Home / ಲೇಖನ / ಇತರೆ / ಮಾನವ ನೀನೆಷ್ಟು ಕ್ರೂರಿ ?

ಮಾನವ ನೀನೆಷ್ಟು ಕ್ರೂರಿ ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಕೆಲವೊಂದು ಸನ್ನಿವೇಶಗಳನ್ನು, ದೃಶ್ಯಗಳನ್ನು ನಾವು ಕಣ್ಣಾರೆ ನೋಡದಿದ್ದರೂ ನಮ್ಮ ಮನಸ್ಸು ಅದನ್ನು ಕಲ್ಪಿಸಿಕೊಂಡು ಅತಿಸೂಕ್ಷ್ಮವಾಗಿ ಚಿತ್ರಿಸಿಕೊಂಡಿರುತ್ತದೆ. ಆ ಚಿತ್ರ ನಮ್ಮ ಮನಃಪಟಲವಲ್ಲಿ ಅಚ್ಚೊತ್ತಿ ಸದಾ ಕಾಡುತ್ತಿರುತ್ತವೆ. ಆ ಕೆಲಚಿತ್ರಗಳು….  ಭಾರತೀಯ ಯೋಧರ ಒಂದೊಂದು ಅಂಗಗಳನ್ನೂ ಬೇರ್ಪಡಿಸಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ಬಾಂಗ್ಲಾದೇಶ ರೈಫಲ್ಸ್ ಪಡೆಯವರು, ತಮ್ಮ ಕೈಗೆ ಸಿಕ್ಕ ಯುದ್ಧ ಕೈದಿಗಳನ್ನು ನಾನಾ ವಿಧದ ಹಿಂಸೆ ನೀಡಿ ಬದುಕಲಾರದಂತೆ, ಸಾಯಲಾರದಂತೆ ಗೋಳುಗುಟ್ಟಿಸುತ್ತಿರುವ ನೆರೆದೇಶದವರು, ಆಗಷ್ಟೇ ಹುಟ್ಟಿ, ಕಣ್ಣು ಬಿಡುತ್ತಿರುವ ಹೆಣ್ಣು ಕೂಸಿನ ಬಾಯಲ್ಲಿ ಭತ್ತ ತುಂಬಿ ಕ್ರೂರವಾಗಿ ಕೊಲ್ಲುವವರು.

ವರದಕ್ಷಿಣೆ ತರಲಿಲ್ಲವೆಂದು ಹೆಣ್ಣಿಗೆ ವಿವಿಧ ಹಿಂಸೆ ನೀಡುತ್ತಾ ಹೀನ ಸಂತೋಷವನ್ನನುಭವಿಸುವವರು, ಕ್ಷುಲ್ಲಕ ಕಾರಣಕ್ಕೆ ರಕ್ತ ಬಸಿದು ಕೊಲೆ ಮಾಡುವವರು, ಕಾಲುಬಾಯಿ ರೋಗಕ್ಕೆ ತುತ್ತಾದ ಸಾವಿರಾರು ಹಸುಗಳ ಮಾಂಸ ಉಪಯೋಗಕ್ಕೆ ಬರುವುದಿಲ್ಲವೆಂದು ಅವುಗಳನ್ನೆಲ್ಲಾ ಒಟ್ಟಾಗಿ ಅಗ್ನಿಗಾಹುತಿ ನೀಡುತ್ತಿರುವ ವಿದೇಶಿಯರು, ದೇವರು ಒಲಿಯುವನೆಂಬ ಮೂಢನಂಬಿಕೆಗೆ ಬಲಿಯಾಗಿ ಕುರಿ, ಕೋಳಿ, ಕೋಣನ ಬಲಿ ನೀಡುತ್ತಿರುವ ಭಕ್ತರು, ತನ್ನ ಜಿಹ್ವಾಚಾಪಲ್ಯಕ್ಕಾಗಿ ಅನುದಿನವೂ ಸಾವಿರಾರು ಪ್ರಾಣಿ ಬಲಿ ನಡೆಸುತ್ತಿರುವವರು…. ಒಂದೇ, ಎರಡೇ ! ಮಾನವನ ಕ್ರೂರ ಮನದ ಈ ಚಿತ್ರಗಳು ನೂರು ಕರಾಳ ಕಥೆ ಹೇಳಬಲ್ಲವು.

ಮಾನವ ಜನ್ಮ ದೊಡ್ಡದು. ಅತ್ಯಂತ ಶ್ರೇಷ್ಠವಾದುದೆಂದು ಮಾನವನ ನಂಬುಗೆ. ಆದರೆ ಇಂತಹಾ ಘೋರಗಳನ್ನೆಸಗುತ್ತಿರುವುದೂ ಮಾನವ ಮಾತ್ರ! ಪ್ರಾಣಿಗಳು ತಮ್ಮ ಹಸಿವಿಂಗಿಸಿಕೊಳ್ಳಲಷ್ಟೇ ಬೇರೆ ಪ್ರಾಣಿಗಳನ್ನು ಬೇಟೆಯಾಡುತ್ತವೆ ಕೊಲ್ಲುತ್ತವೆ. ಆದರೆ ಈ ನರಮನುಷ್ಯ ನಾಗರೀಕತೆ ಬೆಳೆದಂತೆಲ್ಲ ಸಭ್ಯನಾಗದೇ ಸಭ್ಯತೆಯ ಮುಸುಕಿನೊಳಗೆ ಇಂಥಹಾ ಹೀನ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾನೆ. ಮಾನವನ ರಾಕ್ಷಸತ್ವದ ಈ ಮುಖಗಳನ್ನು ಕಂಡಾಗ ಎದೆ ನಡುಗುತ್ತದೆ. ಮನುಕುಲಕ್ಕೆ ಉತ್ತಮ ಭವಿಷ್ಯವಿದೆಯೇ ಎಂದು ಚಿಂತಿಸುತ್ತದೆ.

ತಲ್ಲಣಿಸುವ ಮನ ಗದ್ಗದಿಸುತ್ತಾ ‘ಓ ಮಾನವ ನೀನೆಷ್ಟು ಕ್ರೂರಿ ನಿನ್ನ ಅಹಂಕಾರಕ್ಕಾಗಿ, ಸ್ವಾರ್ಥ ಹಿತಕ್ಕಾಗಿ, ನಿನ್ನ ಪ್ರತಿಷ್ಠೆ ಮೇಲರಿಮೆಗಾಗಿ ಶ್ರೇಷ್ಠನೆಂಬ ಪೊಗರಿನಿಂದ ಅದೆಷ್ಟು ಘೋರಗಳನ್ನು ನಡೆಸುತ್ತಿರುವ ‘ನಿಜಕ್ಕೂ ನಿನಗೆ ಕ್ಷಮೆಯಿದೆಯೆ?’ ಎಂದು ಕೇಳುತ್ತದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...