Home / ಲೇಖನ / ವಿಜ್ಞಾನ / ಸಾಗರದ ಬಸ್ (ಸೀಬಸ್)

ಸಾಗರದ ಬಸ್ (ಸೀಬಸ್)

ಚಿತ್ರ: ಡೇವಿಡ್ ಮಾಕ್ ಕೌಗ್ಹೆ
ಚಿತ್ರ: ಡೇವಿಡ್ ಮಾಕ್ ಕೌಗ್ಹೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗಲೂ ಸಹ ‘ಮಿನಿ ಸೀಬಸ್’ ಚಿಕ್ಕ ಸಮುದ್ರ ಬಸ್‌ನ್ನು ರೂಪುಗೊಳಿಸಲಾಗುತ್ತದೆ. ಸೀಬಸ್ ವಾಹನಕ್ಕೆ ರೆಕ್ಕೆಗಳಿದ್ದು ಇಟಲಿಯ ‘ಸಬೀನೋರಾಕ್‌ಟೆಲ್ಲ’ ಇದನ್ನು ವಿನ್ಯಾಸಗೊಳಿಸಿದೆ. ಇದಲ್ಲದೇ ಯೂರೋಪಿನ ೧೪ ಕಂಪನಿಗಳೂ ಸಹ ಈ ಸೀಬಸ್‌ನ ನಿರ್ಮಾಣ ಕಾರ್ಯದಲ್ಲಿತೊಡಗಿವೆ.

ಒಂದು ಸೀಬಸ್ನಲ್ಲಿ ೬೮೦ ಜನ ಕುಳಿತುಕೊಳ್ಳಬಹುದಾಗಿದ್ದು ಈ ಮಿನಿ ಸೀಬಸ್ ಹಡಗಿಗಿಂತಲೂ ವೇಗವಾಗಿ ಚಲಿಸುತ್ತದೆ. ಅಟ್ಲಾಂಟಿಕ್ ಸಾಗರವನ್ನು ೨೪ ಗಂಟೆಗಳಲ್ಲಿ ಇದು ದಾಟಿದರೆ ಅತಿವೇಗದ ಹಡಗು ಈ ದೂರವನ್ನು ಕ್ರಮಿಸಲು ಒಂದು ವಾರ ಕಾಲ ಸಮಯಬೇಕು. ಇದರಿಂದಾಗಿ ಈ ಬಸ್‌ನ ವೇಗದ ಮಿತಿ ಅರ್ಥವಾಗುತ್ತದೆ. ಈ ಸೀಬಸ್‌ಗಿರುವ ಎರಡು ಎಡಬಲದ ರೆಕ್ಕೆಗಳು ಸಮುದ್ರವನ್ನು ಸಂಚರಿಸಲು ಅನುಕೂಲವಾಗುತ್ತವೆ. ಅಂದರೆ ತೀವ್ರಗತಿಯಲ್ಲಿ ನೀರನ್ನು ಯಂತ್ರಗಳ ಸಹಾಯದಿಂದ ಹಿಂದಕ್ಕೆ ತಳ್ಳುತ್ತವೆ. ಇನ್ನೂ ಚಿಕ್ಕ ಮಿನಿಬಸ್‌ಗಳು ತಯಾರಾಗುತ್ತಿದ್ದು ಇದರಲ್ಲಿ ೨೦೦ ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು. ಸಣ್ಣ ಬಂದರುಗಳನ್ನು ತಲುಪಬೇಕಾದಾಗ ಇದರ ರೆಕ್ಕೆಗಳು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತವೆ. ಆಗ ಸಾರಾಗವಾಗಿ ನಿಲ್ದಾಣದೊಳಗೆ ಹೋಗಬಹುದು. ಈ ಸೀಬಸ್‌ಗಳ ನಿರ್ಮಾಣವು ಸಮುದ್ರಯಾನಕ್ಕೊಂದು ಕ್ರಾಂತಿಕಾರಕ ಬದಲಾವಣೆಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ದುಬಾರಿ ಹಣತೆತ್ತು ತಿಂಗಳುಗಟ್ಟಲೆ ಸಮುದ್ರದಲ್ಲಿ ಯಾನ ಮಾಡುವ ಪ್ರವಾಸಿಗರಿಗೆ ಇದೊಂದು ವರದಾನವಾಗಲಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...