Home / ಕವನ / ಕವಿತೆ / ಗಂಡ ಹೆ೦ಡರು

ಗಂಡ ಹೆ೦ಡರು

ಹೊನ್ನಿನ ಮಳೆ ಬಂದ, ಚಿನ್ನದ ಕೆರೆ ತುಂಬಿ
ಕಿನ್ನುರಿ ಮಾಟದ ಹೊಳಿ ಬಂದು | ರಾಯರ
ಸಣ್ಣಕ್ಕಿ ಕೇರ ತರಿಬ್ಯಾವ ||

ಗಂಡ ಹೆಂಡರ ಜಗಳ, ಗಂಧ ತೀಡಿದ್ಹಂಗ
ಲಿಂಗಕ ನೀರ ಎರಿದ್ಹಾಂಗ | ಹಿರಿಹೊಳಿ
ಗಂಗವ್ವ ಸಾಗಿ ಹರಿದ್ಹಾಂಗ ||

ಸಿಟ್ಟು ಮಾಡುವಿರೇನು, ಸಿರಿಯರು ನನಮ್ಯಾಲೆ
ಕಟ್ಟಿಕೋಬ್ಯಾಡ್ರಿ ವೈಮನವ | ತಾಯ್ತಂದಿ
ಕೊಟ್ಟು ಹೋಗ್ಯಾರ ನಿಮ್ಮನಿಗೆ ||

ಕಾಮಕಸ್ತುರಿ ನಿನ್ನ, ಕಾಣದಲೆ ಇರಲಾರೆ
ಮಲ್ಲೀಗೆ ನಿನಮಾಯ ಬಿಡಲಾರೆ | ಸಮುದರದ
ಮುತ್ತ ನಿನ್ನಗಲಿ ಇರಲಾರೆ ||

ಕಾಣದಲೆ ಇರಲಾರೆ, ಕನ್ನುಡಿ ಮುಖದವರ
ಕಾಮನಗಿಂತ ಜೆಲುವರ | ಚೆನ್ನಿಗರ
ಕಾಣದರಗಳಿಗೆ ಇರಲಾರೆ ||

ಆಸಾಡ ನೀ ಗಾಳಿ, ಬೀಸ ನನ್ನರಮನಿಗೆ
ಲೇಸು ಮಾರಾಯರ ಮಂಚಕ | ಸುತ್ತಿರಗಿ
ಬೀಸು ಸೂವರದ ಸುಳಿಗಾಳಿ ||

ಬಾಗೇದ ಲಕ್ಕಸಮಿ, ಬಾಗಿಲಕ್ಯಾಕದಿಯ
ನೇಗಿಲ ಬಂದೆತ್ತು ತುಳಿದಾವ | ರಾಯರ
ತೂಗ ಮಂಚಕ ಇರಬಾರ ||

ಸಾವಿರ ಕೊಟ್ಟರು, ಸವತಿಯ ಮನಿಬ್ಯಾಡ
ಸಾವಿರದಮ್ಯಾಲ ಏನೂರು | ಕೊಟ್ಟರು
ಮಲಮಕ್ಕಳಿರುವ ಮನಿಬ್ಯಾಡ ||

ಸವತಿ ಸವತೆರ ಜಗಳ, ಪಟ್ಟೆಮಂಚದ ಮ್ಯಾಲೆ
ಹೊನ್ನಸರ ಹರಿದು ಬಳಿ ಒಡೆದು | ನನ ಸವತಿ
ವಾಲಿ ಕಿತ್ತ್ಹೋಯ್ತು ಬಿಡ ಸೆರಗ ||

ಸಾವುತನಕ ಬಿಡದು, ಸವತಿ ಮಕ್ಕಳ ಜಗಳ
ಸರಿ ಮನ್ಯಾಗಿರುವ ನೇಗೆಣ್ಣಿ | ನಿನ ಜಗಳ
ಬ್ಯಾರ್ಯಾಗುತನಕ ಬಿಡಲಿಲ್ಲ ||

ಹಡೆದ ತಾಯಿಯ ಮುಂದ, ಹಾಲುಕುಡಿದರು ಸಿಂದ
ಮಲತಾಯಿ ಮುಂದ ಮರಿಗುದರಿ | ಏರಿದರ
ಮನವಾಗ ಲಟಕ ಮುರಿದಾಳ ||

ಹಾಸೀಗೆ ಹಾಸೆಂದ, ಮಲ್ಲೀಗಿ ಸೂಸೆಂದ
ಬ್ಯಾಸತ್ರ ಮಡದಿ ಮಲಗೆಂದ | ಚೆಂಜೀಕಿ
ತನ್ನೋಡಿ ತವರ ಮರೆಯೆಂದ ||

ಚಿಂತಾಕ ಇಟಗೊಂಡು, ಬೆಂಕಿಗ್ಹೋಗುವ ನಾರಿ
ಚಿಂತಿ ಇಲ್ಲೇನ ನಿನಗೇಟು | ನಿಮರಾಯ
ಕೆಂಚೇರಗೂಡ ನಗತಾನ ||

ನಕ್ಕರ ನಗಲೆವ್ವ, ನಗೆ ಮಾರಿಕ್ಯಾದೀಗೆ
ನಾ ಮುಂಚೆ ಮುಡಿದ ಪರಿಮಳ | ಪಚ್ಛೇದ್ಹೂ
ಅವಳೊಂದು ಜಾವ ಮುಡಿಯಲೆ ||

ತಂದಾರ ತರಲೆಂದೆ, ತಂಗ್ಯಾಗಿ ಇರಲೆಂದೆ
ವಾ ಬಿಟ್ಟಿ ಜವಳಿ ಉಡಲೆಂದೆ | ನನಗಾಕಿ
ಜೋಡಾಗಿ ಕೂಡಿ ಇರಲೆಂದೆ ||
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...