ಹತ್ತಿ… ಚಿತ್ತ… ಮತ್ತು…

ಹಚ್ಚಿಟ್ಟ ಹಣತೆಯಲ್ಲಿ
ಹೊಸೆದು ಬತ್ತಿಯಾಗಿರುವ ಹತ್ತಿ
ಮಿಂದು ಮಡಿಯುಟ್ಟ ಭಕ್ತನಂತೆ
ತೈಲದಲ್ಲಿ ಮುಳುಗಿ
ತಮದ ಕತ್ತಲ ಸುಡುತ
ಬೆಳಕ ಬಟ್ಟೆಯ ತೊಡುವ
ಯೋಗಿಯಂತೆ!
ತನ್ನೊಡಲ ನೂಲಿನಲೇ ಜೇಡ
ತನ್ನ ಜೀವಜಾಲದ ಕೇಡ
ತಾನೇ ಬಗೆದು ಪ್ರಾಣ ನೀಗುವಂತೆ

ಹತ್ತಿಯ ಬೀಜದಂತೆ
ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ
ಬತ್ತಿಯನೇ ಸುಡುವ
ತೈಲವೂ ಆಗಿ
ಹೊತ್ತಿ ಉರಿಯುವ
ಬೆಳಕೂ ಆಗಿ
ಮಾಗುವ ಜೀವದ ಪಯಣ
ಸಾಗುತ್ತಿದೆ ಜಗದೊಳು ಸದ್ದಿಲ್ಲದೆ

ಇದ್ದುದಿದೇ ಇತ್ತು
ನಿದ್ದೆ ತಿಳಿದೆದ್ದ ಮಗು
ಅತ್ತದ್ದು ಹಾಲಿಗೋ ಅಮ್ಮನಿಗೋ
ಅಮ್ಮನಿದ್ದೂ ಬಾಟಲಿನ ಹಾಗಲಿಗೆ
ಬಾಯೊಡ್ಡುವ ಮಗುವ
ಅನಾಥವೆಂದು ಕರೆಯಲಾಗದ ಭಾವ
ಇದ್ದೂ ಇಲ್ಲದಂತೆ ಸಂತೈಸುತ್ತಿದೆ ಇನ್ನೂ.

ತೈಲ ತೀರಿದೆಯೆಂದು
ತಿಳಿದೇ ತಿಳಿದೀತು
ದೀಪ ಆರಿದ ಮೇಲೆ
ಆತ್ಮಕ್ಕೆ ಕಮಟು ಹತ್ತುವ ತನಕ
ಬತ್ತಿ ಮುಗಿದಿದೆ ಎಂದು
ತಿಳಿವುದಾದರೂ ಹೇಗೆ?

ಎಣ್ಣೆ ತೀರಿರುವ ದೀಪಗಳಿಗೆ
ಬತ್ತಿ ಹೊಸೆಯುವ ಕೆಲಸ
ವ್ಯರ್‍ಥವೇನಲ್ಲ
ಹತ್ತಿಗೆ ಮೆತ್ತಿಕೊಂಡೇ
ಇರುವ ಬೀಜಕ್ಕೆ
ಬೆಣ್ಣೆಯಾಗುವ ಕರ್‍ಮ ತಪ್ಪಿದ್ದಲ್ಲ
ತಪ್ಪೂ ಅಲ್ಲ!

ಹತ್ತಿ ಬತ್ತಿಯಾಗಿ
ಬೆಳಕಿನ ಬಿತ್ತವಾಗಿ
ತೈಲವಾಗುರಿದು ಇಲ್ಲವಾಗುವ
ಆತ್ಮಪರಿನಿರ್‍ವಾಣದ
ಈ ಪರಿಯ ಸೊಬಗ
ಇನ್ನಾಗ ಜೀವದೊಳು
ಕಾಣಲರಿಯೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಚಿಗುರುವುದೆಂದರೆ
Next post ಮೊಟ್ಟೆ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…