ತೇರು ಬಂತು, ದಾರಿ


ಗಾಲಿ ಉರುಳಿದಂತೆ-ಕಾಡಿನ
ಗಾಳಿ ಹೊರಳಿದಂತೆ-
ಬಾನ ದೇಗುಲದ
ಬೆಳ್ಳಿ ಗೋಪುರದ
ಘಂಟೆ ಮೊಳಗಿದಂತೆ,
ಹಾಲು ಕಂಚಿನ
ಹೊನ್ನ ಮಿಂಚಿನ
ಘಂಟೆ ಮೊಳಗಿದಂತೆ,
ಊರ ದಾರಿಯಲಿ
ಹೂವ ತೇರಿನಲಿ
ಕೃಷ್ಣ ಬರುವನಂತೆ!


ಎತ್ತಿ ನೋಡು ಕಣ್ಣ, ಬಾನಿಗೆ
ಹತ್ತಿ ಹೊಳೆವ ಬಣ್ಣ!
ಬೆಳದ ಭಕ್ತಿಯೇ ಊರ ದೇವರಿಗೆ
ತೇರು ಆಯಿತಣ್ಣ!
ಗುಡಿಯ ಮಟ್ಟದ
ಗುಡುಗು ಹುಟ್ಟುವ
ನಡೆದು ಬರುವ ಬೆಟ್ಟ!
ಗಿರಿಯನೆತ್ತಿದ
ಕೊಳಲ ಬಿತ್ತಿದ
ಕೃಷ್ಣ ಬಂದುಬಿಟ್ಟ,
ಚೆಲುವ ಬಂದುಬಿಟ್ಟ!


ಗೋಪಿ ನೀನೆ ಧನ್ಯೆ! – ಕೃಷ್ಣ
ನಿನ್ನ ಕಂದನೇನೆ?
ಇಲ್ಲಿ ನೋಡು ತಾನೇ ತನ್ನ
ತೇರನೇರಿದಾನೆ!
ಕೊಳಲ ಬಾರಿಸದೆ
ಜಗವ ತೋರಿಸದೆ
ಹಿಗ್ಗಿ ಬರುತಿದಾನೆ.
ಚರಣ ಚಂದ್ರಿಕೆಗೆ
ಜೀವ ಹಿಗ್ಗುತಿದೆ
ಕೃಷ್ಣ ಬರುತಿದಾನೆ-
ತೇರಮೇಲೆ ತಾನೆ.


ತೇರು ಬಂತು ದಾರಿ-ದಾರಿ!
ಹಣ್ಣು ದವನ ಬೀರಿ!
ಬೀದಿ ತಿರುಗಿನಲಿ
ಜನದ ಕರಗಿನಲಿ
ತೇರು ಬಂತು ದಾರಿ!
ತಡೆದು ಗುಡುಗಿ ಬಹ
ದೊಡ್ಡ ತೇರು, ಅಹ!
ಬಿಡಿರಿ ಬಿಡಿರಿ, ದಾರಿ!
ಮುತ್ತ ಮೆಟ್ಟಿರುವ
ಮಕುಟವಿಟ್ಟಿರುವ
ಕೃಷ್ಣ ಬಂದ, ದಾರಿ!


ಸೆರಗ ಸೆಳೆದರಿಯ, ಬೆಣ್ಣೆ ಕದ್ದರಿಯ;
ಚೆಲುವ ಬಂದ, ದಾರಿ!
ಹಣೆಯ ಕತ್ತುರಿಯ, ತಿಲಕದಚ್ಚರಿಯ
ಕಂದ ಬಂದ, ದಾರಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರ್ತಕಿ ಬಂದಳು
Next post ಅಮ್ಮ ಅಮ್ಮ, ಬೆಕ್ಕು ನಾಯಿ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…