Home / ಕವನ / ಕವಿತೆ / ಮದಿರೆಗೆ ಶರಣು

ಮದಿರೆಗೆ ಶರಣು

ಮದಿರೆಯೆಂಬುದದು ತರುವದು ನರನಿಗೆ ಮಾನದ ಹಾನಿಯನೂ |
ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೊಗ್ಯಾ ||
ಮದಿರೆ ಶೆಳೆತಕೆ ಬೀಳ್ದನ ಬಾಳುವೆ ನಾಶವಪೊಂದುವುದೂ |
ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ ||

ಮದಿರೆ ಪಾನದಿಂ ಮದಿಸುತೆ ದುಷ್ಕೃತಿ ಯೆಸೆದರು ರಕ್ಕಸರು |
ಮದಿರೆ ಮಾನವನ ಬುದ್ಧಿಯ ಕೆಡಿಪುದು ಮಾಡುತ ನಿಶೆಯವನ ||
ಮಡದಿ ಮಕ್ಕಳನು ಗೋಳಿಸಿ ಕೊಲ್ವನು ಮದಿರೆಯ ಶೆಳೆತದಲಿ |
ಮದಿರೆ ಮಾಡದ ಕೇಡದು ಜಗದೊಳು ಮತ್ತದು ಯೇನಿಹುದು || ೨ ||

ಮದಿರೆ ಕಿಡಿಸುತೆ ಹಸಿವನು ದೇಹವ ದುರ್ಬಲ ಗೊಳಿಸುವುದು |
ಮದಿರೆ ಬುದ್ಧಿಯ ಕಿಡಿಸುತೆ ಮಾನಸ ಬಲವನು ಹೀರುವುದು ||
ಮದಿರೆ ಮಾನವನ ದೇಹದಿ ಷಡ್ರಿಪುಚೇತನ ಗೊಳಿಸುವುದು |
ಮದಿರೆ ಮಾನಸ ವಿವೇಕವನೋಡಿಸಿ ದುಃಖದಿ ನೂಂಕುವುದು || ೪ ||

ಮದಿರೆ ನೀತಿಯ ಕೆಡಿಸುತೆ ಜನರೊಳು ಮಾನವ ಕಳೆಯುವದು |
ಮದಿರೆ ಧನವನು ಶೆಳೆಯುತೆ ತರುವುದು ಬಡತನ ಮನುಜನಿಗೆ ||
ಮದಿರೆ ಮನೆಯೊಳು ಕಲಹ ಪುಟ್ಟಿಸಿ ಕಳೆವುದು ಗೃಹಸುಖವಾ |
ಮದಿರೆ ಮೋಹವ ಬಿಟ್ಟೊಡೆದೊರೆವವು ಶಾಶ್ವತ ಸುಖಶಾಂತಿ || ೪ ||

ಮದಿರೆ ವೋಡಿಸಲು ಪುಸಿಫುಟಜಾನ್ಸನ ಜಗದೊಳು ತಿರುಗಿದನು |
ಮದಿರೆ ಭಕ್ತರೆ ಜಗದೊಳು ತುಂಬಿರೆ ಮನದೊಳು ಮರುಗಿದನು |
ಮದಿರೆ ಭಾರತದಿ ಬಹುತಾನಿರದಿರೆ ಮನಶಾಂತಿಯ ಹೊಂದಿದನು |
ಮದಿರೆ ಭಾರತದಿ ಜನಗಳು ಸಿಪ್ರದಲೋಡಿಸ ಬಯಸಿದನು || ೫ ||

ಮದಿರೆ ಭಾರತದಿ ಬಂದಿಸೆ ಹಿರಿಯರು ಶಾಸನ ಮಾಡಿಹರು |
ಮದಿರೆ ಶೀಘ್ರದೋಳ್ಕಣ್ಮರೆಯಾಗ್ವುದು ನಮ್ಮಯ ನಾಡಿಂದ |
ಮದಿರೆ ಪೋಗೆ ಬಾಳ್ವಾಗ್ವದು ನಮ್ಮದು ಸಂತತ ಸುಖಮಯವು |
ಮದಿರೆದೇವಿ ನಾವ್ಮಾಳ್ಪೆವು ನಿನ್ನಯ ದಿಕ್ಕಿಗೆ ಶರಣಿಂದು || ೬ ||
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...