾಮಿನಿ ರತಿ ದೇವಿಗೆ

ನಿನ್ನ ಪೋಲುವೆ ಪುರುಷರು
ಜಗದೊಳಿನ್ನೂ
ಹುಟ್ಯಾರೆಂದಿಗೆ?
ನನ್ನ ಮುತ್ತೈದೆ ತನಕೆ
ಭಂಗ ತಂದ್ಯಾ ಇಂದಿಗೆ ||೧||

ಮಾರ ನಿನ್ನ ರೂಪ ನೋಡಿ
ಸೈರಿಸದೀ ಅಮರ್‍ಯಾರೋ
ದೂರಿ ಎಲ್ಲರೂ
ಶಿವನ ಕಣ್ಣಿಗೆ ಮಾರುಗೊಟ್ಟ
ಪಾಪತ್ಮರೂ ||೨||

ಸ್ಮರನೆ ನಿನ್ನಯ ಮನಕೆ
ತಾರಕನುಪದ್ರವ ಕೊಟ್ಟನೆ
ಹರಿವಿರಂಚಿಯೂ
ಗುರುಬೃಹಸ್ಪತಿ
ಕರೆದು ಪೇಳಿದರ್‍ಯೋಚನೆ ||೩||

ಮೋಸದಿಂದಲಿ
ಭಾಷೆಗೊಂಡರು
ಈಸನಗ್ನಿಗಣ್ಣಿಗೆ ನಾಶಗೈದನು
ಗುರುವರನು ಬಹು
ದೊರೆಯಾದನು ಭೂಮಿಗೆ ||೪||

ಕಡು ಚೆಲುವ ಕಂದರ್ಪ
ನಿನ್ನಯ ಮಡದಿ ರತಿಯಳ ದುಃಖವಾ
ಬಿಡುವಳೋ ಸೈ
ಗಡಗಡ ನೇ ತಾ
ಹುಡಿಯೊಳಗೆ ಹೊರಳಾಡುತಾ ||೫||

ಮಾರ ಬಾಣಕೆ ಮನು – ಮುನ್ಯಾದಿಯ
ದಾರಿ ತಪ್ಪಿಸಿ ಮುತ್ತಿದೆ|
ಮೂರು ಲೋಕದಿ ನಿನ್ನ
ಮಿಕ್ಕುವರಾರು
ಕದನದೊಳಿಂದಿಗೆ ||೬||

ಭೂಮಿಯೊಳುತ್ಪತ್ಯವೆಂಬುದು
ಕಾಮ ನಿನ್ನಿಂದಲ್ಲದೇ!
ನೀ ಮರಣ ಹೊಂದಿದರೆ
ಜಗತ್ರಯ ತಾ
ಮುಳಿಗಿ ಹೋಯಿತಲ್ಲದೆ ||೭||

ಕ್ಷಿತಿಯೊಳಗೆ ಪತಿವ್ರತಾ
ಶಿರೋಮಣಿಯಾ|
ರತಿ ಎಂಬ ಚೆಲುವೆಯಾ
ಪತಿವಳಿದ ರಂಡೆತನವ ವಹಿಸಿ
ಕ್ಷಿತಿಗೆಯಾದಳು ಪಾಪಿಯಾ ||೮||

ಕಾಲಕಾಲಾಂತರದಿ ರತಿಯಾ
ತಾಳಿಕರಿಮಣಿಯ ತೆಗೆಯದೆ
ಪಾಲನೇತ್ರನ ದಯದಿ
ಬಾಲೆ ನಿನ್ನನು ನೆನೆಲದೆ ||೯||

ನೆನಪಿದಾಕ್ಷಣ ಮನಸಿಜನು ಎಂದೆನೆಸಿ
ರತಿಯಳ ಪಾಲಿಸೋ|
ತನು ಕಳೆದರೂ ಮನದಿಗೂಡಿ
ಜೀವ ಜಗತ್ರಯವನು ಪಾಲಿಸೋ ||೧೦||

ಕ್ಷಿತಿಗೆ ರತಿ ಮನ್ಮಥರಿಬ್ಬರೂ
ಪತಿ ಸೋಮೇಶನ ಕರುಣದಿ |
ಸಕಲನುಚರಾಚರೆಗೆವುಪ
ಸಮ ರತಿಯ ಗೂಡುತಾ ಸೌಖ್ಯದಿ ||೧೧||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಪುರುಷನ ಕುರಿತು
Next post ಗುಬ್ಬಾರೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys