Home / ಕವನ / ಕವಿತೆ / ಮಲ್ಲಯ್ಯ

ಮಲ್ಲಯ್ಯ

ವರವೂತವೆಂಬೂದು ಅರವತ್ತು ಗಾವೂದ
ಬರಲಾರೆನಯ್ಯ ಬಹುದೂರ | ನಿನ ಮುಡುವ
ಬರುವವರ ಕೂಡ ಕಳುಹೇನೊ || ೧

ಹರೆಯಾಗ ಏಳುತಲಿ, ಹರನಿನ್ನ ನೆನೆದೇನ
ಪಾತಾಳಗಂಗ್ಯಾಗ ಜಳಕವ | ಮಾಡುವಂಥ
ಮಲ್ಲಿಕಾರ್ಜುನನ ನೆನೆದೇನ || ೨

ಸಂಗಯ್ಯನಿರುವೂದು ಸಾಲ ಹುಣಸಿಯ ಮರ
ಸಂಗಯ್ಯನ ತಮ್ಮ ಗಿರಿಮಲ್ಲ | ಇರವೂದು
ತಿಂಗಳದ ದಾರಿ ವರವೂತ || ೩

ಪರವುತಗ್ಹೋಗಬೇಕಂತ, ವರಸಿ ತಯಾರ ಮಾಡಿ
ಬೆರಿಸ್ಯಾಳ ಬ್ಯಾಳಿ ನೆನಗಡಲಿ | ಪರವುತದ
ವರಸಿಗ್ಹಂಚಾಳ ಪನಿವಾರ || ೪

ಪಲ್ಲಕ್ಕಿ ಕೊಟ್ಟರ ಮಲ್ಲಯ್ಯ ಒಲ್ಲೆಂದ
ಮಲ್ಲನೆಂಬೂವ ಮರಿಗುದರಿ | ಕೊಟ್ಟರ
ಮೆಲ್ಲಕ ಮಟವ ನಿಳಿದಾನ || ೫

ಪರವೂತ ಗಿರಿಮ್ಯಾಲೆ ವಂಚಾಳ ಮರಹುಟ್ಟಿ
ಪಾತಳಕ ಬೇರ ಇಳಿದಾವ | ಆ ಬೇರು
ಬೋರಮಗ ನೆರಳ ಗವಿದಾವ || ೬

ಪರವೂತ ಗಿರಿಮ್ಯಾಲೆ ಅರಿದೊಂದು ಕಂಡೇನೊ
ಕರಿಯಗಂಡ್ಯಾಳಿ ಮುಂದ್ಹೂಡಿ | ಬಿತ್ಯಾರ
ಮಲ್ಲಯ್ಯ ಮುಡಿವ ದವನವ || ೭

ಪುಂಡ ಪರವುತಮಲ್ಲ ಗಂಡಮಗನ ಕೊಡು
ಚೆಂಡೂವಿನಂತ ಸೊಸೆದೇರಿಗೆ | ಕೊಟ್ಟಾರ
ಪುಂಡ ನಿನ ಗಿರಿಗೆ ಬರುವೆನು || ೮

ಚಿಂತೆ ಬಿಡಿಸೊ ನನ್ನ ಕಾಂತಿವರವುತಮಲ್ಲ
ಚಿಂತ್ಹೋಗಿ ನನಗ ಸೌಭಾಗ್ಯ | ಕೊಟ್ಟಾರ
ಕಂಬಿಗೆ ಮುತ್ತ ಬಿಗಿಸೇನೊ || ೯

ಮಲ್ಲಯ್ಯಗ್ಹೋದವರು ನಿಲ್ಲದಲಿ ಬಾರರ
ಅಲ್ಲಿ ರಾಚೋಟಿ ಶರಬಾಗ || ಹೋದವರು
ಪಲ್ಲೇವ ಬಿತ್ತಿ ಬೆಳೆದಾರ || ೧೦

ಕಂಬಿಯ ಹೊತ್ತಣ್ಣ ಇಂಬಾಗಿ ಹಾಯಣ್ಣ
ಕಂಬಿ ಕಂಬಿಗೆ ಕದಲ್ಯಾವ || ನಮನಿಮಗ
ಡಂಬಿ ತಾಗ್ಯಾವೊ ಗಿರಿಯಾಗೊ || ೧೧

ಕಂಬಿಯ ಹೊತ್ತಣ್ಣ ಕಂಬ ಕಾವಡಿ ಜೋಕೆ
ಅನಗಾಲ ಹಾದಿ ಅವಜೋಕೆ || ಕಂಬ್ಯಯ್ಯ
ಗಿರಿಯಿಳಿಯುಮುಂದ ಜೀವ್‌ಜೋಕೆ || ೧೨

ಕಂಬಿ ಹೊತ್ತಣ್ಣನ ತಂಗೇನು ಉಟ್ಟಾಳ
ಲಿಂಬಿ ಪಪ್ಪಳ ಜರತಾರೋ || ಉಟಗೊಂಡು
ಕಂಬಿಗಾರುತಿ ಬೆಳಗ್ಯಾಳೊ || ೧೩
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...