ಕೇವಲ ಮೂರು ತಾಸಿನೊಳಗೆ
ಯಾರಿಗೂ ತ್ರಾಸು ಕೊಡದೆ
ಇದ್ದಕ್ಕಿದ್ದಂತೆ, ಅವಸರದಲ್ಲಿ
ಎದ್ದುಹೋದುದು ಎಲ್ಲಿಗೆ
ಯಾವ ಮೋಹನ ಮುರಳಿ ಕರೆಯಿತು
ಯಾವ ತೀರಕೆ ನಿನ್ನನು
ಯಾರ ಮೇಲೀ ಮುನಿಸು
ಯಾಕೆ ನೊಂದಿತು ಮನಸು
ನಿನ್ನ ನಿರ್ಗಮನದಿಂದ
ಘಾಸಿಗೊಂಡ ಭಾನು ಕಳೆಗುಂದಿತು
ನಿರಂತರ ಸುರಿದ ಕಂಬನಿಗೆ
ಭೂಮಿ ಬಿರಿಯಿತು
ಮೇಘವರ್ಷದ ಈ ರಂಪಕ್ಕೆ
ಚಿತ್ರಗಳು ತತ್ತರಿಸಿದವು
ಏಕೀ ರುಷ್ಠತೆ……
ಹತ್ತಿರದ ಮನಸುಗಳ ಭೇದಿಸಿ
ಜತೆಬಿಟ್ಟು ಕತೆಬಿಟ್ಟು,
ಎತ್ತಣ ಪಯಣ!
ನಾಕವೆ ನರಕವೆ?
ಅಲ್ಲಿ ಏನಿದೆಯೆಂದು
ಯಾವ ಮರುಳಿಗೆ
ಇಲ್ಲಿಯ ನಂಟು, ಗಂಟು
ಬಂಧನಗಳ ತೊರೆದು
ತೋರಿಸಿದ ಅವಸರಕ್ಕೆ ಏನರ್ಥ
ಮರಳಿ ಬಾರದ, ಕಾಣದ
ಉಲಿಯದ ನಲಿಯದ ನಿರಾಕಾರಕ್ಕೆ
ನಿನ್ನ ನಿಯಮ, ನಿನ್ನ ನಮನಗಳು
ನಿನ್ನ ಭಾವಸುಮನಗಳಾಗಿ
ಆಕಾಶದ ನೆಲೆಯ ಶೋಧನೆಯಲ್ಲಿ ಹೊರಟದ್ದು
ಅದೆಂಥಾ ನಿರ್ವಾಣದೆಡೆಗೆ
ನಾನು- ನೀನಿಲ್ಲದ
ಭಾವಲೋಕದ ಅಂಚಿಗೆ….!
*****
Related Post
ಸಣ್ಣ ಕತೆ
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…