Home / ಬಾಲ ಚಿಲುಮೆ / ಕಥೆ / ಧೂತರು ವಂಚಿಸಿದ ಕಥೆ

ಧೂತರು ವಂಚಿಸಿದ ಕಥೆ

ಒಂದಾನೊಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಆತನು ಅಗ್ನಿ ಹೋತ್ರನನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದನು. ಒಂದು ಸಲ ಆತನಿಗೆ ಯಜ್ಞ ಮಾಡಬೇಕು ಎನ್ನಿಸಿತು. ಅದಕ್ಕಾಗಿ ಒಂದು ಆಡು ತರಬೇಕು ಎಂದು ಬೇರೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಒಬ್ಬ ಧನಿಕನನ್ನು ಕೇಳಿ ಒಂದು ಆಡನ್ನು ತಂದನು. ಅದನ್ನು ಆತನು ಹೊತ್ತುಕೊಂಡು ಬರುತ್ತಿರುವಾಗ, ಮೂವರು ದುಷ್ಟರು ಅದನ್ನು ಕಂಡು “ಆಡು ಚೆನ್ನಾಗಿದೆ. ಏನಾದರೂ ಮಾಡಿ ಹಾರಿಸ ಬೇಕು” ಎಂದು ಆಲೋಚಿಸಿಕೊಂಡರು. ಆವರಲ್ಲಿ ಒಬ್ಬನು ಮುಂದೆ ಬಂದು “ಎನಿದು, ಬ್ರಾಹ್ಮಣ, ಹೀಗೆ ಮಾಡುವವರುಂಟೆ? ಈ ನಾಯನ್ನು ನಿಮ್ಮಂಥವರು ಮುಟ್ಟಲೂಬಾರದು. ಹೀಗಿರಲು, ಇದನ್ನು ಹೊತ್ತುಕೊಂಡು ಹೋಗುವುದು ಎಂದರೆ. ಏನನ್ಯಾಯ?” ಎಂದನು. ಆ ಬ್ರಾಹ್ಮಣನು ಅದನ್ನು ಕೇಳಿ “ಏನನ್ಯಾಯ್ಯಾ, ನಿನಗೇನು ಕಣ್ಣು ಕಾಣಿಸುತ್ತದೆಯೋ ಇಲ್ಲವೋ? ಆಡನ್ನು ನಾಯಿಯೆನ್ನುತ್ತೀಯೇ?” ಎಂದು ರೇಗಿದನು. ಅವನು “ಹೋಗಲಿ ಬಿಡಿ, ಸ್ವಾಮಿ ನಿಮ್ಮ ಹಣೆಯ ಬರೆಹ ನಮಗೇನ?” ಎಂದುಕೊಂಡು ಅತ್ತ ಹೋದನು.
ಬ್ರಾಹ್ಮಣನು ಅಷ್ಟುದೂರ ಹೋಗುವುದರೊಳಗಾಗಿ ಇನ್ನೊಬ್ಬ ಬಂದು “ಶಿವ ಶಿವಾ, ಏನನ್ಯಾಯ? ಈ ಸತ್ತ ಮಗುವನ್ನು ಹೀಗೆ ಹೊತ್ತುಕೊಂಡು ಹೋಗುತ್ತಿರುವರಲ್ಲ!” ಎಂದನು. ಬ್ರಾಹ್ಮಣನು “ಛೇ, ಏನು ಮಾತನಾಡುತ್ತೀಯೆ? ಬದುಕಿರುವ ಆಡನ್ನು ಸತ್ತ ಮಗುವೆನ್ನುತ್ತಿದ್ದೀಯೆ?” ಎಂದು ಗದರಿಸಿದನು. ಅದ ಅವನು “ತಪ್ಪಾಯಿತು ಸ್ಟಾಮಿ, ನನಗೆ ಹಾಗೆ ಕಂಡಿತು, ಹಾಗೆಂದೆ. ತಮ್ಮ ಇಷ್ಟ. ತಮಗೆ ತೋರಿದಂತೆ ಮಾಡಿ” ಎಂದು ಕೈ ಮುಗಿದು ಹೋದನು.
ಇನ್ನಷ್ಟು ದೂರ ಹೋಗುವುದರೊಳಗೆ ಇನ್ನೊಬ್ಬ ಧೂರ್ತನು ಎದುರಿಗೆ ಬಂದನು. ಅವನು ಬ್ರಾಹ್ಮಣನ ಕಡೆಗೆ ನೋಡಿ ಆಶ್ಚರ್ಯಪಡುತ್ತಾ, “ಕೈ ಮುಗಿದುಕೊಂಡು, ಸ್ವಾಮಿ, ಇದು ಸರ್ವಥಾಯುಕ್ತವಲ್ಲ. ಕತ್ತೆಯನ್ನು ಹೊತ್ತುಕೊಂಡು ಹೋಗುವುದು ಎಂದರೇನು? ಮೊದಲು ಇದನ್ನು ಬಿಡಿ. ಇನ್ನಿಬ್ಬರು ನೋಡುವುದಕ್ಕಿ೦ತ ಮುಂಚೆ ಬಿಡಿ” ಎಂದನು. ಬ್ರಾಹ್ಮಣನಿಗೆ “ಇದೇನಿದು” ಒಬ್ಬನಿಗೆ ನಾಯಿಯಾಗಿ ಕಂಡಿತು. ಇನ್ನೊಬ್ಬನಿಗೆ ಸತ್ತ ಮಗುವಾಗಿ ಕಾಣಿಸಿತು. ಮತ್ತೊಬ್ಬನಿಗೆ ಕತ್ತೆಯಾಗಿ ಕಾಣಿಸಿತು. ನನಗೆ ಈಗಲೂ ಆಡಾಗಿ ಕಾಣಿಸುತ್ತಿದೆ. ಇದು ಹೀಗೆ ಒಬ್ಬೊಬ್ಬರಿಗೆ ಒಂದೊಂದಾಗಿ ಕಾಣಿಸಬೇಕಾದರೆ, ನಿಜವಾಗಿಯೂ ಪಿಶಾಚಿಯೇ ಆಗಿರಬೇಕು.” ಎನ್ನಿಸಿತು. ಆ ಕೂಡಲೇ ಅವನು ಅದನ್ನು ಧೊಪ್ಪನೆ ಎತ್ತಿಹಾಕಿ ಓಡಿ ಹೋದನು. ಧೂರ್ತರು ಅದನ್ನು ಹೊತ್ತುಕೊಂಡು ಹೋಗಿ ಪೂರೈಸಿದರು. ನಾವು ಹಾಗೇ ಮಾಡಬೇಕು.
ಸೇವಕನಾಗಿ ವಿನಯದಿಂದ ಓಲೈಸಿದರೆ, ಅತಿಥಿಯಾಗಿ ಹೋಗಿ ಒಳ್ಳೆಯ ಮಾತುಗಳನ್ನಾಡಿದರೆ, ಹೆಂಗಸು ಅತ್ತು ಹೆದರಿಸಿದರೆ, ಮೋಸಗಾರರು ಸವಿಮಾತು ಆಡಿದರೆ, ಮೋಸ ಹೋಗದವರು ಯಾರು? ದುರ್ಬಲರೇ ಆಗಿರಲಿ, ಹೆಚ್ಚಾಗಿದ್ದರೆ ಅವರ ಜೊತೆಯಲ್ಲೂ ವಿರೋಧ ಮಾಡಬಾರದು. ಕೇಳಿಲ್ಲವೆ?
ಸಂಖ್ಯೆಯಲಿ ಹಿರಿದಾದ ಜನರೊಡನೆ ಹಗೆಯಾಗದು ॥ 
ಹಾವು ಹಿರಿದಾದರೂ ಇರುವೆ ತಿಂದು ಹಾಕುವುದು ॥ ೨೨ ॥
*****
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...