Home / ಲೇಖನ / ವಿಜ್ಞಾನ / ಸಾಗರದ ಬಸ್ (ಸೀಬಸ್)

ಸಾಗರದ ಬಸ್ (ಸೀಬಸ್)

ಚಿತ್ರ: ಡೇವಿಡ್ ಮಾಕ್ ಕೌಗ್ಹೆ
ಚಿತ್ರ: ಡೇವಿಡ್ ಮಾಕ್ ಕೌಗ್ಹೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗಲೂ ಸಹ ‘ಮಿನಿ ಸೀಬಸ್’ ಚಿಕ್ಕ ಸಮುದ್ರ ಬಸ್‌ನ್ನು ರೂಪುಗೊಳಿಸಲಾಗುತ್ತದೆ. ಸೀಬಸ್ ವಾಹನಕ್ಕೆ ರೆಕ್ಕೆಗಳಿದ್ದು ಇಟಲಿಯ ‘ಸಬೀನೋರಾಕ್‌ಟೆಲ್ಲ’ ಇದನ್ನು ವಿನ್ಯಾಸಗೊಳಿಸಿದೆ. ಇದಲ್ಲದೇ ಯೂರೋಪಿನ ೧೪ ಕಂಪನಿಗಳೂ ಸಹ ಈ ಸೀಬಸ್‌ನ ನಿರ್ಮಾಣ ಕಾರ್ಯದಲ್ಲಿತೊಡಗಿವೆ.

ಒಂದು ಸೀಬಸ್ನಲ್ಲಿ ೬೮೦ ಜನ ಕುಳಿತುಕೊಳ್ಳಬಹುದಾಗಿದ್ದು ಈ ಮಿನಿ ಸೀಬಸ್ ಹಡಗಿಗಿಂತಲೂ ವೇಗವಾಗಿ ಚಲಿಸುತ್ತದೆ. ಅಟ್ಲಾಂಟಿಕ್ ಸಾಗರವನ್ನು ೨೪ ಗಂಟೆಗಳಲ್ಲಿ ಇದು ದಾಟಿದರೆ ಅತಿವೇಗದ ಹಡಗು ಈ ದೂರವನ್ನು ಕ್ರಮಿಸಲು ಒಂದು ವಾರ ಕಾಲ ಸಮಯಬೇಕು. ಇದರಿಂದಾಗಿ ಈ ಬಸ್‌ನ ವೇಗದ ಮಿತಿ ಅರ್ಥವಾಗುತ್ತದೆ. ಈ ಸೀಬಸ್‌ಗಿರುವ ಎರಡು ಎಡಬಲದ ರೆಕ್ಕೆಗಳು ಸಮುದ್ರವನ್ನು ಸಂಚರಿಸಲು ಅನುಕೂಲವಾಗುತ್ತವೆ. ಅಂದರೆ ತೀವ್ರಗತಿಯಲ್ಲಿ ನೀರನ್ನು ಯಂತ್ರಗಳ ಸಹಾಯದಿಂದ ಹಿಂದಕ್ಕೆ ತಳ್ಳುತ್ತವೆ. ಇನ್ನೂ ಚಿಕ್ಕ ಮಿನಿಬಸ್‌ಗಳು ತಯಾರಾಗುತ್ತಿದ್ದು ಇದರಲ್ಲಿ ೨೦೦ ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು. ಸಣ್ಣ ಬಂದರುಗಳನ್ನು ತಲುಪಬೇಕಾದಾಗ ಇದರ ರೆಕ್ಕೆಗಳು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತವೆ. ಆಗ ಸಾರಾಗವಾಗಿ ನಿಲ್ದಾಣದೊಳಗೆ ಹೋಗಬಹುದು. ಈ ಸೀಬಸ್‌ಗಳ ನಿರ್ಮಾಣವು ಸಮುದ್ರಯಾನಕ್ಕೊಂದು ಕ್ರಾಂತಿಕಾರಕ ಬದಲಾವಣೆಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ದುಬಾರಿ ಹಣತೆತ್ತು ತಿಂಗಳುಗಟ್ಟಲೆ ಸಮುದ್ರದಲ್ಲಿ ಯಾನ ಮಾಡುವ ಪ್ರವಾಸಿಗರಿಗೆ ಇದೊಂದು ವರದಾನವಾಗಲಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...