Home / ಕವನ / ಕವಿತೆ / ಮೋಹನ ಮುರಲಿ

ಮೋಹನ ಮುರಲಿ

ಶಾರದ ಚಂದ್ರನು ಬಾನಿನ ನೀಲಿಗೆ
ಬೆಳ್ನಗು ಹೂವನು ಮುಡಿಸಿಹನು
ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು
ಭೂಮಿಗೆ ಬರಿಸಿತು ಪುಲಕವನು

ಮಲಯ ಸಮೀರನು ಯಮುನಾ ಜಲದೊಡ-
ನಾಡುತ ತೀಡುತ ಬರುತಿಹನು
ವೃಂದಾವನದಲಿ ಧ್ಯಾನಾವಸ್ಥಿತ
ವೃಕ್ಷಗಳೊಳಿಯನೆಬ್ಬಿಪನು

ಸಂಧ್ಯಾ ಸುಮಗಳ ಮೋಹಕ ಸೌರಭ
ಗಾಳಿಗೆ ಗರಿಗಳ ನಿಮಿರಿಸಿತು
ರಾತ್ರಿಯ ಮೌನದ ಕಡಲಲಿ ಮುರಲಿಯ
ತಾನವು ತೆರೆಗಳ ತೇಲಿಸಿತು

ವನದಲಿ ಹರ್ಷೋನ್ಮತ್ತ ಕಿಶೋರ ಮ-
ನೋಹರ ಕೃಷ್ಣನು ವಿಹರಿಪನು
ಪ್ರಕೃತಿಯ ಸೌಂದರ್ಯಾಮೃತ ಸಾಗರ
ವೀಚಿಗಳೋಳಿಯೊಳಾಳುವನು

ಅವನ ಕರಾಗ್ರದ ಚೇತನವಿಲ್ಲದ
ವೇಣುವು ಜೀವವನಾಂತಿಹುದು
ತುಟಿಗಳ ಸೊದೆಯನು ಹೀರುತ, ಮೆಲ್ಪಿನ
ನಾದಸಮುದ್ರವನಕ್ಕಿಪುದು

ಸವಿಗೊಳಲಿನ ಸರವೆಳೆಗೊಲ್ಲತಿಯರ
ಚಿತ್ತವ ಚಂಚಲವಾಗಿಸಿತು
ಹಾಸಿದ ಹಾಸಿಗೆಯನು ತನುವುಳಿಯಿತು
ಮನವಿಂಚರದಲಿ ಮುಳುಗಿತ್ತು

ಮುರಲೀ ನಾದಕೆ ತಾಳವನಿಕ್ಕುತ,
ಕಾಲ್‌ ಮುನ್ನಡೆಯಿತು ವನದೆಡೆಗೆ
ಕೊಳಲುಲಿಯವರನು ಸೆಳೆಯಿತು, ತಂದಿತು
ಲೀಲಾ ಗೋಪಾಲಕನೆಡೆಗೆ

ಬಿಡು ಜಡೆಯೆಳಲುವ ಕಾಂತಿಯ ಕಣ್ಗಳ
ಕೆಂಪಿನ ಕೆನ್ನೆಯ ಕನ್ನೆಯರು
ಮುಕುಲಸ್ತನಗಳ ನಳಿತೋಳ್‌ಬಳ್ಳಿಯ
ಕಿರುನಡುನೆರಸಿದ ಚೆನ್ನೆಯರು

ಓಡುತ ಹಾರುತ ನಲಿಯುತ ನೆಗೆಯುತ,
ತಮ್ಮನು ತಾವೇ ಮರೆಯುತ್ತ,
ಕುಣಿಯುತ, ಮಣಿಯುತ, ಬಂದರು ನಿ೦ದರು
ನಂದ ಕುಮಾರನ ಬಳಸುತ್ತ

ನೂತನ ಜಲಧರ ನೀಲ ಶರೀರನು
ಪೀತಾ೦ಬರವನ್ನುಟ್ಟವನು,
ಕುಟಿಲಾಲಕ ಚಯ ಚಿತ್ರಿತ ಫಾಲನು
ಮುಗ್ಧ ಸ್ನಿಗ್ಧಾಂಬಕಯುತನು;

ಚಂಚಲ ಕುಂಡಲ ಮಂಡಿತ ಗಂಡ-
ಸ್ಥಲ ಯುಗ ಸ೦ಶೋಭಿತ ಮುಖನು,
ನವಿಲಿನ ಗರಿಯ ಕಿರೀಟವನಾ೦ತಿಹ
ವನಮಾಲಿಯು ನಡು ನಿ೦ದಿಹನು

ಸಪ್ತ ಸ್ವರದಲಿ ವಿಧ ವಿಧ ರಾಗವ
ಸಿರಿಗೊಳಲಿನ ಮುಖ ಸೂಸಿತ್ತು
ಕಾಳಿಂದಿಯು ಹೊನಲಿಡುವುದ ಮರೆಯುತ,
ಆಲಿಸುತ೦ತೆಯೆ ನಿ೦ದತ್ತು

ಪಶು ಮೃಗ ಗಣಗಳು ತಮ್ಮೆದೆಯನು ತೆರೆ-
ದಿಂಚರವನು ಮೊಗೆದೀಂಟಿದುವು
ಮರಗಳು ಎಲೆಗಿವಿಗಳನುರೆ ನಿಮಿರಿಸಿ,
ಗೀತಾಮೃತದಲಿ ಮುಳುಗಿದುವು

ಜಡ ಪ್ರಕೃತಿಯು ಚೈತನ್ಯವನಾನುತ
ಗಾನಾನ೦ದದಿ ಬೆರೆದತ್ತು
ಗೋಪೀವೃಂದವು ಶ್ರೀ ಕೃಷ್ಣಾತ್ಮದೊ-
ಳೈಕ್ಯಾಮರತೆಯ ಗಳಿಸಿತ್ತು
*****
೧೯೪೩

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...