Home / ಲೇಖನ / ವಿಜ್ಞಾನ / ಭವಿಷ್ಯದಲ್ಲಿ ಪ್ರಪಂಚ ಹೀಗಾಗಬಹುದು

ಭವಿಷ್ಯದಲ್ಲಿ ಪ್ರಪಂಚ ಹೀಗಾಗಬಹುದು

“ಕಲ್ಲುಕೋಳಿ ಕೂಗ್ಯಾವೋ, ಬೆಂಕಿ ಮಳೆ ಸುರಿದೀತೋ ….. ..?” ಹೀಗೆ ಕಾಲಜ್ಞಾನ
ಭವಿಷ್ಯ ನುಡಿದಿತ್ತು. ಈಗ್ಗೆ 50 ವರ್ಷಗಳ ಹಿಂದೆ ಕಾಲಜ್ಞಾನವೆಲ್ಲ ಬೊಗಳೆ ಎಂಬಂತಹ
ಮಾತುಗಳನ್ನು ಆಡಿದ್ದೆವು. ಆದರೆ ಕಾಲಜ್ಞಾನದ ಅಂತರಂಗದ ಅರ್ಥವನ್ನು ಬಿಡಿಸಿದಾಗ
ಘನವಸ್ತುಗಳು ವಿಜ್ಞಾನದ ಆವಿಷ್ಕಾರದಿಂದ ಜೀವಪಡೆಯುತ್ತವೆ, ಅತ್ಯಂತ ತೀಕ್ಷ್ಣವಾದ ಆಮ್ಲ
ಸುರಿಯುತ್ತದೆ ಎಂದು ಅರ್ಥಮಾಡಿಕೊಂಡಾಗ ಇದೆಲ್ಲ ಒಂದು ಬಗೆಯಲ್ಲಿ ನಿಜವಾಗಿವೆ ಮತ್ತು
ಆಗಲಿವೆ, ಆಗಬಹುದು, ಎಂಬ ಅಭಿಪ್ರಾಯಕ್ಕೆ ಎಲ್ಲರೂ ಬರುವಂತಾಗಿದೆ. ಮುಂದಿನ ಹತ್ತಾರು
ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ತನ್ನ ಶೋಧನೆಗಳನ್ನು ಒರೆಹಚ್ಚಿ ಅಸಾಧ್ಯವಾದುದನ್ನು ಸಾಧ್ಯಗೊಳಿಸುತ್ತಲಿದೆ.

ಆಹಾರ, ಔಷಧಿ, ಕಾರು, ವಿಮಾನ ಇನ್ನೂ ಮುಂತಾದ ವಸ್ತುಗಳು ವಿಸ್ಮಯವಾದ
ರೂಪತಾಳಿ ಅಚ್ಚರಿಯ ಫಲಿತಾಂಶವನ್ನು ನೀಡುತ್ತವೆ. ಈಗಿನ ಆಹಾರ ಪದಾರ್ಥಗಳನ್ನೇ
ತೆಗೆದುಕೊಂಡರೆ ಇಂದಿನ ಅಕ್ಕಿ, ಗೋಧಿ, ರಾಗಿ, ಜೋಳ ಎಲ್ಲದರಲ್ಲಿಯೂ ಅನೇಕ ಗೊಬ್ಬರಗಳ
ಸಮೀಕರಣದ ಕಾರಣ ವಿಟ್ಯಾಮಿನ್ ರಹಿತವಾಗಿ ದೊರೆಯುತ್ತಿದ್ದು ಅಂತರಂಗದಲ್ಲಿ
ನಿಧಾನವಾಗಿ ವಿಷಯುಕ್ತವಾಗಿವೆ. ಈ ಕಾರಣವಾಗಿ ಮನುಷ್ಯನಿಗೆ ಹೃದ್ರೋಗ, ಕ್ಯಾನ್ಸರ್,
ಹೊಟ್ಟೆನೋವು, ಅಶಕ್ತತೆಗಳು ಉಂಟಾಗಿ ಬೇಗನೇ ವೃದ್ಧಾಪ್ಯ ಬರುತ್ತದೆ.ಅಥವಾ ಕಾಯಿಲೆಗಳ
ಪರಿಣಾಮವಾಗಿ ಆಯುಷ್ಯದ ಮುಂಚೆಯೇ ಆಂತ್ಯಗೊಳ್ಳುವ ಸೂಚನೆಗಳೂ ಕಂಡಿವೆ. ಇಂತಹ
ನಿಶಕ್ತವಾದ, ಅನಾರೋಗ್ಯಕ್ಕೆ ಕಾರಣವಾಗುವ ಆಹಾರ ಪದಾರ್ಥಗಳು ಭವಿಷ್ಯದಲ್ಲಿ
ಆರೋಗ್ಯವನ್ನು ವರ್ಧಿಸುವ ಔಷಧಿಯುಕ್ತ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ
ಹೇರಳವಾಗಿ ದೊರೆಯುವ ದಿನಗಳು ದೂರವಿಲ್ಲ. ಆಹಾರದ ಒಂದೊಂದು ತುತ್ತು ಕೂಡ
ಶಕ್ತಿವರ್ಧಕವಾಗಿರುತ್ತದೆ. ಸಾಮಾನ್ಯವಾಗಿ ವಯಸ್ಸಾದವರು ಹೃದ್ರೋಗ, ರಕ್ತದೊತ್ತಡ ಕಡಿಮೆ
ಸಾಂದ್ರತೆಯ ಲೈವೋಪ್ರೋಟಿನ್ಸ್ (L.D.L..) ಮುಂತಾದ ಸಮಸ್ಯೆಗಳಿಂದ ಮರಣ
ಹೊಂದುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಎದುರಿಸಲು, ಕೊಲೆಸ್ಟರಾಲ್ ‌ಅನ್ನು
ನಿಯಂತ್ರಿಸಲು ಸಾಮಾನ್ಯವಾಗಿ ನಾವು ಉಪಯೋಗಿಸುವ ಆಹಾರದಲ್ಲಿ ಬದಲಾವಣೆಯನ್ನು
ಮಾಡಿಕೊಳ್ಳಲಾಗುತ್ತದೆ. ಆದರೆ ಮುಂದೆ ಈ ಹೊಂದಾಣಿಕೆಯ ಗೂಡವೆಗೆ ಹೋಗಬೇಕಿಲ್ಲ
ಏಕೆಂದರೆ ಐಸೋಪ್ಲೇವೋನ್ಸ್ (Isoflavones) ಎಂಬ ಕೆಲವು ಪ್ರತ್ಯೇಕ ರಾಸಾಯನಿಕ
ಪದಾರ್ಥಗಳನ್ನು ಸೇವಿಸಿದರೆ ಸಾಕು. ಇದರಿಂದ ಹೃದ್ರೋಗ, ಬಿ.ಪಿ. ಮುಂತಾದ ರೋಗಗಳು
ಜಾಗ್ರತೆಯಾಗಿ ನಿಯಂತ್ರಣಗೊಳ್ಳುತ್ತವೆ ಎಂದು ಉತ್ತರ ಕೆನಡಾದ ವೆಟ್‌ಫಾರ್‌ಹ್ಟ ವಿಶ್ವ
ವಿದ್ಯಾಲಯದ ಬ್ಯಾಪ್ಟಿಸ್ಟ್ ಮೆಡಿಕಲ್ಸ್‌ ಕೇಂದ್ರಕ್ಕೆ ಸೇರಿದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೋಯಪ್ರೋಟಿನನ್ನು ಹೆಚ್ಚಿನ ಪ್ರಮಾಣ ಐಸೋಪ್ಲೇವೋನ್ಸ್ ಜತೆಗೆ ಸೇರಿಸಿಕೊಡು
ವುದರಿಂದ ಬೊಜ್ಜಿನ ಪ್ರಮಾಣವನ್ನು ಕುಗ್ಗಿಸಬಹುದೆಂದು ಅಧ್ಯಯನವೊಂದರಲ್ಲಿ ಜಾನ್ ಆರ್
ಕ್ರೂಯಿಸ್ III ಎಂಬ ವಿಜ್ಞಾನಿ ಹೇಳುತ್ತಾರೆ. ಅಲ್ಲದೆ ಐಸೋಪ್ಲೇರ್ವೊನ್ಸ್ ಪ್ರಮಾಣವನ್ನು
ಹೆಚ್ಚಿಸಿದಾಗ ಅದು ಮಹಿಳೆಯರಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವುದನ್ನು ಅವರು
ಕಂಡುಕೊಂಡಿದ್ದಾರೆ. ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ನಡೆಸುವ ಸಂಶೋಧನೆಗಳ
ಫಲಿತಾಂಶಗಳನ್ನು ಅನುಸರಿಸಿ ಸಿದ್ಧ ಆಹಾರವನ್ನು ತಯಾರಿಸಿ ಸಂಸ್ಥೆ ಹೆಚ್ಚಿನ ಪೋಶಕಾಂಶಗಳುಳ್ಳ
ಆಹಾರವನ್ನು ತಯಾರಿಸುತ್ತವೆ. ಆಹಾರದ ಬೇಡಿಕೆಗೆ ತಕ್ಕಂತೆ ಸಿದ್ಧ ಆಹಾರ ತಯಾರಿಸಿ ಕೊಡುವ
ಕಂಪನಿಗಳು ತಮ್ಮಉತ್ಪನ್ನವನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರಾಯಶ: 2050ರ ಹೊತ್ತಿಗೆ ಆರೋಗ್ಯಕ್ಕೆ
ಹಾನಿಯುಂಟು ಮಾಡುವ ಪದಾರ್ಥಗಳು ದೊರೆಯಲಾರವೆನಿಸುತ್ತದೆ.
೦೦೦

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...