ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ
ಕಾಮಾಂಧರ ನರ್ತನ
ತಾಯೆ ನಿನ್ನ ಒಡಲ ಮೇಲೆ
ನಿತ್ಯ ರಕ್ತ ತರ್ಪಣ
ಅರಳಲಿಲ್ಲಿ ತಾವು ಎಲ್ಲಿ
ಫಲಪುಷ್ಪದ ನಂದನ?

ಅತ್ತು ಅತ್ತು ಸತ್ತ ಭ್ರೂಣ
ಬಿಕ್ಕಿ ಬಿಕ್ಕಿ ಅತ್ತ ’ಬಾನು’
ಜೀವ ಜೀವದಾರ್ತನಾದ
ಕಾಣಲಿಲ್ಲ ಕುರುಡು ಜನಕೆ
ಕೇಳಲಿಲ್ಲ ಕಿವುಡು ಮನಕೆ

ಖಾಕಿಬೂಟಿನಟ್ಪಹಾಸ
ಖಾದಿ ಖದರ ಜಯದ ಘೋಷ
ಹಾಡುಹಗಲೆ ಮೃತ್ಯುಪಾಶ
ಹೆಣ್ಣೆ ನಿನಗೆ ಜೀವಶಿಕ್ಷೆ
ಹೆಜ್ಜೆ ಹೆಜ್ಜೆಗಿರಲು ಎಲ್ಲಿರಕ್ಷೆ?

ಹಿಂದು ಮುಸ್ಲಿಂ ಹೆಸರಿನಲ್ಲಿ
‘ಬಲ್ಕೀಸ’ಳಾ ಉಸಿರು ಎಲ್ಲಿ
ಅಂಧ ಮತಕೆ ಬಂಧವೆಲ್ಲಿ
ತಂದೆ ತಾಯಿ ಬಂಧುವೆಲ್ಲಿ
ಎಲ್ಲಿ ಎಲ್ಲಿ ಎಲ್ಲೆ ಎಲ್ಲಿ
ಉರಿಯ ಸುರಿವ ಜ್ವಾಲೆಗೆ?

ಪ್ರೇತದಂತೆ ನರ್ತನ
ಭೂತದಂತೆ ಕೀರ್ತನ
ಹೆಣ್ಣ ದಾಹ ಹೊನ್ನ ದಾಹ ಮಣ್ಣ ದಾಹ
ದಾಹ ದಾಹ ದಾಹ ದಾಹ…
ದಾಸನಾಗಿ ಮರೆತೆಯಲ್ಲೋ
ಮನುಜನೆಂಬುದ

ಕಮರಿಹೋಯ್ತೆ ಮೊಗ್ಗೆ ನಿನ್ನ
ಹೂವಾಗುವ ಕನಸು?
ಕಸವಾಯಿತೆ ಕಾಲಡಿಯಲ್ಲಿ
ಕಂದ ನಿನ್ನ ಮನಸು?
ಕಣ್ಣು ತೆಗೆವ ಮುನ್ನ ಕೊಂದರಲ್ಲ ನಿನ್ನ
ಥೂ… ಎಂಥ ಹೊಲಸು

ಅಲ್ಲಿ ’ಬಾನು’ ಇಲ್ಲಿ ನಾನು
ನಿತ್ಯ ನರಕಯಾತನೆ
ಎಲ್ಲೆ ಇರಲಿ ಹೇಗೆ ಇರಲಿ
ತಪ್ಪಲಿಲ್ಲ ಯೋಚನೆ
ಹೆಣ್ಣಿಗಿರುವ ಸ್ವಾತಂತ್ರ್ಯ
ಬರಿಯ ಹುಚ್ಚು ಕಲ್ಪನೆ

ತಾಯಿ ತಂಗಿ ಮಾತೃದೈವ
ಎನುವದೆಲ್ಲ ಬೊಗಳೆ
ಸಂತೈಸಲಿ ಹೇಗೆ ಮಗಳೆ
ಇರಲು ದಿನವೂ ರಗಳೆ?
ನಿನ್ನ ನೋವು ನಿನ್ನ ಸಾವು
ತಿಳಿವುದೆಂತು ತಾಯ್ಗಂಡರ ಎದೆಗೆ?

ನ್ಯಾಯವಿಲ್ಲಿ ಕಣ್ಣು ಕುರುಡು
ಕೂಗಿಗಿಲ್ಲಿ ಕಿವಿಯೆ ಕೊರಡು
ಹೃದಯವದು ಬರಿದೆ ಬರಡು
ಇರುವ ಜನರ ಮಾತಿಗಿಲ್ಲ ಎರಡು
ಎನಿತು ಕಾಲ ನೂಕಬೇಕೋ
ನಾಕ ಬೆಳಗಲು?

ನೋವಿಗಿಲ್ಲ ಜಾತಿ ಧರ್ಮ
ಜೀವಕೇಕೆ ಮತದ ಕರ್ಮ
ಬಸವ ಬುದ್ಧ ಏಸು ಬಿದ್ದ
ರಾಮ ರಹಿಮ ಎಲ್ಲಿ ಗೆದ್ದ?
ಕಡಿ ಬಡಿ ಮಂತ್ರವಾಯ್ತೆ ಭಾರತಾಂಬೆಗೆ?
*
ಕಾಯತಿರುವೆ ಕಣ್ಣು ತೆರೆದು
ಹೊಸ ಸೂರ್ಯನ ಉದಯಕೆ!

(ಬಲ್ಕಿಶ್ ಬಾನು ಹೃದಯ ವಿದ್ರಾವಕ ಸಾವಿನ ನೋವಿನಲಿ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳಗೆ ಇಳಿದು ಬಾ
Next post ಕರ್ಮಯೋಗಿ ಗಾಂಧೀಜಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys