Home / ಕಥೆ / ಕಿರು ಕಥೆ / ಮತ್ಸ್ಯ ರಾಜ

ಮತ್ಸ್ಯ ರಾಜ

ಸಾಗರದ ರಾಣಿ ಮೀನೊಂದು ಮತ್ಸ್ಯರಾಜನಲ್ಲಿ ಬಂದು ಬಿನ್ನವಿಸಿಕೊಂಡಿತು.

“ನನ್ನ ಅಂತಃಪುರದಲ್ಲಿ ಸಂತೆಯ ಗದ್ದಲ. ಪುಟ್ಟ, ಚಿಕ್ಕ, ದೊಡ್ಡ ಮೀನುಗಳ ಕಾಟವೇ ಕಾಟ. ಈ ಸಹಸ್ರಾರು ಜಲಚರಗಳು, ಜಲ ಸಸ್ಯಗಳು ನನಗೆ ಉರುಳಾಗಿ ತಲೆನೋವನ್ನು ತರುತ್ತಿವೆ. ಸದಾ ಅಲೆಗಳ ಭೋರ್ಗರೆತ. ಬಿಳಿ ನೊರೆಯ ಒರೆತ. ಅಲ್ಲದೆ ಸಕಲ ಜಲಚರಗಳು ಅಶಿಸ್ತಿನಿಂದ ವರ್ತಿಸುತ್ತಿವೆ. ತಮ್ಮದೇ ಆದ ಸ್ವಚ್ಛಂದ ಜೀವನ ನಡೆಸುತ್ತಿವೆ. ಈ ಅರಾಜಕತೆ ನೋಡಿ ನೋಡಿ ನನಗೆ ಬಹಳ ಬೇಸರವಾಗಿದೆ, ಮತ್ಸ್ಯರಾಜ! ನನ್ನೊಲಿವಿನ ಸ್ವಾಮಿಯಾದ ನಿನ್ನೊಡನೆ ನನಗೆ ವಿಹಾರ ಮಾಡಲು ಇವು ಅಡ್ಡಿಯಾಗುತ್ತಿವೆ. ನನ್ನೊಡೆಯ! ಇದರ ಬಗ್ಗೆ ನನಗಾಗಿ ಏನಾದರೂ ಮಾಡಲು ಸಾಧ್ಯವೇ?” ಎಂದಿತು ರಾಣಿಮೀನು.

“ಇದೇನು ನಿನ್ನ ಇಚ್ಛೆ ಅಸಂಭದ್ದ. ಇದು ನಮ್ಮ ಜಲರಾಜ್ಯವಲ್ಲವೇ? ಜಲಚರಗಳು ನಮ್ಮ ಪ್ರಜೆಗಳಲ್ಲವೇ? ನಮ್ಮಿಂದ ಅವರು ಅವರಿಂದ ನಾವು ಅಲ್ಲವೇ? ನೀನು ನನ್ನ ಪ್ರಿಯೆ! ನಿನಗಾಗಿ ಈ ದಿನ ಕನಸಿನಲ್ಲಿ ಈ ಸಮುದ್ರವು ಅಲೆಗಳಿಂದ ಸ್ಥಗಿತವಾಗಿ ನರ್ತನ ನಿಲ್ಲಿಸುತ್ತವೆ. ಎಲ್ಲಾ ಮೀನುಗಳನ್ನು ಸಾಗರದಿಂದ ಹೊರದೂಡಲ್ಪಡುತ್ತವೆ. ಸಸ್ಯಗಳೂ ಕಿತ್ತೆಸೆಯಲ್ಪಡುತ್ತವೆ. ಮುತ್ತು ಹವಳ, ಚಿಪ್ಪುಗಳು ಬರಿದಾಗುತ್ತವೆ. ನಾನು ನೀನು ಮಾತ್ರ ದೊಡ್ಡ ಸಾಗರದಲ್ಲಿ ತೇಲುವಂಥ ಒಂದು ಕನಸನ್ನು ಇಂದು ನೀನು ಕಾಣು. ನಂತರ ನನಗೆ ಬಂದು ಹೇಳು ನಿನ್ನ ಇಚ್ಛೆ ಪೂರೈಸಬೇಕೆ?” ಎಂದು.

ರಾಣಿ ಮೀನು ಅಂದು ಅಲೆಯ ಹಾಸಿಗೆ ಮೇಲೆ ಮೈಚಾಚಿ ಮಲಗಿದೊಡನೆ ಕನಸು ಕವಲೊಡೆಯಿತು. ಅಲೆಗಳು ನಿಶಬ್ದವಾದವು. ನರ್ತನ ನಿಂತಿತು. ಸಾಗರದ ಭೋರ್ಗರೆತ ಮೂಕವಾಯಿತು. ಅಲೆಯ ನೊರೆ ಮಾಯವಾಯಿತು. ಮುತ್ತು ಹವಳ ಓಡಿಹೋದವು. ಸಸ್ಯ ಬಾಡಿ ಹೋದವು. ಪುಟ್ಟ ಮೀನುಗಳೊಂದಿಗೆ ಎಲ್ಲ ಮೀನುಗಳು ದಡಕ್ಕೆ ಬಂದು ಗೋಳೋ ಎಂದು ಅಳುತ್ತ ಪ್ರಾಣ ಬಿಟ್ಟವು. ಜಲಧಿಯಲ್ಲಿ ಒಂದೇ ಸ್ಮಶಾನ ಮೌನ ಆವರಿಸಿತು. ನೀರು ಹೆಪ್ಪು ಗಟ್ಟಿತು. ಹಿಮವಾಯಿತು. ರಾಣಿ ಮೀನಿಗೆ ಉಸಿರುಕಟ್ಟಿತು.

“ಪ್ರಿಯಾ!” ಎಂದು ಚೀರುತ್ತ ರಾಜ ಮೀನನ್ನು ಅಪ್ಪಿಕೊಂಡು “ಇದು ಎಂತಹ ಭಯಾನಕ ಕನಸು”- ಅದು ನನ್ನ ಪಾಲಿಗೆ ಪ್ರಳಯದಂತಿತ್ತು. ನನ್ನ ಇಚ್ಛೆಗೆ ನಾನೇ ನಾಚುತ್ತಿರುವೆ” ಎಂದು ಮತ್ಸ್ಯರಾಜನಲ್ಲಿ ಕ್ಷಮೆ ಬೇಡಿತು.

“ನನಗೆ ಗೊತ್ತಿತ್ತು. ನಿನ್ನ ಇಚ್ಛೆ ನನಸಾಗಿಸುವ ಮುನ್ನ ಅದಕ್ಕೆ ಕನಸು ಕಾಣಲು ಹೇಳಿದ್ದು” ಎಂದಿತು.
ರಾಣಿ ಮೀನು ತಲೆ ತಗ್ಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಅರಿವನ್ನು ಪಡೆಯಿತು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...