ಆಕಾಶದಲ್ಲೊಂದು ನೆಲೆಯ ಹುಡುಕುತ್ತಾ….

ಕೇವಲ ಮೂರು ತಾಸಿನೊಳಗೆ
ಯಾರಿಗೂ ತ್ರಾಸು ಕೊಡದೆ
ಇದ್ದಕ್ಕಿದ್ದಂತೆ, ಅವಸರದಲ್ಲಿ
ಎದ್ದುಹೋದುದು ಎಲ್ಲಿಗೆ
ಯಾವ ಮೋಹನ ಮುರಳಿ ಕರೆಯಿತು
ಯಾವ ತೀರಕೆ ನಿನ್ನನು
ಯಾರ ಮೇಲೀ ಮುನಿಸು
ಯಾಕೆ ನೊಂದಿತು ಮನಸು
ನಿನ್ನ ನಿರ್ಗಮನದಿಂದ
ಘಾಸಿಗೊಂಡ ಭಾನು ಕಳೆಗುಂದಿತು
ನಿರಂತರ ಸುರಿದ ಕಂಬನಿಗೆ
ಭೂಮಿ ಬಿರಿಯಿತು
ಮೇಘವರ್ಷದ ಈ ರಂಪಕ್ಕೆ
ಚಿತ್ರಗಳು ತತ್ತರಿಸಿದವು
ಏಕೀ ರುಷ್ಠತೆ……
ಹತ್ತಿರದ ಮನಸುಗಳ ಭೇದಿಸಿ
ಜತೆಬಿಟ್ಟು ಕತೆಬಿಟ್ಟು,
ಎತ್ತಣ ಪಯಣ!
ನಾಕವೆ ನರಕವೆ?
ಅಲ್ಲಿ ಏನಿದೆಯೆಂದು
ಯಾವ ಮರುಳಿಗೆ
ಇಲ್ಲಿಯ ನಂಟು, ಗಂಟು
ಬಂಧನಗಳ ತೊರೆದು
ತೋರಿಸಿದ ಅವಸರಕ್ಕೆ ಏನರ್ಥ
ಮರಳಿ ಬಾರದ, ಕಾಣದ
ಉಲಿಯದ ನಲಿಯದ ನಿರಾಕಾರಕ್ಕೆ
ನಿನ್ನ ನಿಯಮ, ನಿನ್ನ ನಮನಗಳು
ನಿನ್ನ ಭಾವಸುಮನಗಳಾಗಿ
ಆಕಾಶದ ನೆಲೆಯ ಶೋಧನೆಯಲ್ಲಿ ಹೊರಟದ್ದು
ಅದೆಂಥಾ ನಿರ್ವಾಣದೆಡೆಗೆ
ನಾನು- ನೀನಿಲ್ಲದ
ಭಾವಲೋಕದ ಅಂಚಿಗೆ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂವಾಡಗಿತ್ತಿ
Next post ಮನೆಯೊಳಿಲ್ಲದ ಸಾವಯವವನೆಲ್ಲಿ ಹುಡುಕುವುದು ?

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys