ವನ, ಮನ, ಮನೆ, ಮಡದಿಯೊಂದಾದಂದು
ಘನ ಕೃಷಿಗಿರದಾವ ಮನ್ನಣೆಯ ಕುಂದು
ಧನದ ಮಿತಿಯನರಿತು ಅನ್ನದ ಗತಿಯ
ನನುಸರಿಸಿ, ತನು ಮನದ ಬಯಕೆ
ಯನು ಅವರಿಗವರೇ ಭರಿಸಿದರದು ಸಾವಯವ – ವಿಜ್ಞಾನೇಶ್ವರಾ
*****