Home / ಕವನ / ಕವಿತೆ / ಹತ್ತಿ… ಚಿತ್ತ… ಮತ್ತು…

ಹತ್ತಿ… ಚಿತ್ತ… ಮತ್ತು…

ಹಚ್ಚಿಟ್ಟ ಹಣತೆಯಲ್ಲಿ
ಹೊಸೆದು ಬತ್ತಿಯಾಗಿರುವ ಹತ್ತಿ
ಮಿಂದು ಮಡಿಯುಟ್ಟ ಭಕ್ತನಂತೆ
ತೈಲದಲ್ಲಿ ಮುಳುಗಿ
ತಮದ ಕತ್ತಲ ಸುಡುತ
ಬೆಳಕ ಬಟ್ಟೆಯ ತೊಡುವ
ಯೋಗಿಯಂತೆ!
ತನ್ನೊಡಲ ನೂಲಿನಲೇ ಜೇಡ
ತನ್ನ ಜೀವಜಾಲದ ಕೇಡ
ತಾನೇ ಬಗೆದು ಪ್ರಾಣ ನೀಗುವಂತೆ

ಹತ್ತಿಯ ಬೀಜದಂತೆ
ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ
ಬತ್ತಿಯನೇ ಸುಡುವ
ತೈಲವೂ ಆಗಿ
ಹೊತ್ತಿ ಉರಿಯುವ
ಬೆಳಕೂ ಆಗಿ
ಮಾಗುವ ಜೀವದ ಪಯಣ
ಸಾಗುತ್ತಿದೆ ಜಗದೊಳು ಸದ್ದಿಲ್ಲದೆ

ಇದ್ದುದಿದೇ ಇತ್ತು
ನಿದ್ದೆ ತಿಳಿದೆದ್ದ ಮಗು
ಅತ್ತದ್ದು ಹಾಲಿಗೋ ಅಮ್ಮನಿಗೋ
ಅಮ್ಮನಿದ್ದೂ ಬಾಟಲಿನ ಹಾಗಲಿಗೆ
ಬಾಯೊಡ್ಡುವ ಮಗುವ
ಅನಾಥವೆಂದು ಕರೆಯಲಾಗದ ಭಾವ
ಇದ್ದೂ ಇಲ್ಲದಂತೆ ಸಂತೈಸುತ್ತಿದೆ ಇನ್ನೂ.

ತೈಲ ತೀರಿದೆಯೆಂದು
ತಿಳಿದೇ ತಿಳಿದೀತು
ದೀಪ ಆರಿದ ಮೇಲೆ
ಆತ್ಮಕ್ಕೆ ಕಮಟು ಹತ್ತುವ ತನಕ
ಬತ್ತಿ ಮುಗಿದಿದೆ ಎಂದು
ತಿಳಿವುದಾದರೂ ಹೇಗೆ?

ಎಣ್ಣೆ ತೀರಿರುವ ದೀಪಗಳಿಗೆ
ಬತ್ತಿ ಹೊಸೆಯುವ ಕೆಲಸ
ವ್ಯರ್‍ಥವೇನಲ್ಲ
ಹತ್ತಿಗೆ ಮೆತ್ತಿಕೊಂಡೇ
ಇರುವ ಬೀಜಕ್ಕೆ
ಬೆಣ್ಣೆಯಾಗುವ ಕರ್‍ಮ ತಪ್ಪಿದ್ದಲ್ಲ
ತಪ್ಪೂ ಅಲ್ಲ!

ಹತ್ತಿ ಬತ್ತಿಯಾಗಿ
ಬೆಳಕಿನ ಬಿತ್ತವಾಗಿ
ತೈಲವಾಗುರಿದು ಇಲ್ಲವಾಗುವ
ಆತ್ಮಪರಿನಿರ್‍ವಾಣದ
ಈ ಪರಿಯ ಸೊಬಗ
ಇನ್ನಾಗ ಜೀವದೊಳು
ಕಾಣಲರಿಯೇ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...