Home / ಕಥೆ / ಕಿರು ಕಥೆ / ನೊಣದಕಾಟ

ನೊಣದಕಾಟ

ಒಬ್ಬ ಮುದುಕ ಕಾಟ ಕೊಡುತ್ತಿದ್ದ ನೊಣವನ್ನು ತನ್ನ ಎರಡು ಅಂಗೈಯಲ್ಲಿ ಹಿಡಿದು ಬಡಿದು ಹಾಕಿದ. ನಂತರ ಅವನಿಗೆ ವೇದನೆಯಾಗ ತೊಡಗಿತು. ಹಾರಾಡುತ್ತಿದ್ದ ನೊಣವನ್ನು ಸಾಯಿಸಿ ಬಿಟ್ಟೆನಲ್ಲಾ ಎಂದು ಮರುಕಗೊಂಡ. ತಪ್ಪಿತಸ್ತ ಮನೋಭಾವದಲ್ಲಿ ಬೆಂದುಹೋದ. ಸತ್ತಜೀವಕ್ಕೆ ಜೀವಕೊಡುವ ಸಾಮರ್ಥ್ಯ ತನಗಿಲ್ಲ. ತಾನು ಏನು ಮಾಡಿ ನೊಣಕ್ಕೆ ಸದ್ಗತಿ ಕೊಡಬಹುದೆಂದು ಯೋಚಿಸಿದ. ನೊಣದ ಹಣವನ್ನು ಸೀದಾ ಸ್ವರ್ಗಕ್ಕೆ ಕಳಿಸಬೇಕೆಂದು ನಿರ್ಧರಿಸಿ ಸತ್ತ ನೊಣವನ್ನು ಒಂದು ಲಕೋಟೆಯಲ್ಲಿ ಹಾಕಿ ಮೇಲೆ ಸ್ವರ್ಗದಲ್ಲಿರುವ ದೇವರಿಗೆ ಎಂದು ವಿಳಾಸ ಬರೆದು ಟಪಾಲಿನಲ್ಲಿ ಹಾಕುವ ಮುನ್ನ ದೇವರ ಕೈಗೆ ಸೇರದಿದ್ದಲ್ಲಿ ವಾಪಸ್ಸು ಕಳಿಸುವ ತನ್ನ ವಿಳಾಸವನ್ನು ಬರೆದು ಹಾಕಿದನು. ಲಕೋಟೆ ಕೆಲವು ದಿನದ ಮೇಲೆ ಇವನ ಕೈಗೆ ಬಂದಿತು. ಟಪಾಲು ಪೆಟ್ಟಿಯಲ್ಲಿ ಸತ್ತ ನೊಣದ ನಾರುವ ದೇಹಕ್ಕೆ ಅಂಟಿಕೊಂಡು ಒಂದು ಇರುವೆ ಕೂಡ ಲಕೊಟೆ ತೆರೆದಾಗ ಹೊರಬಂದಿತು. ಮುದುಕ ಅತ್ಯಂತ ಹರ್ಷದಿಂದ ತನ್ನ ಸ್ನೇಹಿತ ಮುದುಕನನ್ನು ಕರೆದು ಸತ್ತ ನೊಣ ಸ್ವರ್ಗದಿಂದ ಪುನರ್ ಜನ್ಮ ಪಡೆದು ಇರುವೆಯಾಗಿ ಹಿಂತಿರುಗಿದೆ ಎಂದು ಘೋಷಿಸಿದ. ಮುದುಕನ ಸ್ನೇಹಿತ ಮುದುಕನ ಬೆನ್ನು ತಟ್ಟಿ “ಭಯಪಡಬೇಡ ನೀನು ಸತ್ತ ಮೇಲೆ ನಿನ್ನ ದೇಹವನ್ನು ಸ್ವರ್ಗಕ್ಕೆ ಚೀಲದಲ್ಲಿ ಕಟ್ಟೆ ಕಳಿಸುತ್ತೇನೆ. ನೀನು ಸ್ವರ್ಗದಿಂದ ವಾಪಸ್ಸು ಮತ್ತೆ ಜನ್ಮ ಪಡೆದು ನನ್ನ ಸ್ನೇಹಿತನಾಗಿ ಬಾ” ಎಂದ. ಮುದುಕನಿಗೆ ತನ್ನ ಅರಿವು ಮೂಡಿ ತನ್ನ ಬಗ್ಗೆ ತನಗೇ ನಾಚಿಕೆಯಾಯಿತು.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...