Home / ಕವನ / ಕವಿತೆ / ಇಟ್ಟಿಗೆ ಹೊರುವ ಲಕ್ಕಿ

ಇಟ್ಟಿಗೆ ಹೊರುವ ಲಕ್ಕಿ

ನಮ್ಮ ಮನೆಯ ಪಕ್ಕದಲ್ಲೊಂದು
ಕಟ್ಟುವ ಹೊಸಮನೆಗೆ
ಕಲ್ಲು ಇಟ್ಟಿಗೆ ಹೊರಲು
ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ
ರಂಭೆಯಂತಿದ್ದಾಳೆ
೫’ – ೫” ಎತ್ತರ
ಅಳತೆಗೆ ತಕ್ಕಂತೆ
ಅಂಗಾಂಗಗಳು, ಹರಿದ
ಸೀರೆಯಲ್ಲೂ ಎದ್ದುಕಾಣುವ
೧೮ರ ಲಕ್ಕಿ ಊರ್ವಶಿ
ಯೌವನದರಿವಿಲ್ಲದ ಲಕ್ಕಿ
ಸೀರೆ ಕಚ್ಚಿ ಹಾಕಿ; ದೊಗಲಿ ಜಂಪರು ತೊಟ್ಟು
ಮಂದಹಾಸ ತುಳಿಕಿಸುತ್ತ
ತಗ್ಗು ದಿನ್ನೆಗಳಲ್ಲಿ
ಮೆಟ್ಟಲುಗಳ ಮೇಲೆಲ್ಲ ಓಡಾಡುತ್ತಿದ್ದಂತೆ
ಸಹ ಕೆಲಸಗಾರರಿಗೆ
ಹುರುಪಾಗಿಸುತ್ತಾಳೆ
ಬೆಳಗಿನಿಂದ ಸಂಜೆಯವರೆಗೆ
ಕೋತಿಗಳು
ಸಿನೇಮಾದ ತುಣುಕುಗಳನ್ನೆಲ್ಲ
ಹಾಡುತ್ತವೆ.
ಅವಳು ಹೊತ್ತು ತಂದ
ಇಟ್ಟಿಗೆ ಬುಟ್ಟಿ ಇಳಿಸಿಕೊಳ್ಳಲು
ಸ್ಪರ್ಶದ ನೆಪಕ್ಕೆ
ನಾ ಮುಂದು ತಾ ಮುಂದು
ಎಂದು ಹಲ್ಲು ಕರಿಯುತ್ತ
ಜಿಗಿದಾಡುತ್ತವೆ.
ಉರಿಬಿಸಿಲೆಲ್ಲ
ಬೆಳದಿಂಗಳ ತಂಪು‌ಇಂಪು
ಅನ್ನುತ್ತವೆ
ಮನೆ ಕಟ್ಟುತ್ತ
ತಮ್ಮ ಬರಡು ಒಡಲೊಳಗೇ
ಕನಸುಗಳು ಕಟ್ಟಿಕೊಳ್ಳುತ್ತವೆ.
ಮಿದುಳು ಚಿಗಿಸಿಕೊಳ್ಳುತ್ತ
ಬದುಕುವ ಭರವಸೆ
ಕೊಡಬೇಕೆಂದು ಒಳಗಿಂದೊಳಗೇ
ಒದ್ದಾಡಿಕೊಳ್ಳುತ್ತವೆ.
ಮಣ್ಣು ಇಟ್ಟಿಗೆ ಹೊತ್ತ
ಗಟ್ಟಿ ಮುಟ್ಟಿ ಲಕ್ಕಿ
ಯಾವೊಂದಕ್ಕೂ ತಲೆಕೆಡಿಸಿಕೊಳ್ಳದೇ
ನಗಬೇಕೆಂದಾಗ ನಕ್ಕು
ಅಳಬೇಕೆಂದಾಗ ಅತ್ತು
ಭಾವನೆಗಳು ಹೊರಗೆಡವಿ
ಮನೆ ತಲುಪುತ್ತಾಳೆ
ಸೆರ ಕುಡುಕ ಅಪ್ಪ ತೂಗಾಡುತ್ತ
ಮನಗೆ ಬರುವನು
ಹೆಂಡ ಇಲ್ಲದ ಊಟಕ್ಕೆ
ಅವ್ವ ಒದೆತ ತಿನ್ನುತ್ತಾಳೆ
ವಾರಾಂತ್ತ್ಯದ ಲಕ್ಕಿಯ ರೊಕ್ಕ
ಅಪ್ಪನ ಸೆರೆಗಾಗುವಾಗ;
ಅವ್ವ ಅನುಕಂಪಿಸಿ
ಕಣ್ಣೀರಿಡುವಾಗ;
ಮನೆ ಕಟ್ಟುವ ಮಾಲಿಕ
ಗುಡಿಸಿಲಿನೊಳಗೆ
ಹೆಜ್ಜೆ ಹಾಕುವನು.
ಲಕ್ಕಿಯ ಹೊಳಪು ಕಣ್ಣು
ಬಿರುಸು ದೇಹ ನೋಡಿ
ಕ್ಷಣದಲ್ಲಿ ವಿಕೃತ
ಕನಸುಗಳು ಚಿಗಿಸಿಕೊಂಡು
ಅವಳಪ್ಪನ ಮುಂದೆ
ಹಣ ಎಸೆದು ಕೈಹಿಡಿದಾಗ
ಲಕ್ಕಿಯ ಇಡಿಯಾದ ದೇಹ
ಶಕ್ತಿ ದುರ್ಗೆಯಾಗಿ
ಇವನ ಕತ್ತು ಹಿಸುಕಿ
ಬಾಸುಂಡೆ ಹಾಕುತ್ತದೆ.
ಚೆಲ್ಲು ಹುಡುಗಿಯಂತಿರುವ
ಈ ಗಂಭೀರ ಹುಡುಗಿಯ ಮುಂದೆ
ಮಾಲೀಕ ಕ್ಷುದ್ರನಾಗಿ
ಹೊರಬಿದ್ದ,
ಮರುದಿನ ಗುಜು ಗುಜು
ಲಕ್ಕಿ ಕೆಲಸಕ್ಕೆ ಬರಲಿಲ್ಲ
ಮಾಲಕನ ಮನೆ ಕಟ್ಟುವ
ಕೋತಿಗಳು ಈಗ
ಜಿಗಿದಾಡದೇ
ಕೆಲಸದಲ್ಲಿ ನಿಧಾನಿಸುತ್ತ
ಮಗ್ನವಾಗಿದ್ದರೆ
ಲಕ್ಕಿಗೆ ಈಗ
ಹರೆಯದ ಅಪಾಯ
ಗೊತ್ತಾಗಿ
ಅದಕ್ಕೆ ಶಾಪ ಹಾಕುತ್ತ
ಹೊದಿಕೆಯೊಳಗೆ ಬಿಕ್ಕಳಿಸುಕ್ತಿದ್ದಾಳೆ.
ಲಕ್ಕಿ ಇಲ್ಲದ….
ಕೋತಿಗಳ ಹಾಡುಗಳಿಲ್ಲದ…
ಸಪ್ಪೆ ಕಟ್ಟಡ
ನಿಧಾನಕ್ಕೆ ಏರುತ್ತಿದೆ
ಮಾಲಿಕನ ಸಮಾಧಿಗಾಗಿಯೋ
ಎಂಬಂತೆ….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...