Home / ಬಾಲ ಚಿಲುಮೆ / ಕಥೆ / ಚತುರ್ದಂತನ ಕಥೆ

ಚತುರ್ದಂತನ ಕಥೆ

ಒಂದಾನೊಂದು ಕಾಡಿನಲ್ಲಿ ಚತುರ್ದಂತನೆಂಬ ಮಹಾ ಗಜವಿತ್ತು. ಅದು ಒ೦ದು ಹಿಂಡಿಗೆ ಸಲಗವಾಗಿ ಸುಖವಾಗಿತ್ತು. ಆ ಆನೆಯ ಕಾಡಿನಲ್ಲಿ ಒಂದು ಸಲ ದೊಡ್ಡ ಅನಾವೃಷ್ಟಿಯು ಬಂದು, ಮಳೆಗಳು ಇಲ್ಲದೆ ಹೋದುವು. ಕೆರೆಗಳು, ಮಡುಗಳು, ಸರೋವರಗಳು ಒಣಗಿ ಹೋದುವು. ಆಗ ಆನೆಗಳೆಲ್ಲ ಆ ಸಲಗನನ್ನು ಕುರಿತು “ದೇವಾ, ಮರಿಗಳೆಲ್ಲ ಬಾಯಾರಿಕೆಯಿಂದ ಸಾಯುವಂತಾಗಿವೆ: ಕೆಲವು ಸತ್ತೂ ಹೋಗಿನೆ. ಅದರಿಂದ ಎಲ್ಲಾದರೂ ನೀರಿರುವ ಕಡೆಯನ್ನು ನೋಡಬೇಕು. ಸದ್ಯಕ್ಕೆ ನೀರು ಕುಡಿದು ಬದುಕೋಣ” ಎಂದುವು. ಅಗ ಆನೆಯು ಹಾಗೇ ನಿಂತುಕೊಂಡು ಬಹುವಾಗಿ ಯೋಚನೆಮಾಡಿ ಕೊನೆಗೆ ಹೇಳಿತು: “ಜನಗಳು ಹೋಗುವುದಕ್ಕೆ ಆಗದಿರುವ ಕಡೆಯಲ್ಲಿ ಒಂದು ದೊಡ್ಡ ಮಡುವಿದೆ. ಅದು ಯಾವಾಗಲೂ ಪಾತಾಲ ಗಂಗಾಜಲದಿಂದ ಪೂರ್ಣವಾಗಿಯೇ ಇರುತ್ತದೆ. ಅಲ್ಲಿಗೆ ಹೋಗೋಣ” ಎಂದು ಹೇಳಿ ಆನೆಗಳ ಹಿಂಡನ್ನು ಕರೆದು ಕೊಂಡು ಐದು ರಾತ್ರಿಗಳು ನಡೆದು ಅಲ್ಲಿಗೆ ಹೋಯಿತು. ಆನೆಗಳೂ ಅಲ್ಲಿ ಬೆಳಗಿನಿಂದ ಸಂಜೆಯವರೆಗೂ ತಮಗೆ ಮನಬಂದಂತೆ ನೀರಿನಲ್ಲಿ ಆಡುತ್ತಿದ್ದು ಹೋದುವು.
ಆ ಸರೋವರದ ಸುತ್ತಲೂ ಮೊಲಗಳು ಮನೆಮಾಡಿ ಕೊಂಡಿದ್ದುವು. ಆ ಆನೆಗಳು ಬಂದು ಹೋಗುವಾಗ ಅವುಗಳ ಕಾಲಿಗೆ ಸಿಕ್ಕಿ ಎಷ್ಟೋ ಮೊಲಗಳು ಹತವಾದುವು. ಮೊಲಗಳ ಬಿಲಗಳಂತೂ ಹೇಳಲು ಹೆಸರಿಲ್ಲದೆ ಹೋದುವು. ಅವುಗಳಿಗೆ ಸಿಕ್ಕಿ ಬದುಕಿ ಕೊಂಡರೂ ಅಂಗಭಂಗವನ್ನು ಹೊಂದಿ ಸತ್ತಂತೆ ಆದುವು. ಅವೆಷ್ಟೋ ಹೀಗೆ ಆಗಲು ಕೊನೆಗೆ ಅವುಗಳೆಲ್ಲಾ, ಆನೆಗಳು ಹೋದ ಮೇಲೆ ಸಭೆ ಮಾಡಿದುವು: “ಹೀಗಾದರೆ ನಾವು ಬದುಕುವಂತಿಲ್ಲ. ಆ ಆನೆಗಳ ಹಿಂಡು ದಿನವೂ ಬರುವುದು. ಅದಕ್ಕೆ ಇನ್ನೆಲ್ಲೂ ನೀರಿಲ್ಲ. ಅವು ಒ೦ದು ಸಲ ಬಂದು ಹೋದರೇನೇ ನಮಗೆ ಇಷ್ಟು ಅವಸ್ಥೆಯೆಂದ ಮೇಲೆ, ದಿನ ದಿನವೂ ಬಂದರೆ ನಮ್ಮ ಗತಿಯೇನು? ನಾವು ಉಳಿಯುವಂತೆಯೇ ಇಲ್ಲ. ಕೇಳಿಲ್ಲವೆ?
ಮುಟ್ಟಿ ಮುಟ್ಟುತಲೆ ಕೊಲ್ಲುವುದು ಆನೆ ॥
ಮೂಸಿ ಮೂಸುತಲೆ ಕೊಲ್ಲುವುದು ಹಾವು ॥ 
ನಗುತ ನಗುತಲೇ ಕೊಲ್ಲುವನು ಅರಸು ॥ 
ಮಾನ ತೋರುತಲೆ ಕೊಲ್ಲುವನು ದುಷ್ಟ ॥೧೨॥ 
ಅದರಿಂದ ಏನಾದರೊಂದುಪಾಯ  ಮಾಡಲೇಬೇಕು” ಎಂದು ಎಲ್ಲವೂ ಏಕ ಕಂಠದಿಂದ ಹೇಳಿದುವು. ಒ೦ದು ಹೇಳಿತು; “ಈ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗೋಣ. ಮನುವೂ. ಮನುವೂ ವ್ಯಾಸನೂ ಹೇಳಿಲ್ಲವೆ?
ಕುಲಕಾಗಿ ಬಿಡುವುದೊಬ್ಬನನು| ಕುಲವನೇ ಬಿಡು ಗ್ರಾಮಕಾಗಿ॥ 
ಗ್ರಾಮವನು ಬಿಡು ದೇಶಕಾಗಿ| ಧರೆಯ ಬಿಡಬೇಕ ತನಗಾಗಿ ॥೧೩॥ 
ಕ್ಷೇಮವನು ತಪ್ಪದೆಯೆ ಕೊಟ್ಟು| ಸಸ್ಯಗಳ ಚೆನ್ನಾಗಿ ಬೆಳೆವ | 
ಪಶುವೃದ್ಧಿಗೈವ ಭೂಮಿಯನು। ನೃಪತಿ ಬಿಡಬೇಕು ತನಗಾಗಿ ॥೧೪॥ 
ಆಪದಕೆ ಧನವ ನಿಡಬೇಕು| ಧನವ ಬಿಡಬೇಕು ಸತಿಗಾಗಿ॥ 
ಧನವನಾಗಲಿ ಸತಿಯನಾಗಲಿ | ಸತತೆ ಬಿಡಬೇಕು ತನಗಾಗಿ ॥೧೫॥ 
ಇನ್ನು ಕೆಲವರು ಹೇಳಿದರು:- ಉಂಟೆ, ತಾತ ಮುತ್ತಾತರಿಂದ ಇದ್ದು ಕೊಂಡಿರುವ ಈ ಸ್ಥಾನವನ್ನು ಥಟ್ಟನೆ ಬಿಡುವುದು ಎಂದರೆ ಹೇಗೆ? ಆ ಆನೆಗಳು ಮತ್ತೆ ಬರುವುದಕ್ಕಿಂತ ಮುಂಚೆಯೇ ಅವುಗಳನ್ನು ಹೆದರಿಸುವುದಕ್ಕೆ ಏನಾದರೊಂದು ಉಪಾಯವನ್ನು
ಮಾಡಿ. ಕೇಳಿಲ್ಲವೆ?
ವಿಷವಿಲ್ಲದಿದ್ದರೂ ಹಾವು ಹೆಡೆಯೆತ್ತಬೇಕು | 
ವಿಷವಿರಲಿ ಇರದಿರಲಿ ಹೆಡೆ ನೋಡೆ ಭೀತಿಯಹುದು ॥೧೬॥ 
ಮಿಕ್ಕವರು ಅದಕ್ಕೆ ಒಪ್ಪಿದರು. ಒಂದು ಉಪಾಯವನ್ನೂ ಒಬ್ಬರು ಹೇಳಿದರು:- ಅವರನ್ನು ಹೆದರಿಸುವುದಕ್ಕೆ ಒಂದು ಒಂದು ಉಪಾಯವಿದೆ. ನಮ್ಮ ರಾಜನಾದ ವಿಜಯದತ್ತನೆಂಬುವನು ಚಂದ್ರ ಮಂಡಲದಲ್ಲಿ ಇದ್ದಾನೆ. ಅವನು ಕಳುಹಿಸಿದನೆಂದು ಒಬ್ಬ ದೂತನನ್ನು ಈ ಸಲಗನ ಹತ್ತಿರಕ್ಕೆ ಕಳುಹಿಸೋಣ. ಆ ದೂತನು “ಚಂದ್ರನು ನೀವು ಇಲ್ಲಿಗೆ ಬರುವುದನ್ನು ನಿಷೇಧಿಸಿದ್ದಾನೆ” ಎಂದು ಹೇಳಲಿ. ಆಗ ಚಂದ್ರನು ಬೇಡವೆಂದನೆಂದು ಹೆದರಿ ಅವು ನಿಂತು ಹೋಗುವುವು.”
ಇತರರು ಹೇಳಿದರು:- “ಉಪಾಯವೇನೋ ಚೆನ್ನಾಗಿದೆ. ನಮ್ಮ ಲಂಬಕರ್ಣನು ದೂತನಾಗಿ ಹೋಗಲಿ. ಅವನು ರಚನೆ ರಚನೆಯಾಗಿ ಮಾತು ಆಡಬಲ್ಲವನು. ದೂತನು ಏನು ಮಾಡಬೇಕೆಂದು ಅರಿತವನು” ಎಂದರು. ಅದರಂತೆಯೇ ಲಂಬಕರ್ಣನು ಚಂದ್ರದೂತನಾಗಿ ಹೋಗುವುದು ಎಂದಾಯಿತು.
ಲಂಬಕರ್ಣನು ಆನೆಗಳ ಹಿಂಡು ಬರುವ ಮಾರ್ಗದಲ್ಲಿ ಎತ್ತರವಾದ ಬಂಡೆಯ ಮೇಲೆ ಕುಳಿತು, ಆ ಸಲಗನನ್ನು ಮಾತನಾಡಿಸಿದನು: “ಎಲೆ ದುಷ್ಟಗಜ, ಏನೂ ಲಕ್ಷ್ಯವಿಲ್ಲದೆ, ಕೊಂಚವೂ ಹೆದರಿಕೆಯಿಲ್ಲದೆ ಚಂದ್ರನ ಸರೋವರಕ್ಕೆ ಬರುತ್ತಿದ್ದೀಯೇ? ನೀನು ಬರಕೂಡದು. ಹಿಂತಿರುಗಿ ಹೋಗು” ಎಂದುದನ್ನು ಕೇಳಿ, ಆನೆಯು ಆಶ್ಚರ್ಯಪಟ್ಟು, “ಅಯ್ಯಾ, ನೀನು ಯಾರು?” ಎಂದಿತು. ಅದಕ್ಕೆ ಆ ಮೊಲವು “ನಾನು ಚಂದ್ರ ಮಂಡದಲ್ಲಿರುವ ಲಂಬಕರ್ಣನು. ಭಗವಾನ್ ಚಂದ್ರನು ನಿನ್ನ ಬಳಿಗೆ ಅಟ್ಟಿದ ದೂತನು.” ಎಂದಿತು. ಆನೆಯು “ಭಗವಾನ್ ಚಂದ್ರನು ಏನು ಅಪ್ಪಣೆ ಮಾಡಿರುವನೋ ಹೇಳು.” ಎನ್ನಲು, ಮೊಲವು “ಹಿಂದಿನ ದಿವಸ ನೀನು ನಿನ್ನ ಹಿ೦ಡಿನೊಡನೆ ಇಲ್ಲಿಗೆ ಬಂದಾಗ ಎಷ್ಟು ಸಾವಿರ ಮೊಲಗಳಿಗೆ ಕೇಡಾಯಿತು ಬಲ್ಲೆಯಾ? ಮೊಲಗಳು ನಮ್ಮವರೆ೦ದು ಕಾಣೆಯಾ?” ಅದರಿಂದ ಬದುಕಬೇಕೆಂದಿದ್ದರೆ ಹಿಂದಿರುಗು. ಇನ್ನು ಇಲ್ಲಿಗೆ ಬರಬೇಡ. ಎಂದು ಭಗವಾನ್ ಚಂದ್ರನ ಅಪ್ಪಣೆಯಾಗಿರುವುದು. ಈಗ ಚಂದ್ರನೂ ತನ್ನ ಕಡೆಯವರ ದುಃಖವನ್ನ ವಿಚಾರಿಸಲು ಈ ಸರೋವರಕ್ಕೆ ಬಂದಿರುವನು ನೋಡು,” ಎಂದು ನೀರಿನಲ್ಲಿ ಪ್ರತಿಬಿಂಬಿಸಿದ್ದ ಚಂದ್ರನ ಬಿಂಬವನ್ನು ತೋರಿಸಿತು.
ಆನೆಯು ನೀರಿನಲ್ಲಿರುವ ಚಂದ್ರನ ಪ್ರತಿಬಿಂಬವನ್ನು ನೋಡಿತು. ಅದು ಅಲೆಗಳಿಗೆ ಸಿಕ್ಕಿ ಹುಣಿಯುರಲು, ಆನೆಗೆ ಚಂದ್ರನು ಕೋಪಗೊಂಡು ಹಾರಾಡುತ್ತಿರುವನು ಎನ್ನಿಸಿತು. ಆ ಬಿಂಬಕ್ಕೆ ಕೈ ಮುಗಿದು “ದೇವ, ಅಪರಾಧವನ್ನು ಮನ್ನಿಸು. ಇನ್ನೂ ಇತ್ತ ಕಡೆ ಬರುವುದಿಲ್ಲ. ಎಂದು ತನ್ನವರನ್ನು ಕರೆದುಕೊಂಡು ಹೊರಟು ಹೋಯಿತು. ಮೊಲಗಳು ಸುಖವಾಗಿದ್ದುವು. ಅದರಿಂದ ನಾನು “ಚಂದ್ರಮನ ಹೆಸರೆತ್ತಿ ಬದುಕಿದುವು ಮೊಲಗಳು” ಎಂದು ಹೇಳಿದುದು. ಹಾಗಿಲ್ಲದೆ, ಕೀಳಾದವನನ್ನು ಕಟ್ಟಿಕೊಂಡರೆ ಆದೀತೆ? ಕೇಳಿಲ್ಲವೆ?
ಮೊಲವು ಹಕ್ಕಿಯು ಕಾದಿದುವು| ನ್ಯಾಯ ಕೇಳಲು ಹೋದುವು ॥ 
ಬೆಕ್ಕು ಹೇಳಿತು ನ್ಯಾಯವಾ। ತಿಂದು ಬಿಟ್ಟಿತು ಇಬ್ಬರಾ ॥೧೭॥ 
ಹಕ್ಕಿಗಳು “ಅದು ಹೇಗೆ?” ಎಂದು ಕೇಳಿದುವು. ಕಾಗೆಯು
ಹೇಳಿತು:-
*****
ಗುಬ್ಬಿ ಮೊಲ ಮತ್ತು ಬೆಕ್ಕಿನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...