Home / ಕವನ / ಜನಪದ / ನಮ್ಮೂರ ಹೋಳಿ ಹಾಡು – ೯

ನಮ್ಮೂರ ಹೋಳಿ ಹಾಡು – ೯

ಕಾಮ ನೀನು ಧೂಮವಾದಿ
ಸೋಮನಾಥನ ಕಣ್ಣಿಗೆ
ಪ್ರೇಮದಾ ನುಡಿ ಏನು ಹೇಳಿದಿ
ಕಾಮಿನಿ ರತಿ ದೇವಿಗೆ

ನಿನ್ನ ಪೋಲುವೆ ಪುರುಷರು
ಜಗದೊಳಿನ್ನೂ
ಹುಟ್ಯಾರೆಂದಿಗೆ?
ನನ್ನ ಮುತ್ತೈದೆ ತನಕೆ
ಭಂಗ ತಂದ್ಯಾ ಇಂದಿಗೆ ||೧||

ಮಾರ ನಿನ್ನ ರೂಪ ನೋಡಿ
ಸೈರಿಸದೀ ಅಮರ್‍ಯಾರೋ
ದೂರಿ ಎಲ್ಲರೂ
ಶಿವನ ಕಣ್ಣಿಗೆ ಮಾರುಗೊಟ್ಟ
ಪಾಪತ್ಮರೂ ||೨||

ಸ್ಮರನೆ ನಿನ್ನಯ ಮನಕೆ
ತಾರಕನುಪದ್ರವ ಕೊಟ್ಟನೆ
ಹರಿವಿರಂಚಿಯೂ
ಗುರುಬೃಹಸ್ಪತಿ
ಕರೆದು ಪೇಳಿದರ್‍ಯೋಚನೆ ||೩||

ಮೋಸದಿಂದಲಿ
ಭಾಷೆಗೊಂಡರು
ಈಸನಗ್ನಿಗಣ್ಣಿಗೆ ನಾಶಗೈದನು
ಗುರುವರನು ಬಹು
ದೊರೆಯಾದನು ಭೂಮಿಗೆ ||೪||

ಕಡು ಚೆಲುವ ಕಂದರ್ಪ
ನಿನ್ನಯ ಮಡದಿ ರತಿಯಳ ದುಃಖವಾ
ಬಿಡುವಳೋ ಸೈ
ಗಡಗಡ ನೇ ತಾ
ಹುಡಿಯೊಳಗೆ ಹೊರಳಾಡುತಾ ||೫||

ಮಾರ ಬಾಣಕೆ ಮನು – ಮುನ್ಯಾದಿಯ
ದಾರಿ ತಪ್ಪಿಸಿ ಮುತ್ತಿದೆ|
ಮೂರು ಲೋಕದಿ ನಿನ್ನ
ಮಿಕ್ಕುವರಾರು
ಕದನದೊಳಿಂದಿಗೆ ||೬||

ಭೂಮಿಯೊಳುತ್ಪತ್ಯವೆಂಬುದು
ಕಾಮ ನಿನ್ನಿಂದಲ್ಲದೇ!
ನೀ ಮರಣ ಹೊಂದಿದರೆ
ಜಗತ್ರಯ ತಾ
ಮುಳಿಗಿ ಹೋಯಿತಲ್ಲದೆ ||೭||

ಕ್ಷಿತಿಯೊಳಗೆ ಪತಿವ್ರತಾ
ಶಿರೋಮಣಿಯಾ|
ರತಿ ಎಂಬ ಚೆಲುವೆಯಾ
ಪತಿವಳಿದ ರಂಡೆತನವ ವಹಿಸಿ
ಕ್ಷಿತಿಗೆಯಾದಳು ಪಾಪಿಯಾ ||೮||

ಕಾಲಕಾಲಾಂತರದಿ ರತಿಯಾ
ತಾಳಿಕರಿಮಣಿಯ ತೆಗೆಯದೆ
ಪಾಲನೇತ್ರನ ದಯದಿ
ಬಾಲೆ ನಿನ್ನನು ನೆನೆಲದೆ ||೯||

ನೆನಪಿದಾಕ್ಷಣ ಮನಸಿಜನು ಎಂದೆನೆಸಿ
ರತಿಯಳ ಪಾಲಿಸೋ|
ತನು ಕಳೆದರೂ ಮನದಿಗೂಡಿ
ಜೀವ ಜಗತ್ರಯವನು ಪಾಲಿಸೋ ||೧೦||

ಕ್ಷಿತಿಗೆ ರತಿ ಮನ್ಮಥರಿಬ್ಬರೂ
ಪತಿ ಸೋಮೇಶನ ಕರುಣದಿ |
ಸಕಲನುಚರಾಚರೆಗೆವುಪ
ಸಮ ರತಿಯ ಗೂಡುತಾ ಸೌಖ್ಯದಿ ||೧೧||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...