ಒಳಗೆ ಇಳಿದು ಬಾ

ಒಳಗೆ ಇಳಿದು ಬಾ ಇಳಿಯುವಂತೆ ನೀ
ಮಳೆಯು ಮಣ್ಣ ತಳಕೆ

ಕೆಸರ ಮಡಿಲಿಂದ ಕೆಂಪನೆ ಕಮಲವ
ಮೇಲೆತ್ತುವ ಘನವೇ
ಹೂವಿನ ಎದೆಯಲಿ ಬಗೆಬಗೆ ಪರಿಮಳ
ಬಿತ್ತುವಂಥ ಮನವೇ
ನಿಂತ ಗಿರಿಗಳಿಗೆ ನಡೆಯುವ ನದಿಗಳ
ಕರುಣಿಸುವಾ ಒಲವೇ
ಆನೆ ಅಳಿಲುಗಳ ಅಂತರವೆಣಿಸದೆ
ತಾಳುವಂಥ ನೆಲವೇ

ಸೂರ್ಯಚಂದ್ರರನು ಸರದಿ ಕಾವಲಿಗೆ
ನೇಮಿಸಿದಾ ಧಣಿಯೇ
ನೀಲಿನಭದಲ್ಲಿ ನಿತ್ಯವು ಜ್ವಲಿಸುವ
ನಕ್ಷತ್ರದ ಗಣಿಯೇ
ಗಾಳಿಯ ಕರೆಸಿ ಮೋಡದ ಮುಚ್ಚಳ
ತೆರೆದು ಸರಿವ ಕರವೇ
ಬಾನಿನ ತುಂಬ ಬೆಳಕಿನ ಕವಿತೆಯ
ಹಾಡುವಂಥ ಕೊರಳೇ!

ತರ್ಕಬುದ್ಧಿಗಳ ಬಲೆಯ ಜಾಲಕ್ಕೆ
ಸಿಕ್ಕದ ಧೋರಣೆಯೇ
ಭಾವನೆಯಲ್ಲಿ ಮಿಂಚಿ ಮೈದೋರಿ
ಹರಿಯುವ ಪ್ರೇರಣೆಯೇ
ವಿಶ್ಚಕ್ಕೇ ಪ್ರಭುವಾಗಿಯು ಪೀಠವ
ಬಯಸದಂಥ ನಿಲುವೇ
ಸ್ನೇಹ ಕರುಣೆ ವಾತ್ಸಲ್ಯ ಗಂಗೆಗೆ
ತವರೆನಿಸಿದ ಒಲವೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೧
Next post ಹೊಸ ಸೂರ್ಯನುದಯಕೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys