Home / ಕವನ / ಕವಿತೆ / ಇಟ್ಟಿಗೆ ಹೊರುವ ಲಕ್ಕಿ

ಇಟ್ಟಿಗೆ ಹೊರುವ ಲಕ್ಕಿ

ನಮ್ಮ ಮನೆಯ ಪಕ್ಕದಲ್ಲೊಂದು
ಕಟ್ಟುವ ಹೊಸಮನೆಗೆ
ಕಲ್ಲು ಇಟ್ಟಿಗೆ ಹೊರಲು
ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ
ರಂಭೆಯಂತಿದ್ದಾಳೆ
೫’ – ೫” ಎತ್ತರ
ಅಳತೆಗೆ ತಕ್ಕಂತೆ
ಅಂಗಾಂಗಗಳು, ಹರಿದ
ಸೀರೆಯಲ್ಲೂ ಎದ್ದುಕಾಣುವ
೧೮ರ ಲಕ್ಕಿ ಊರ್ವಶಿ
ಯೌವನದರಿವಿಲ್ಲದ ಲಕ್ಕಿ
ಸೀರೆ ಕಚ್ಚಿ ಹಾಕಿ; ದೊಗಲಿ ಜಂಪರು ತೊಟ್ಟು
ಮಂದಹಾಸ ತುಳಿಕಿಸುತ್ತ
ತಗ್ಗು ದಿನ್ನೆಗಳಲ್ಲಿ
ಮೆಟ್ಟಲುಗಳ ಮೇಲೆಲ್ಲ ಓಡಾಡುತ್ತಿದ್ದಂತೆ
ಸಹ ಕೆಲಸಗಾರರಿಗೆ
ಹುರುಪಾಗಿಸುತ್ತಾಳೆ
ಬೆಳಗಿನಿಂದ ಸಂಜೆಯವರೆಗೆ
ಕೋತಿಗಳು
ಸಿನೇಮಾದ ತುಣುಕುಗಳನ್ನೆಲ್ಲ
ಹಾಡುತ್ತವೆ.
ಅವಳು ಹೊತ್ತು ತಂದ
ಇಟ್ಟಿಗೆ ಬುಟ್ಟಿ ಇಳಿಸಿಕೊಳ್ಳಲು
ಸ್ಪರ್ಶದ ನೆಪಕ್ಕೆ
ನಾ ಮುಂದು ತಾ ಮುಂದು
ಎಂದು ಹಲ್ಲು ಕರಿಯುತ್ತ
ಜಿಗಿದಾಡುತ್ತವೆ.
ಉರಿಬಿಸಿಲೆಲ್ಲ
ಬೆಳದಿಂಗಳ ತಂಪು‌ಇಂಪು
ಅನ್ನುತ್ತವೆ
ಮನೆ ಕಟ್ಟುತ್ತ
ತಮ್ಮ ಬರಡು ಒಡಲೊಳಗೇ
ಕನಸುಗಳು ಕಟ್ಟಿಕೊಳ್ಳುತ್ತವೆ.
ಮಿದುಳು ಚಿಗಿಸಿಕೊಳ್ಳುತ್ತ
ಬದುಕುವ ಭರವಸೆ
ಕೊಡಬೇಕೆಂದು ಒಳಗಿಂದೊಳಗೇ
ಒದ್ದಾಡಿಕೊಳ್ಳುತ್ತವೆ.
ಮಣ್ಣು ಇಟ್ಟಿಗೆ ಹೊತ್ತ
ಗಟ್ಟಿ ಮುಟ್ಟಿ ಲಕ್ಕಿ
ಯಾವೊಂದಕ್ಕೂ ತಲೆಕೆಡಿಸಿಕೊಳ್ಳದೇ
ನಗಬೇಕೆಂದಾಗ ನಕ್ಕು
ಅಳಬೇಕೆಂದಾಗ ಅತ್ತು
ಭಾವನೆಗಳು ಹೊರಗೆಡವಿ
ಮನೆ ತಲುಪುತ್ತಾಳೆ
ಸೆರ ಕುಡುಕ ಅಪ್ಪ ತೂಗಾಡುತ್ತ
ಮನಗೆ ಬರುವನು
ಹೆಂಡ ಇಲ್ಲದ ಊಟಕ್ಕೆ
ಅವ್ವ ಒದೆತ ತಿನ್ನುತ್ತಾಳೆ
ವಾರಾಂತ್ತ್ಯದ ಲಕ್ಕಿಯ ರೊಕ್ಕ
ಅಪ್ಪನ ಸೆರೆಗಾಗುವಾಗ;
ಅವ್ವ ಅನುಕಂಪಿಸಿ
ಕಣ್ಣೀರಿಡುವಾಗ;
ಮನೆ ಕಟ್ಟುವ ಮಾಲಿಕ
ಗುಡಿಸಿಲಿನೊಳಗೆ
ಹೆಜ್ಜೆ ಹಾಕುವನು.
ಲಕ್ಕಿಯ ಹೊಳಪು ಕಣ್ಣು
ಬಿರುಸು ದೇಹ ನೋಡಿ
ಕ್ಷಣದಲ್ಲಿ ವಿಕೃತ
ಕನಸುಗಳು ಚಿಗಿಸಿಕೊಂಡು
ಅವಳಪ್ಪನ ಮುಂದೆ
ಹಣ ಎಸೆದು ಕೈಹಿಡಿದಾಗ
ಲಕ್ಕಿಯ ಇಡಿಯಾದ ದೇಹ
ಶಕ್ತಿ ದುರ್ಗೆಯಾಗಿ
ಇವನ ಕತ್ತು ಹಿಸುಕಿ
ಬಾಸುಂಡೆ ಹಾಕುತ್ತದೆ.
ಚೆಲ್ಲು ಹುಡುಗಿಯಂತಿರುವ
ಈ ಗಂಭೀರ ಹುಡುಗಿಯ ಮುಂದೆ
ಮಾಲೀಕ ಕ್ಷುದ್ರನಾಗಿ
ಹೊರಬಿದ್ದ,
ಮರುದಿನ ಗುಜು ಗುಜು
ಲಕ್ಕಿ ಕೆಲಸಕ್ಕೆ ಬರಲಿಲ್ಲ
ಮಾಲಕನ ಮನೆ ಕಟ್ಟುವ
ಕೋತಿಗಳು ಈಗ
ಜಿಗಿದಾಡದೇ
ಕೆಲಸದಲ್ಲಿ ನಿಧಾನಿಸುತ್ತ
ಮಗ್ನವಾಗಿದ್ದರೆ
ಲಕ್ಕಿಗೆ ಈಗ
ಹರೆಯದ ಅಪಾಯ
ಗೊತ್ತಾಗಿ
ಅದಕ್ಕೆ ಶಾಪ ಹಾಕುತ್ತ
ಹೊದಿಕೆಯೊಳಗೆ ಬಿಕ್ಕಳಿಸುಕ್ತಿದ್ದಾಳೆ.
ಲಕ್ಕಿ ಇಲ್ಲದ….
ಕೋತಿಗಳ ಹಾಡುಗಳಿಲ್ಲದ…
ಸಪ್ಪೆ ಕಟ್ಟಡ
ನಿಧಾನಕ್ಕೆ ಏರುತ್ತಿದೆ
ಮಾಲಿಕನ ಸಮಾಧಿಗಾಗಿಯೋ
ಎಂಬಂತೆ….
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...