ನಮ್ಮೂರ ಹೋಳಿ ಹಾಡು – ೯

ಕಾಮ ನೀನು ಧೂಮವಾದಿ
ಸೋಮನಾಥನ ಕಣ್ಣಿಗೆ
ಪ್ರೇಮದಾ ನುಡಿ ಏನು ಹೇಳಿದಿ
ಕಾಮಿನಿ ರತಿ ದೇವಿಗೆ

ನಿನ್ನ ಪೋಲುವೆ ಪುರುಷರು
ಜಗದೊಳಿನ್ನೂ
ಹುಟ್ಯಾರೆಂದಿಗೆ?
ನನ್ನ ಮುತ್ತೈದೆ ತನಕೆ
ಭಂಗ ತಂದ್ಯಾ ಇಂದಿಗೆ ||೧||

ಮಾರ ನಿನ್ನ ರೂಪ ನೋಡಿ
ಸೈರಿಸದೀ ಅಮರ್‍ಯಾರೋ
ದೂರಿ ಎಲ್ಲರೂ
ಶಿವನ ಕಣ್ಣಿಗೆ ಮಾರುಗೊಟ್ಟ
ಪಾಪತ್ಮರೂ ||೨||

ಸ್ಮರನೆ ನಿನ್ನಯ ಮನಕೆ
ತಾರಕನುಪದ್ರವ ಕೊಟ್ಟನೆ
ಹರಿವಿರಂಚಿಯೂ
ಗುರುಬೃಹಸ್ಪತಿ
ಕರೆದು ಪೇಳಿದರ್‍ಯೋಚನೆ ||೩||

ಮೋಸದಿಂದಲಿ
ಭಾಷೆಗೊಂಡರು
ಈಸನಗ್ನಿಗಣ್ಣಿಗೆ ನಾಶಗೈದನು
ಗುರುವರನು ಬಹು
ದೊರೆಯಾದನು ಭೂಮಿಗೆ ||೪||

ಕಡು ಚೆಲುವ ಕಂದರ್ಪ
ನಿನ್ನಯ ಮಡದಿ ರತಿಯಳ ದುಃಖವಾ
ಬಿಡುವಳೋ ಸೈ
ಗಡಗಡ ನೇ ತಾ
ಹುಡಿಯೊಳಗೆ ಹೊರಳಾಡುತಾ ||೫||

ಮಾರ ಬಾಣಕೆ ಮನು – ಮುನ್ಯಾದಿಯ
ದಾರಿ ತಪ್ಪಿಸಿ ಮುತ್ತಿದೆ|
ಮೂರು ಲೋಕದಿ ನಿನ್ನ
ಮಿಕ್ಕುವರಾರು
ಕದನದೊಳಿಂದಿಗೆ ||೬||

ಭೂಮಿಯೊಳುತ್ಪತ್ಯವೆಂಬುದು
ಕಾಮ ನಿನ್ನಿಂದಲ್ಲದೇ!
ನೀ ಮರಣ ಹೊಂದಿದರೆ
ಜಗತ್ರಯ ತಾ
ಮುಳಿಗಿ ಹೋಯಿತಲ್ಲದೆ ||೭||

ಕ್ಷಿತಿಯೊಳಗೆ ಪತಿವ್ರತಾ
ಶಿರೋಮಣಿಯಾ|
ರತಿ ಎಂಬ ಚೆಲುವೆಯಾ
ಪತಿವಳಿದ ರಂಡೆತನವ ವಹಿಸಿ
ಕ್ಷಿತಿಗೆಯಾದಳು ಪಾಪಿಯಾ ||೮||

ಕಾಲಕಾಲಾಂತರದಿ ರತಿಯಾ
ತಾಳಿಕರಿಮಣಿಯ ತೆಗೆಯದೆ
ಪಾಲನೇತ್ರನ ದಯದಿ
ಬಾಲೆ ನಿನ್ನನು ನೆನೆಲದೆ ||೯||

ನೆನಪಿದಾಕ್ಷಣ ಮನಸಿಜನು ಎಂದೆನೆಸಿ
ರತಿಯಳ ಪಾಲಿಸೋ|
ತನು ಕಳೆದರೂ ಮನದಿಗೂಡಿ
ಜೀವ ಜಗತ್ರಯವನು ಪಾಲಿಸೋ ||೧೦||

ಕ್ಷಿತಿಗೆ ರತಿ ಮನ್ಮಥರಿಬ್ಬರೂ
ಪತಿ ಸೋಮೇಶನ ಕರುಣದಿ |
ಸಕಲನುಚರಾಚರೆಗೆವುಪ
ಸಮ ರತಿಯ ಗೂಡುತಾ ಸೌಖ್ಯದಿ ||೧೧||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಪುರುಷನ ಕುರಿತು
Next post ಗುಬ್ಬಾರೆ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…