Home / ಕವನ / ಕವಿತೆ / ಗೆಲುವು ನಮ್ಮದೊಂದೆ ಗುರಿ

ಗೆಲುವು ನಮ್ಮದೊಂದೆ ಗುರಿ

ಸುಳ್ಳು ಸತ್ಯ ಇಲ್ಲ ತಥ್ಯ
ಗೆಲುವು ಒಂದೆ ನಮ್ಮ ಗುರಿ
ಒಳ್ಳೆತನವು ಮಳ್ಳತನವು
ಬಲವು ಇದ್ದರಲ್ಲಿ ಸರಿ

ಬಾಳಿದೊಂದು ಸಮರದಂತೆ,
ನುಗ್ಗು ನುಗ್ಗು ಮುಂದಕೆ
ವೇಳೆಗಳೆಯ ಬೇಡ ಸಾಗು
ಬೀಳಬೇಡ ಹಿಂದಕೆ!

ಬಾಳಿಗಿಹುದು ಒಂದೆ ಸೂತ್ರ
ಬಾಳುವುದೇ ಪೂರ್ಣ ಅರ್ಥ
ಗಾಳಿ ಬೀಸುತಿಹುದೆ ಸಾರ್ಥ
ನೀತಿ ನೇತಿ ಎಲ್ಲ ವೃರ್ಥ!

ಜತೆ-ಜೊತೆಗಳನರಸಬೇಡ
ಹಿತವಹಿತಕೆ ಮರುಗಬೇಡ
ಕ್ರತು ಧರ್ಮವ ತೊರೆಯ ಬೇಡ
‘ಮಿಜಿ ಮಿಜಿ’ ನೀ ಮಾಡಬೇಡ

ಬಿದ್ದರೇನು ಮತ್ತೆ ಏಳು
ಎದ್ದೆನೆಂದು ಒತ್ತಿ ಹೇಳು!
ಗೆದ್ದ ಹೊರತು ಬಾಳು ಹಾಳು
ಇದ್ದುದೆಲ್ಲ ಗಾಳು ಗೀಳು!

ಆಳುವುದೇ ನಮ್ಮ ಧರ್ಮ
ಬಾಳುವುದೇ ನಮ್ಮ ಕರ್ಮ
ಬೀಳದಿಹುದೆ ಮೂಲ ಮರ್ಮ
ಇದನುಳಿದುದು ಬರಿ ಅಧರ್ಮ!

ನಿಂತವರೇ ನೆಲಕೊಡೆಯರು
ಸಂತೆಯ ಜನ ಉಳಿದವರು
ಚಿಂತಿಸದಿರು ಅವರಿವರು
ಇಂತಿರುವರೆ ನಮ್ಮವರು!

ಗೆಲವು ಪುರುಷ ತೊಟ್ಟ ಛಲವು
ನೀತಿ ನಿಯಮ ಇಲ್ಲಿ ಇಹವು;
ಬಲವು ನಮ್ಮದೊಂದೆ ಅಳವು
ಅದುವೆ ನಮ್ಮ ಧೀರ ದಳವು!

ಮನುಜ ಕುಲದ ಮೂರ್ತಿ ನೀನು
ಮನುಮನಸಿನ ಸ್ಫೂರ್ತಿ ನೀನು
ಮನುವಂಶಕೆ ಕೀರ್ತಿ ಭಾನು
ಇಲ್ಲ ನಿನಗೆ ಸರಿ ಸಮಾನು!

ನೀನು ಗೆದ್ದ ಗೆಲವು ಮನುಜ-
ರೆತ್ತಿ ಕೊಳ್ಳುವ ಅಮೃತ ಫಲವು;
ನೀನು ಬಿದ್ದು ಎದ್ದ ನೆಲವು
ಇದನು ಬಿತ್ತಿ ಬೆಳೆದ ಹೊಲವು!

ಸುಳ್ಳು ಸತ್ಯ ಇಲ್ಲ ತಥ್ಯ
ಗೆಲವು ಒಂದೆ ನಮ್ಮ ಗುರಿ!
ಒಳ್ಳೆತನವು ಮಳ್ಳತನವು
ಬಲವು ಇದ್ದರಲ್ಲಿ ಸರಿ!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...