ಬದುಕು ಚಿಗುರುವುದೆಂದರೆ

ನನ್ನ ನಾ ನಿನ್ನ ನೀ
ತಿಳಿದುಕೊಳ್ಳುವುದು.
ನನ್ನೊಳಗೆ ನೀ ನಿನ್ನೊಳಗೆ ನಾ
ಬೆಳಕಾಗುವುದು

ಒಳಮೈ ಹೊರಮೈ ಕಾಯಿಸಿಕೊಳ್ಳುವುದು
ಕಿರಣಕ್ಕೊಡ್ಡಿ ಮನಸ್ಸನ್ನು
ದುಡಿಸಿಕೊಳ್ಳುವುದು
ಹಸಿರ ಮತ್ತೆ ಮತ್ತೆ
ಮೆದ್ದು ಮುದಗೊಳ್ಳುವುದು

ಬೆಳಕ ಆಸರೆಗಾಗಿ ಕನಸ ಕಟ್ಟುವುದು
ನೀರ ಮೇಲಿನ ನಡೆಗೂ
ಗುರಿಯ ಇಡುವುದು

ಬೇಲಿ ಗೂಟಕ್ಕೆ ಹಬ್ಬಿದ ಬಳ್ಳಿ
ಗೂಟ ಗೂಟವ ದಾಟಿ ಬೇಲಿಯನ್ನೆ
ಹಸಿರ ಕೋಣೆಯಾಗಿಸಿ
ಅಲಂಕರಿಸುವುದು
ಆಳಕ್ಕೆ ಇಳಿದಿಳಿದು ದೃಢವಾಗುವುದು

ಮನೆ ಹಣತೆಯ ಬೆಳಗಿಸಿಕೊಳ್ಳುವುದು.
ಬತ್ತಿಯ ಮತ್ತೆ ಮತ್ತೆ ಹೊಸೆದು
ಹೊರಗಣ ಹಣತೆಗೂ ತೈಲವನ್ನೆರೆಯುವುದು.
ಬೆಳಕನ್ನೆ ಹೊದ್ದುಕೊಳ್ಳುವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸ್ಸಿದ್ದಲ್ಲಿ ಮರುಭೂಮಿ
Next post ಹತ್ತಿ… ಚಿತ್ತ… ಮತ್ತು…

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…