Home / ಕವನ / ಕವಿತೆ / ಗಂಡ ಹೆ೦ಡರು

ಗಂಡ ಹೆ೦ಡರು

ಹೊನ್ನಿನ ಮಳೆ ಬಂದ, ಚಿನ್ನದ ಕೆರೆ ತುಂಬಿ
ಕಿನ್ನುರಿ ಮಾಟದ ಹೊಳಿ ಬಂದು | ರಾಯರ
ಸಣ್ಣಕ್ಕಿ ಕೇರ ತರಿಬ್ಯಾವ ||

ಗಂಡ ಹೆಂಡರ ಜಗಳ, ಗಂಧ ತೀಡಿದ್ಹಂಗ
ಲಿಂಗಕ ನೀರ ಎರಿದ್ಹಾಂಗ | ಹಿರಿಹೊಳಿ
ಗಂಗವ್ವ ಸಾಗಿ ಹರಿದ್ಹಾಂಗ ||

ಸಿಟ್ಟು ಮಾಡುವಿರೇನು, ಸಿರಿಯರು ನನಮ್ಯಾಲೆ
ಕಟ್ಟಿಕೋಬ್ಯಾಡ್ರಿ ವೈಮನವ | ತಾಯ್ತಂದಿ
ಕೊಟ್ಟು ಹೋಗ್ಯಾರ ನಿಮ್ಮನಿಗೆ ||

ಕಾಮಕಸ್ತುರಿ ನಿನ್ನ, ಕಾಣದಲೆ ಇರಲಾರೆ
ಮಲ್ಲೀಗೆ ನಿನಮಾಯ ಬಿಡಲಾರೆ | ಸಮುದರದ
ಮುತ್ತ ನಿನ್ನಗಲಿ ಇರಲಾರೆ ||

ಕಾಣದಲೆ ಇರಲಾರೆ, ಕನ್ನುಡಿ ಮುಖದವರ
ಕಾಮನಗಿಂತ ಜೆಲುವರ | ಚೆನ್ನಿಗರ
ಕಾಣದರಗಳಿಗೆ ಇರಲಾರೆ ||

ಆಸಾಡ ನೀ ಗಾಳಿ, ಬೀಸ ನನ್ನರಮನಿಗೆ
ಲೇಸು ಮಾರಾಯರ ಮಂಚಕ | ಸುತ್ತಿರಗಿ
ಬೀಸು ಸೂವರದ ಸುಳಿಗಾಳಿ ||

ಬಾಗೇದ ಲಕ್ಕಸಮಿ, ಬಾಗಿಲಕ್ಯಾಕದಿಯ
ನೇಗಿಲ ಬಂದೆತ್ತು ತುಳಿದಾವ | ರಾಯರ
ತೂಗ ಮಂಚಕ ಇರಬಾರ ||

ಸಾವಿರ ಕೊಟ್ಟರು, ಸವತಿಯ ಮನಿಬ್ಯಾಡ
ಸಾವಿರದಮ್ಯಾಲ ಏನೂರು | ಕೊಟ್ಟರು
ಮಲಮಕ್ಕಳಿರುವ ಮನಿಬ್ಯಾಡ ||

ಸವತಿ ಸವತೆರ ಜಗಳ, ಪಟ್ಟೆಮಂಚದ ಮ್ಯಾಲೆ
ಹೊನ್ನಸರ ಹರಿದು ಬಳಿ ಒಡೆದು | ನನ ಸವತಿ
ವಾಲಿ ಕಿತ್ತ್ಹೋಯ್ತು ಬಿಡ ಸೆರಗ ||

ಸಾವುತನಕ ಬಿಡದು, ಸವತಿ ಮಕ್ಕಳ ಜಗಳ
ಸರಿ ಮನ್ಯಾಗಿರುವ ನೇಗೆಣ್ಣಿ | ನಿನ ಜಗಳ
ಬ್ಯಾರ್ಯಾಗುತನಕ ಬಿಡಲಿಲ್ಲ ||

ಹಡೆದ ತಾಯಿಯ ಮುಂದ, ಹಾಲುಕುಡಿದರು ಸಿಂದ
ಮಲತಾಯಿ ಮುಂದ ಮರಿಗುದರಿ | ಏರಿದರ
ಮನವಾಗ ಲಟಕ ಮುರಿದಾಳ ||

ಹಾಸೀಗೆ ಹಾಸೆಂದ, ಮಲ್ಲೀಗಿ ಸೂಸೆಂದ
ಬ್ಯಾಸತ್ರ ಮಡದಿ ಮಲಗೆಂದ | ಚೆಂಜೀಕಿ
ತನ್ನೋಡಿ ತವರ ಮರೆಯೆಂದ ||

ಚಿಂತಾಕ ಇಟಗೊಂಡು, ಬೆಂಕಿಗ್ಹೋಗುವ ನಾರಿ
ಚಿಂತಿ ಇಲ್ಲೇನ ನಿನಗೇಟು | ನಿಮರಾಯ
ಕೆಂಚೇರಗೂಡ ನಗತಾನ ||

ನಕ್ಕರ ನಗಲೆವ್ವ, ನಗೆ ಮಾರಿಕ್ಯಾದೀಗೆ
ನಾ ಮುಂಚೆ ಮುಡಿದ ಪರಿಮಳ | ಪಚ್ಛೇದ್ಹೂ
ಅವಳೊಂದು ಜಾವ ಮುಡಿಯಲೆ ||

ತಂದಾರ ತರಲೆಂದೆ, ತಂಗ್ಯಾಗಿ ಇರಲೆಂದೆ
ವಾ ಬಿಟ್ಟಿ ಜವಳಿ ಉಡಲೆಂದೆ | ನನಗಾಕಿ
ಜೋಡಾಗಿ ಕೂಡಿ ಇರಲೆಂದೆ ||
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...