Home / ಲೇಖನ / ಇತರೆ / ಇಕ್ಕಳ

ಇಕ್ಕಳ

ಪ್ರಿಯ ಸಖಿ,
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲೆಂ’ದರು
ಮಳೆ ಬಿತ್ತೋ ‘ಬಿಡದಲ್ಲ ಶನಿ’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
ಕವಿ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವನದ ಈ ಸಾಲುಗಳು ವಿಕ್ಷಿಪ್ತ ಮನೋಭಾವದ ವ್ಯಕ್ತಿಗಳ ಮನೋಭಾವವನ್ನು ಕುರಿತ ಚಿತ್ರಣವನ್ನು ನೀಡುತ್ತದೆ. ಸದಾ ಟೀಕಿಸುವುದನ್ನೇ ಗುರಿಯಾಗಿ ಇಟ್ಟುಕೊಂಡ ಇಂತವರಿಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಪ್ರವೃತ್ತಿ, ಟೀಕೆ ಮಾಡಿ ಗೊಣಗಾಡದಿದ್ದರೆ ಇವರಿಗೆ ಸಮಾಧಾನವೇ ಇಲ್ಲ. ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲದರ ಬಗೆಗೂ ಇವರಿಗೆ ಅಸಮಾಧಾನವೇ. ಕವನವಮ್ನ ಮುಂದುವರೆಸುತ್ತಾ ಕವಿ
ನಿಂತವರ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು. ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ!
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಯಾವುದನ್ನೂ ಒಪ್ಪದ ಇವರಿಗೆ ನಿಂತರೂ ತಪ್ಪು ಮಲಗಿದರೂ ತಪ್ಪು, ಓಡಿದರೂ ತಪ್ಪು! ಒಟ್ಟಿನಲ್ಲಿ ಯಾವ ವಸ್ತುವನ್ನೇ ಆಗಲಿ ಪರಿಸ್ಥಿತಿಯನ್ನೇ ಆಗಲಿ, ಕಾಲವನ್ನೇ ಆಗಲಿ, ವ್ಯಕ್ತಿಯನ್ನೇ ಆಗಲಿ ಟೇಕಿಸುತ್ತಲೇ ಇರುವುದು ಇವರ ಸ್ವಭಾವ. ಇದೊಂದು ರೀತಿಯ ಮನೋರೋಗವೂ ಹೌದು. ಅತೃಪ್ತ ಮನಸ್ಸಿಗೆ ಸದಾಲೋಕವೇ ಡೊಂಕಾಗಿ ಕಾಣುತ್ತದೆ. ಯಾವುದರಿಂದಲೂ ತೃಪ್ತಿ ಹೊಂದದ ವಿಲಕ್ಷಣ ವ್ಯಕ್ತಿಗಳೊಂದಗಿನ ಬಾಳೂ ಅಸಹನೀಯವೇ.

ಇಂತಹವರ ಕೈಗಳಿಗೆ ಸಿಕ್ಕಿಕೊಂಡ ವ್ಯಕ್ತಿ ಇಕ್ಕಳದ ಮಧ್ಯೆ ಸಿಕ್ಕಂತೆ ಚಡಪಡಿಸ ಬೇಕಾಗುತ್ತದೆ. ಯಾವುದು ಸರಿಯೋ? ಯಾವುದು ತಪ್ಪೋ? ಯಾವುದನ್ನು ಮಾಡಬೇಕು? ಯಾವುದನ್ನು ಬಿಡಬೇಕು? ಹೇಗೆ ನಡೆದುಕೊಂಡರೆ ಸರಿ? ಎಂದು ಅರಿಯದೇ ಚಡಪಡಿಸಿ, ಗೊಂದಲಕ್ಕೊಳಗಾಗುತ್ತಾನೆ. ಆದರೆ ಇಂತಹ ಅತೃಪ್ತ ಮನಸ್ಸಿನವರ ಟೀಕೆಗೆ ಕಿವಿಗೊಟ್ಟು ಮಾನಸಿಕ ಕ್ಷೋಭೆಗೊಳಗಾಗುವುದಕ್ಕಿಂತಾ, ಅವರನ್ನು ಅವರ ಪಾಡಿಗೆ ಟೀಕಿಸಲು ಬಿಟ್ಟು, ನಮ್ಮ ವಿವೇಚನೆಯಿಂದ ಸರಿ ತಪ್ಪನ್ನು ತಿಳಿದುಕೊಂಡು ಅವರ ಮಾತುಗಳಿಗೆ ಜಾಣ ಕಿವುಡು ನಟಿಸುವುದೇ ಉತ್ತಮವಾದ ಮಾರ್ಗ ಎಂದು ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...