Home / ಕವನ / ಕವಿತೆ / ಮದಿರೆಯ ಮಹಿಮೆಯು

ಮದಿರೆಯ ಮಹಿಮೆಯು

ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು|
ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ ||
ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು|
ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿಡುಗಣ್ಣಿಗರೂ || ೧ ||

ಸುರೆಯಂ ಕುಡಿಯತೆ ಕಡುಮದದಿಂದಲಿ ಅಡರಿಸಿದರು ಕೇಡನು ರಕ್ಕಸರು |
ದುರುಳರ ಕಡಿಯಲು ಕಡುತ್ವರೆಯಿಂದಲಿ ದುಡುಕಿದನವಹರಿ ಅವತರಿಸಿ ||
ಮರುಳನುಹರಿತಾಮದಿರೆಯ ಕೊಲ್ಲದೆ ಕುಡುಕರಮರಣವ ನೊಡರಿಸಿದ |
ಸರುವರ ಕಿಡಿಸಲು ಮದಿರೆಯೆ ಮೂಲವು ಕಡುನಾಶಕವದ ನರಿಯದಲೆ || ೨ ||

ಸಿ೦ದಿಯೆಂಬುದದು ಮೊಲೆವಾಲ್ತಾಡದ ಬಂಧಿಸೆ ಶಾಸನ ಕುಂದನು ಹೊ೦ದದು |
ಅ೦ದಿನ ಚಣದೊಳ್ನೀರೆಯಾಗುತೆ ಬ೦ದು ಮೋಹಿಪುದು ಮಾನವ ಕೋಟಿಯ ||
ಬ೦ದುಮಾಡೆ ಶೆರೆಯ೦ದೆ ಭಟ್ಟಿಯೊಳ್ನಿ೦ದು ಗೌಪ್ಯದೊಳ್ನಲಿಯುವದು |
ಮಂದಹಾಸದಿಂ ತಾನಭಿಸಾರಿಕೆ ಯಂದದೆ ಮನೆಮನೆತಿರುಗುವದು || ೩ ||

ಹಿಂದು ದೇಶಪಿತ ಗಾಂಧಿಯಮಂತ್ರವ ನೋಂದನರಿಯೆ ಶೆರೆ ಸಿ೦ದಿಗಳು |
ಕುಂದುಕೊರತೆಗಳ ಪೊಂದಿ ವಿಶ್ವದಿಂ ಕಂದಿಹೋಗಿ ಕಾಲ್ತಗೆಯುವವು ||
ಇಂದುನಮ್ಮಯ ರಾಷ್ಟಶಕಟದನೊಗದಿ ಕುಂತಿಹರು ತಂದೆಯ ಸಮರು |
ಒಂದುಗೂಡಿ ಜನರೊಂದೆ ಮನದಿತಾ೦ ಗಾ೦ಧಿತತ್ವವವನು ಹರಡುವುದು || ೪ ||

ಸಿಂದಿಶೆರೆಗಳ ಬಂದು ಮಾಳ್ಪ ಹೊರೆಸಂದುದು ನಾಯ್ಕರ್ಗೆಂದೆನದೆ |
ಮುಂದುವರೆಯುತೆ ತಮ್ಮಯ ಸೇವೆಯಚಂದದಿ ನೀಡಲು ತಾಸುಖವು ||
ಬಂದುಕುಣಿಯುವದು ಸಗ್ಗದಿ ಗಾಂಧಿಯು ಸಂದಸಂತಸವ ತಾಪಡೆದು |
ಕುಂದುಕೊರತೆಗಳನರಿಯದೆ ಬಾಳಿರಿಯಂದವವರಗಳ ನೀಡುವನು || ೫||
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...