Home / ಕವನ / ಕವಿತೆ / ಹತ್ತಿ… ಚಿತ್ತ… ಮತ್ತು…

ಹತ್ತಿ… ಚಿತ್ತ… ಮತ್ತು…

ಹಚ್ಚಿಟ್ಟ ಹಣತೆಯಲ್ಲಿ
ಹೊಸೆದು ಬತ್ತಿಯಾಗಿರುವ ಹತ್ತಿ
ಮಿಂದು ಮಡಿಯುಟ್ಟ ಭಕ್ತನಂತೆ
ತೈಲದಲ್ಲಿ ಮುಳುಗಿ
ತಮದ ಕತ್ತಲ ಸುಡುತ
ಬೆಳಕ ಬಟ್ಟೆಯ ತೊಡುವ
ಯೋಗಿಯಂತೆ!
ತನ್ನೊಡಲ ನೂಲಿನಲೇ ಜೇಡ
ತನ್ನ ಜೀವಜಾಲದ ಕೇಡ
ತಾನೇ ಬಗೆದು ಪ್ರಾಣ ನೀಗುವಂತೆ

ಹತ್ತಿಯ ಬೀಜದಂತೆ
ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ
ಬತ್ತಿಯನೇ ಸುಡುವ
ತೈಲವೂ ಆಗಿ
ಹೊತ್ತಿ ಉರಿಯುವ
ಬೆಳಕೂ ಆಗಿ
ಮಾಗುವ ಜೀವದ ಪಯಣ
ಸಾಗುತ್ತಿದೆ ಜಗದೊಳು ಸದ್ದಿಲ್ಲದೆ

ಇದ್ದುದಿದೇ ಇತ್ತು
ನಿದ್ದೆ ತಿಳಿದೆದ್ದ ಮಗು
ಅತ್ತದ್ದು ಹಾಲಿಗೋ ಅಮ್ಮನಿಗೋ
ಅಮ್ಮನಿದ್ದೂ ಬಾಟಲಿನ ಹಾಗಲಿಗೆ
ಬಾಯೊಡ್ಡುವ ಮಗುವ
ಅನಾಥವೆಂದು ಕರೆಯಲಾಗದ ಭಾವ
ಇದ್ದೂ ಇಲ್ಲದಂತೆ ಸಂತೈಸುತ್ತಿದೆ ಇನ್ನೂ.

ತೈಲ ತೀರಿದೆಯೆಂದು
ತಿಳಿದೇ ತಿಳಿದೀತು
ದೀಪ ಆರಿದ ಮೇಲೆ
ಆತ್ಮಕ್ಕೆ ಕಮಟು ಹತ್ತುವ ತನಕ
ಬತ್ತಿ ಮುಗಿದಿದೆ ಎಂದು
ತಿಳಿವುದಾದರೂ ಹೇಗೆ?

ಎಣ್ಣೆ ತೀರಿರುವ ದೀಪಗಳಿಗೆ
ಬತ್ತಿ ಹೊಸೆಯುವ ಕೆಲಸ
ವ್ಯರ್‍ಥವೇನಲ್ಲ
ಹತ್ತಿಗೆ ಮೆತ್ತಿಕೊಂಡೇ
ಇರುವ ಬೀಜಕ್ಕೆ
ಬೆಣ್ಣೆಯಾಗುವ ಕರ್‍ಮ ತಪ್ಪಿದ್ದಲ್ಲ
ತಪ್ಪೂ ಅಲ್ಲ!

ಹತ್ತಿ ಬತ್ತಿಯಾಗಿ
ಬೆಳಕಿನ ಬಿತ್ತವಾಗಿ
ತೈಲವಾಗುರಿದು ಇಲ್ಲವಾಗುವ
ಆತ್ಮಪರಿನಿರ್‍ವಾಣದ
ಈ ಪರಿಯ ಸೊಬಗ
ಇನ್ನಾಗ ಜೀವದೊಳು
ಕಾಣಲರಿಯೇ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...