ಕೋಗಿಲೆಗೆ

ಯಾರು ಕಲಿಸಿದರು ಗೆಳತಿ ಹಾಡುವುದ ಹೇಳೆ
ನನಗಿಷ್ಟು ಕಲಿಸುವೆಯ ಹಾಡಿನ ಲೀಲೆ
ಮರಗಳಲಿ ಕುಳಿತಿರುವೆ ಕಾಣದಾ ಕೊಂಬೆಯೊಳು
ಸುಖ ದುಃಖದಿಂ ದೂರ ನೆಲದಿಂದ ಮೇಲೆ

ಸಿಹಿಕಹಿಗಳೊಳಗಿನಿತು ಬೆರೆಯದೇ
ಶುದ್ಧ ಸಲಿಲದ ರೀತಿ ಇಹುದು ನಿನ್ನಯ ಗಾನ
ಹುಟ್ಟು ಸಾವುಗಳ ನೆರಳು ಬೆಳಕುಗಳಿಂದ
ಆಚೆಗಿಹ ವಿಶ್ವಚೇತನದ ವರದಾನಾ

ತಾಳವಿಲ್ಲ ಪಕ್ಕವಾದ್ಯವೊಂದು ಇಲ್ಲದಿದ್ದರು
ಕೇಳುವವರ ಸಭೆಯು ಇಲ್ಲ ಕೇಳಿ ಆಹ ಎನ್ನಲು
ಆದರೂ ಎಂಥ ಮಧುರ ಸಕ್ಕರೆಯ ಬೇನು
ಕಲಿಯಲಿಕ್ಕೆ ಇಷ್ಟು ಕಾಲ ಹೋಗಿದ್ದೆ ಏನು

ಒಂದೇ ಸ್ವರದಲಿ ಜೇನಿನ ಮಳೆಯನು
ಸುರಿಯುವಿ ಬೇಸರವಿಲ್ಲದೆ ನೀನು
ಇಲ್ಲಿಯ ಸರಗಳ ಕೇಳುತ ದಣಿದಿಹೆ
ಅಲ್ಲಿಯ ರಾಗವ ಕೇಳಲು ಕಾದಿಹೆ

ನಿನಗಾಗಿಯೆ ನೀ ಹಾಡಲು ನನಗಿರುವುದು ಲಾಭ
ತನಗಾಗಿಯೆ ಸೂರ್ಯನಿರಲು ಬೆಳಕೆನ್ನೆಯ ಲಾಭ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಕ್ಕಳ
Next post ಹೇಳಿ ನೀವೆ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…