Home / ಕವನ / ಕವಿತೆ / ಮದಿರೆಯ ಮಹಿಮೆಯು

ಮದಿರೆಯ ಮಹಿಮೆಯು

ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು|
ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ ||
ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು|
ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿಡುಗಣ್ಣಿಗರೂ || ೧ ||

ಸುರೆಯಂ ಕುಡಿಯತೆ ಕಡುಮದದಿಂದಲಿ ಅಡರಿಸಿದರು ಕೇಡನು ರಕ್ಕಸರು |
ದುರುಳರ ಕಡಿಯಲು ಕಡುತ್ವರೆಯಿಂದಲಿ ದುಡುಕಿದನವಹರಿ ಅವತರಿಸಿ ||
ಮರುಳನುಹರಿತಾಮದಿರೆಯ ಕೊಲ್ಲದೆ ಕುಡುಕರಮರಣವ ನೊಡರಿಸಿದ |
ಸರುವರ ಕಿಡಿಸಲು ಮದಿರೆಯೆ ಮೂಲವು ಕಡುನಾಶಕವದ ನರಿಯದಲೆ || ೨ ||

ಸಿ೦ದಿಯೆಂಬುದದು ಮೊಲೆವಾಲ್ತಾಡದ ಬಂಧಿಸೆ ಶಾಸನ ಕುಂದನು ಹೊ೦ದದು |
ಅ೦ದಿನ ಚಣದೊಳ್ನೀರೆಯಾಗುತೆ ಬ೦ದು ಮೋಹಿಪುದು ಮಾನವ ಕೋಟಿಯ ||
ಬ೦ದುಮಾಡೆ ಶೆರೆಯ೦ದೆ ಭಟ್ಟಿಯೊಳ್ನಿ೦ದು ಗೌಪ್ಯದೊಳ್ನಲಿಯುವದು |
ಮಂದಹಾಸದಿಂ ತಾನಭಿಸಾರಿಕೆ ಯಂದದೆ ಮನೆಮನೆತಿರುಗುವದು || ೩ ||

ಹಿಂದು ದೇಶಪಿತ ಗಾಂಧಿಯಮಂತ್ರವ ನೋಂದನರಿಯೆ ಶೆರೆ ಸಿ೦ದಿಗಳು |
ಕುಂದುಕೊರತೆಗಳ ಪೊಂದಿ ವಿಶ್ವದಿಂ ಕಂದಿಹೋಗಿ ಕಾಲ್ತಗೆಯುವವು ||
ಇಂದುನಮ್ಮಯ ರಾಷ್ಟಶಕಟದನೊಗದಿ ಕುಂತಿಹರು ತಂದೆಯ ಸಮರು |
ಒಂದುಗೂಡಿ ಜನರೊಂದೆ ಮನದಿತಾ೦ ಗಾ೦ಧಿತತ್ವವವನು ಹರಡುವುದು || ೪ ||

ಸಿಂದಿಶೆರೆಗಳ ಬಂದು ಮಾಳ್ಪ ಹೊರೆಸಂದುದು ನಾಯ್ಕರ್ಗೆಂದೆನದೆ |
ಮುಂದುವರೆಯುತೆ ತಮ್ಮಯ ಸೇವೆಯಚಂದದಿ ನೀಡಲು ತಾಸುಖವು ||
ಬಂದುಕುಣಿಯುವದು ಸಗ್ಗದಿ ಗಾಂಧಿಯು ಸಂದಸಂತಸವ ತಾಪಡೆದು |
ಕುಂದುಕೊರತೆಗಳನರಿಯದೆ ಬಾಳಿರಿಯಂದವವರಗಳ ನೀಡುವನು || ೫||
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...