ಮನಸ್ಸಿದ್ದಲ್ಲಿ ಮರುಭೂಮಿ

ಕೆಲವೊಮ್ಮೆ ನಾನು ಭಾವಿಸುವೆನು
ಮರುಭೂಮಿಯೊಂದನು ಅದರೊಳಗೆ
ಸರೋವರವೊಂದ ನಿರ್ಮಿಸುವೆನು
ನೋಡಿದರೆ ನೀರು ಕನ್ನಡಿಯಷ್ಟು ನಿರಾಳ
ಅಲ್ಲಿ ಆಕಾಶಕ್ಕೆ ಎತ್ತರದಷ್ಟೆ ಆಳ

ಆಚೀಚೆ ಕಣ್ಣಳತೆಯುದ್ದಕೂ ಬರಿ ಮಳಲು
ದಿನದಿನವು ಬದಲಾಗುತ್ತ ನಿನ್ನೆ ನೋಡಿದ್ದು
ಇಂದು ಕಾಣಿಸದೆ ಇಂದಿರದಲ್ಲಿ ನಾಳೆ
ಮೂಡುತ್ತ-ಇಷ್ಟೊಂದು ಮಳಲ ಹಾದು
ಅಸಾಧ್ಯ ಯಾರೂ ನನ್ನ ಹುಡುಕುವುದು

ಹೀಗೆಂದು ಡೇರೆಯನೂರಿ ಹೊರಗಿಳಿದು
ತಾಳೆಬಾಳೆಗಳ ನಡುವೆ ಓಡಾಡಿ ಅಹಹಾ ಎಂದು
ರಾತ್ರಿಯಾಗುತ್ತಲೇ ಬೆಂಕಿ ಕಾಯಿಸುತ ಕುಳಿತರೆ
ಎಲಲ! ಕುಳಿತಿದ್ದಾರೆ ಅನೇಕ ಮಂದಿ ಸುತ್ತ
ನನಗಿಂತ ಹಿಂದೆಯೇ ಬಂದವರು ಇತ್ತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮರ ಕಲಾವಿದ ಸಪ್ದರ
Next post ಬದುಕು ಚಿಗುರುವುದೆಂದರೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…