ಬಿಳಿಸೀರೆಯವಳು

ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ
ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ
ನಿನ್ನಿಂದ ಮನಿಚೆಂದ ಮನಿಬಾಳು ಆನಂದ
ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ

ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ
ಈ ಮನಿಯ ನೀನೇs¸ ಬೆಳಗುವಾಕೆ
ಗ್ಯಹಲಕ್ಷ್ಮಿ ನೀ ಹೋದ್ರೆ ದಾರಿದ್ರ್ಯ ತುಂಬ್ತೈತೆ
ಹೊರಗ್ಹೋಗಿ ನೀ ಹ್ಯಾಂಗೆ ಉಳಿಯುವಾಕೆ

ನೀನಿದ್ರೆ ಮನಿಯಾಗೆ ಧನಧಾನ್ಯ ತುಂಬ್ತಾವೆ
ಬಾವ್ಯಾಗೆ ಗಂಗಮ್ಮ ತುಳುಕುವಂಗೆ
ನೀನಂದ್ರೆ ಶಕ್ತೀ ನೀನಂದ್ರೆ ಮುಕ್ತೀ
ಆನಂದ ರಸ ತಾನು ಹರಿಯುವಂಗೆ

ಯಾವ ಪೀಡೆ ಬಡಕೊಂತ್ಯೊ
ಯಾವ ಮಾರಿ ಹೊಕ್ಕೂಂತ್ಯೊ
ದೆವ್ವ ಬಡದೋರಂಗೆ ನೀ ಹೋಗ್ತೀಯಾ
ನನಕೈಯಾಗೇನಿಲ್ಲ ನಿನ್ಹಿಡಿದು ನಿಲ್ಲಸಾಕೆ
ಜಲಪಾತದೆದುರಿಗೆ ಮೀನಾಗ್ತೀಯ

ನಿನ್ನಿಂದ ಏಸ್ಟೊಟ್ಲ ತುಂಬಿಕೊಂಡು ಹಾಡಬೇಕೊ
ವಂಶದ ಬಳ್ಳಿಯೆಷ್ಟು ಹಬ್ಬಬೇಕೊ
ಏಸ್ಬಾಳು ಬಂಗಾರ ಆಗ್ಬೇಕೊ ಬೆಳಿಬೇಕೊ
ಅದ ಬಿಟ್ಟ ನೀ ನನ್ನ ದಬ್ಬಬೇಕೊ?
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಕ್ಷಕರಿಗೊಂದು ಮನವಿ-ಡಾ|| ಅಂಬೇಡ್ಕರ್
Next post ಕಾಯಕದ ಕಟ್ಟಳೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys