Home / ಕವನ / ಕವಿತೆ / ಬಸಿರು ಬಯಕೆ

ಬಸಿರು ಬಯಕೆ

ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ
ರಂಬಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ
ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ
ದಂಡನಾಳವನ ಬಂಕೀಲಿ ||

ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ
ಕೆಂಚಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||

ಸಜ್ಜೀಯ ರುಚಿ ರೊಟ್ಟಿ, ಸಜ್ಜಕದ ಹೋಳೀಗಿ
ಗಜ್ಜೂರಿ ಚೆಟ್ಟು ಎಳ್ಳೆಣ್ಣಿ | ತಂಗೆವ್ವ
ಗುಜ್ಚಿ ನಿನ ಬಂಕ ತಿಳಿಯಾವ ||

ಕ೦ದನೆ ಕೊಡುಶಿವನ, ಬಂದನ ಬಡಲಾರೆ
ಹಂಗಿನ ಬಾನ ಉಣಲಾರೆ | ಜನದಾಗ
ಬಂಜೆಂಬು ಸಬುದ ಹೊರಲಾರೆ ||

ಆಡುಮಕ್ಕಳ ಕಂಡು, ಬೇಡಿತ್ತ ನನ ಜೀವ
ಕೇಳಿದ್ದನೇನ ತಿವರಾಯ | ಹೊಟ್ಟ್ಯಾಗ
ಮೂಡಿದ್ದನೇನ ಮಗರಾಮ ||

ಹೆಣ್ಣು ಜನುಮಕ ಬಂದೆ, ಮಣ್ಣು ಮಾಡಲಿಬ್ಯಾಡ
ಹೆಣ್ಣುತನ ಶಿವನೆ ಜಗದಾಗ | ಕೈ ಮುಗಿವೆ
ಕಂಡಯ್ನ ಕೊಟ್ಟು ಕಡಿಮಾಡು ||

ಕೂಡಲ ಸಂಗಯ್ಯ, ನೀಡು ಮಕ್ಕಳ ನನಗ
ನನಗಲ್ಲ ನನ್ನ ಗೆಳತೀಗೆ | ಕೊಟ್ಟಽರ
ಬಾಗಿಲಕ-ಹೊನ್ನ ಬಡಿಸೇನ ||

ಬಂಜೀಯ ಮನಿಮುಂದ, ಸಿಂಗಾರ ಗಿಡ ಹುಟ್ಟಿ
ಕೊಂಗಿಕೊಂಗೀಲಿ ಗಿಳಿಕೂತು | ಓದ್ಯಾವ
ಬಂಜಿ ನಿನ ಬದಕು ಹೆರವರಿಗೆ ||

ಹತ್ತು ಗಂಡ್ಹಡದರೂ, ಮತ್ತೆ ಬಂಜೆಂಬೂರು
ದಟ್ಟೀಯ ಉಡುವ ಧರಣೀಯ | ಹಡೆದರ
ಹೆತ್ತಾಯಿಯೆಂದು ಕರೆದಾರ ||

ನಾಕ ಮಕ್ಕಳ ಕೊಟ್ಟು, ಸಾಕು ಮಾಡೊ ಶಿವನೆ
ನಾಕರ ಮ್ಯಾಲೆ ಆರೂತಿ | ಹಿಡಿಯಾಕ
ನಾರಿಯ ಕೊಟ್ಟು ಕಡಿಮಾಡೊ ||

ಗಂಡ ಮಗನ ಬೇಡಿ, ಬಂಡಿಲಿ ಬಾಗೇವ ಬೇಡಿ
ಗಂಡಗಾಸೇವ ಘನಬೇಡಿ | ನನ ಮಗಳು
ತಿಂಗಳೊಂದೊತ್ತು ಹಿಡಿದಾಳ ||

ಬಸರು ಇರುವೆನೆಂದು, ಖುಸಿ ಬಹಳ ಮನದಾಗ
ಹಡೆದೆ ನಾನೆಂಬ ಹವಣಿಕೆ | ಸಂಗಯ್ಯ
ಕರುಣ ತಪ್ಪಿದರ ಮರಣಾವು ||
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...