Home / ಕವನ / ಕವಿತೆ / ಕಾಲಪುರುಷನ ಕುರಿತು

ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು?
ಬಾರಯ್ಯ ಬಾ!! ಶಕಪುರುಷ…
ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?!
ಈ ನಿನ್ನ ಬರುವಿಕೆಯಲ್ಲಿ?!
ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ!
*

ಬರುವೆ! ಬಂದೇ ಬರುವೆ!!  ಸಂಕ್ರಮಣ ರಾಮ, ನೀ ಚೆನ್ನಿಗರಾಮನಲ್ಲವೇ?
ವರ್ಷ ವರ್ಷ… ಅದೆಂಥಾ ಹರ್ಷವಯ್ಯ ನಿನಗೆ??
ನೀ ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಹುಲಿ, ಸಿಂಹನೇರಿ
ಬರುವೆಯಲ್ಲಯ್ಯಾ?!
ನೀ ಸಾಮನ್ಯನೇನಯ್ಯ?! ಏನನೇರಿ ಬಂದರೂ, ಕುಸ್ತಿ ಒಗೆವೆನಲ್ಲಯ್ಯ?!
*

ನೀ ಬರುವ ಹಾದಿಲಿ: ಕೊಲೆಂಟು, ಸುಲಿಗೆವುಂಟು, ರಕ್ತರಂಜಿತ,
ವರ್ಣರಂಜಿತ, ವಿನಾ ಕಾರಣ ಅವಮಾನ, ಅಪಮಾನವುಂಟು!
ಯುದ್ಧ ಘೋಷಿತ, ಸುನಾಮಿ, ಲೈಲಾ, ಗುಡುಗು, ಸಿಡಿಲು,
ಅಬ್ಬಬ್ಬಾ… ವಿಮಾನ, ಅಗ್ನಿದುರಂತ, ತೈಲ ಸೋರಿಕೆ…
ಎನೆಲ್ಲ ಉಬ್ಬರವಿಳಿತ! ಬರೀ ವಿಭ್ರಮ ಭ್ರಮರಿ ವಿದ್ವುಂಸ ಕುಕೃತ್ಯಗಳೇನು?!
*

ದೇಶದಾ ಉದ್ದಗಲಕೂ ಏನೆಲ್ಲ ಲೇಲೆ, ಹಳವಂಡಗಳಯ್ಯ??
ಎಳೆ ಗರ್ಭಗಳ ಅರಾತುರಿ ಸೀಳಿದ ಖೂಳ ರಕ್ಕಸ ನೀಽ…
ಕಟ್ಟೆಯೊಡೆದು, ಸುದರ್ಶನ ಚಕ್ರವಿಡಿದು ಝೇಂಕರಿಸುತ್ತಾ
ರಾಹು ಮಂಡಲಗಳ ದಾಟಿ, ವೃತ್ತಾಕಾರದಲಿ ನೀ ಬಾರಯ್ಯ! ಬಾ…
*

ಎನು ನಿನ್ನ ಲೀಲೆಯೋ? ಮಾಯೆಯೋ ಜನನ… ಮರಣವೋ?
ನಾಳೆ ನಾಡಿದ್ದು ನಿನ್ನೆ ಮೊನ್ನೆಗಳ ಎಡತಾಕಿಸುತ್ತಾ
ಸ್ಥಾವರ ಜಂಗಮ, ಸಂಗಮಗಳ ಜಪಿ ಜಪಿಸುತ್ತಾ
ಕಂಪ್ಯೂಟರ್‍, ಟೀವಿ, ಇಂಟರ್‌ನೆಟ್, ಐಟಿ, ಬಿಟಿಗಳಲ್ಲಿ ನಿನ್ನ ಜಾಲವೋ…
*

ಸೆಲ್‌ಪೋನಿಂದಲೇ ಗದೆ ಬಿಟ್ಟು, ಬಾಣತೊಟ್ಟು, ಮಕ್ಕಳ್ಹೆರುವ
ಸಹಸ್ತ್ರ ಪುರುಷ ಬಾರಯ್ಯ! ಬಾ…! ನವ ಶತಮಾನದ ತೇಜಾಽ…
ಯೇನೆಲ್ಲ ಅವತಾರ, ಲೇಲೆ, ವಿನೋದ, ಭೀಕರವಯ್ಯ?!
ಸುಮ್ಮನಿರೆ ಉಂಡಬಾನ, ಕುಡಿದ ನೀರು ಪಥ್ಯವಾಗದೇನಯ್ಯ?!
*

ಅಯ್ಯ ದುರುಳ ದುರ್‍ಯೋಧನ, ದುಶ್ಯಾಸನ, ಶಕುನಿ, ಕಂಸ, ಕೀಚಕ,
ರಾವಣ, ಕೊಂಡಿಮಂಚಣ್ಣ, ಮಲ್ಲಪ್ಪಶೆಟ್ಟಿ, ಮೀರ್‌ಸಾಧಿಕ್…
ಕುಂಭಕರ್ಣ, ಸೂರ್ಪನಖಿ, ಮಂಥೆರೆ, ಮಂಡೋದರಿ, ಅಹಲ್ಯೆರೆಲ್ಲ
ಅರಮನೆ, ಸೆರೆಮನೆಯೊಳಗಿಲ್ಲ!
ಮನೆ, ಮನಗಳಲ್ಲಿ, ರಕ್ತಾ ಬೀಜಾಸುರರಾಗಿ, ಮೃತ್ಯುಂಜಯರಾಗಿ
ವಿಜೃಂಭಿಸಿಹರಲ್ಲ?!
ನಿನ್ನ ಆಗಮನ, ನಿರ್ಗಮನ ಮಾತ್ರ ಎದ್ದು ಕಾಣುವುದು!
*

ಅಯ್ಯೋ ಕಗ್ಗತ್ತಲೆ ತುಂಬಿ ತುಳುಕಿ, ಹಗಲೇ ಕೊಲೆ, ಸುಲಿಗೆ, ದರೋಡೆ,
ಮಾನಭಂಗವೇ?? ಶಾಸಕರ ಕತ್ತೆ, ಕುದುರೆ ವ್ಯಾಪಾರವೇ…
ಕಾಲಪುರುಷನ ಹೆಸರಲಿ, ಸಾಲೆ, ಕುತ್ತೆ, ಗದ್ದುಗೆ ಹಿಡಿದು, ಗುದ್ದಾಟ
ನಡೆಸಿಹರಲ್ಲ?! ವಿಶ್ವಾಸ ಮತಕೆ ಷಡ್ಯಂತ್ರ ಬಳಸಿಹರಲ್ಲ…
ಉದ್ಧಾರ, ಪ್ರಗತಿ, ಸುಧಾರಣೆ, ಸಹಾಯ ಹಸ್ತ, ಬರೀ ಕನವರಿಕೆಗಳೇ ಆದವಲ್ಲಾ…
ಬುದ್ಧ, ಬಸವ, ಅಂಬೇಡ್ಕರ್‍, ಮದರ್‍ ತೆರೀಸಾರಂಥವ್ರಿನ್ನು ಬರಲಿಲ್ಲ ಯಾಕೆ??
*

ಈ ನಿನ್ನ ಆಗಮನಕೆ, ತಳಿರು ತೋರಣಕಟ್ಟಿ,
ರಾತ್ರಿಯೆಲ್ಲ ಕುಡಿದು, ಕುಣಿದು, ಕುಪ್ಪಳಿಸಿ,
ಸಿಡಿಮದ್ದು ಸಿಡಿಸುವುದೂ ವ್ಯರ್ಥ…
ಇದು ಹೀನ ಸಂಸ್ಕೃತಿಯಲ್ಲದೆ ಇನ್ನೇನು?
ನೀ ಬಂದು ಕಿಸುದು ಗುಡ್ಡೆ ಹಾಕಿದ್ದಾರೂ ಇನ್ನೇನು?!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...