ನೋವಿಗೆ ಸಾವಿಗೆ ಆಯಾಸಪಡಬ್ಯಾಡ
ದೇವಗಂಗಾಧರ ಭಾವದೊಳಿರಲು ||೧||

ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ
ದಿನ ಬಳಲ್ವದು ಇದು ಏನು ||೨||

ವಸುಧಿಯೊಳು ಶಿಶುನಾಳಧೀಶನ
ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ ||೩||

*****