ಝೇಂಕಾರ ಪಲ್ಲವಿ

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ
ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ
ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ.

ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ
ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ
ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ.

ಭೂಮಿಯ ಬಿರುಕಲಿ, ನೋವಿನ ನಂಜಲಿ
ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ
ಬಾ!  ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ.

ಬಿದಿರಿನ ಕೊಳಲಲಿ, ಉಸಿರಿನ ಹಸಿರಲಿ
ಪದರಿನ ಒಳ ಆಳದಿ, ಗರಿಗೆದರಿದ ಎದೆಯಲಿ
ಬುದ್ಧ!  ನಿನ್ನ ಕಠಿಣ ಉಯ್ಯಾಲೆ ತೂಗುತಿದೆ.

ಮನ ಜೋಕಾಲಿ ಯಾಡುತ್ತಿದೆ
ಸಿದ್ಧ ನಿನ್ನ ಪ್ರಣವ ಲೀಲೆಯಲಿ
ಹೃದಯ ವಿಹಾರದ, ಭಿಕ್ಷು ಸುಳಿದಾಟದಲಿ.

ಬದ್ಧತ್ವದ ಒಲವಲಿ ಅದ್ದುತ ಲೇಖನಿ
ಬರೆದಿರುವೆ ಝೆನ್ ಝೇಂಕಾರವಾಗಿ
ಕಾಡು ಹೂ ಹೃದಯದ ಸತ್ಯ ಸಾಕಾರವಾಗಿ

ಬೇಡೆನೆಗೆ ರಂಗಿನ ಕಮಲದ ಶತದಳವು
ಮನಸ್ಥಿತವಾಗಿದೆ ಶುಭ್ರ ಶ್ವೇತ ಕಮಲದಲಿ
ಸಿದ್ಧ ಬುದ್ಧನ ವಿಮಲ ಮಂದಸ್ಮಿತದಲಿ.

ಮೊಗ್ಗಿನ ಮನದಲಿ, ಬುದ್ಧನ ಪ್ರತಿಮೆ
ಅರಳಿದ ಹೂವಲಿ, ಬುದ್ಧತ್ವದ ಪ್ರಜ್ಞೆ
ಫಲದಲಿರಿಸಿ ಭೋಧಿಸತ್ವದ ಸವಿ ರುಚಿ
ಒಲವಲಿರಿಸಿ ಬೌದ್ಧ ತತ್ವದ ಸವಿ ಶುಚಿ.
ಹೊಮ್ಮಿಸಿದೆ ಝೆನ್ ಝೇಂಕಾರದ ರುಚಿ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಣಕ್ಕೆ ಒಳಗಾಗೊ ನರಕುರಿಗಳೆ
Next post ಸಂಗೀತ ಸಂಜೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…