ಮೊಟ್ಟೆ

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು
ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ
ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ

ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ
ಒತ್ತಿದರೂ ಒಡೆಯದೆ ಕುಟ್ಟಿದರೂ ಸಿಡಿಯದೆ
ಮಂಕುಬೂದಿಯನೆರಚಿ ಮಿಕನನ್ನಾಗಿಸಿ ಮಣಿಸಿ
ಬೆರಕಿ ಗುಣವ ಕಲಿಸಿ ನಕ್ಕಿತವ್ವಾ ಮೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ಮಾಯಾ ನಗರಿಯ ಮೊಟ್ಟೆ

ಕಣ್ಣಲಿ ಹಳ್ಳವ ಅಗೆದು ಮೂಗಿಗೆ ದಾರವ ಬಿಗಿದು
ಕಿವಿಯಾ ಕಚ್ಚಿ ನಾಲಗೆ ಚುಚ್ಚಿ ಬಾಯ ಮುಚ್ಚಿ
ದೆಯ್ಯ ಮೆಟ್ಟಿದ ಹಾಗೆ ಮೈಯಾ ಮೆಟ್ಟಿಕೊಂಡು
ಬದುಕಾ ನರಕಾ ಮಾಡಿ ಕೊಕ್ಕಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ತಿಳಿವನು ತಿರುಚೊ ಮೊಟ್ಟೆ

ಕೊಡವಿದ್ದಕ್ಕೇ ಹೊರಳಿ ಕೆಡವಿದಕ್ಕೇ ಕೆರಳಿ
ಛಂಗನೆ ಮೇಲೆ ನೆಗೆದು ನೆತ್ತಿಯ ಮೇಲೆ ಕುಣಿದು
ಸರಸರ ಒಳಗೆ ಇಳಿದು ಬತ್ತಿಯ ಹಾಗೆ ಉರಿದು
ಸುಡುಸುಡು ಅಂತು ಮೊಟ್ಟೆ ಸುಟ್ಟಿತವ್ವಾ ಹೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ನಂಜನು ಉಣಿಸೊ ಮೊಟ್ಟೆ

ಮಾಟವ ಮಾಡಿದೆ ಮಂತ್ರವ ಹಾಕಿದೆ
ಹರಕೆಯ ಹೊತ್ತು ಮುಡಿಪನು ಕಟ್ಟಿದೆ
ಹೋದೆ… ಹೋದೆ… ಅಂದು, ಒಮ್ಮೆಗೆ ಒಳಗೇ ಬಂದು
ಮುಳ್ಳಿನ ಹಾಗೆ ಮೊನೆದೂ, ನಟ್ಟಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ಮೂಜಗ ಮುಕ್ಕಿದ ಮೊಟ್ಟೆ

ಕೆಟ್ಟೇ ಅನಿಸಿತು ಬಿಡುಗಡೆ ಬಯಸಿತು
ಹೃದಯವು ಕಲಿಸಿತು ಅರಿವದು ಉಳಿಸಿತು
ಧೂಪಾ ಹಚ್ಚಿ ದೀಪಾ ಬೆಳಗಿ ಹೂಗಳನೇರಿಸಿ
ತಟ್ಟೆಯಲ್ಲಿಟ್ಟು ಶಿವನಿಗೆ ಕೊಟ್ಟೆ
ಗಲ್ಲವ ಬಡಿದು ಬೆಲ್ಲದ ಮಾತಲಿ ಮೊರೆಯನು ಇಟ್ಟೆ

ಎಲ್ಲೇ ಹುಡುಗಿ ಮೊಟ್ಟೆ? ಎಲ್ಲೇ ಹುಡುಗಿ ಮೊಟ್ಟೆ?
ನನಗೆ ನಾನೆ ಕೇಳುವೆ, ನನಗೆ ನಾನೆ ಹೇಳುವೆ
ಮುಕ್ಕಣ್ಣನಿಗೆ ಕೊಟ್ಟು ಕೈಯ ಮುಗಿದು ಬಿಟ್ಟೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹತ್ತಿ… ಚಿತ್ತ… ಮತ್ತು…
Next post ಗೊರಕೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…