Home / ಕವನ / ಕವಿತೆ / ಮಲ್ಲಯ್ಯ

ಮಲ್ಲಯ್ಯ

ವರವೂತವೆಂಬೂದು ಅರವತ್ತು ಗಾವೂದ
ಬರಲಾರೆನಯ್ಯ ಬಹುದೂರ | ನಿನ ಮುಡುವ
ಬರುವವರ ಕೂಡ ಕಳುಹೇನೊ || ೧

ಹರೆಯಾಗ ಏಳುತಲಿ, ಹರನಿನ್ನ ನೆನೆದೇನ
ಪಾತಾಳಗಂಗ್ಯಾಗ ಜಳಕವ | ಮಾಡುವಂಥ
ಮಲ್ಲಿಕಾರ್ಜುನನ ನೆನೆದೇನ || ೨

ಸಂಗಯ್ಯನಿರುವೂದು ಸಾಲ ಹುಣಸಿಯ ಮರ
ಸಂಗಯ್ಯನ ತಮ್ಮ ಗಿರಿಮಲ್ಲ | ಇರವೂದು
ತಿಂಗಳದ ದಾರಿ ವರವೂತ || ೩

ಪರವುತಗ್ಹೋಗಬೇಕಂತ, ವರಸಿ ತಯಾರ ಮಾಡಿ
ಬೆರಿಸ್ಯಾಳ ಬ್ಯಾಳಿ ನೆನಗಡಲಿ | ಪರವುತದ
ವರಸಿಗ್ಹಂಚಾಳ ಪನಿವಾರ || ೪

ಪಲ್ಲಕ್ಕಿ ಕೊಟ್ಟರ ಮಲ್ಲಯ್ಯ ಒಲ್ಲೆಂದ
ಮಲ್ಲನೆಂಬೂವ ಮರಿಗುದರಿ | ಕೊಟ್ಟರ
ಮೆಲ್ಲಕ ಮಟವ ನಿಳಿದಾನ || ೫

ಪರವೂತ ಗಿರಿಮ್ಯಾಲೆ ವಂಚಾಳ ಮರಹುಟ್ಟಿ
ಪಾತಳಕ ಬೇರ ಇಳಿದಾವ | ಆ ಬೇರು
ಬೋರಮಗ ನೆರಳ ಗವಿದಾವ || ೬

ಪರವೂತ ಗಿರಿಮ್ಯಾಲೆ ಅರಿದೊಂದು ಕಂಡೇನೊ
ಕರಿಯಗಂಡ್ಯಾಳಿ ಮುಂದ್ಹೂಡಿ | ಬಿತ್ಯಾರ
ಮಲ್ಲಯ್ಯ ಮುಡಿವ ದವನವ || ೭

ಪುಂಡ ಪರವುತಮಲ್ಲ ಗಂಡಮಗನ ಕೊಡು
ಚೆಂಡೂವಿನಂತ ಸೊಸೆದೇರಿಗೆ | ಕೊಟ್ಟಾರ
ಪುಂಡ ನಿನ ಗಿರಿಗೆ ಬರುವೆನು || ೮

ಚಿಂತೆ ಬಿಡಿಸೊ ನನ್ನ ಕಾಂತಿವರವುತಮಲ್ಲ
ಚಿಂತ್ಹೋಗಿ ನನಗ ಸೌಭಾಗ್ಯ | ಕೊಟ್ಟಾರ
ಕಂಬಿಗೆ ಮುತ್ತ ಬಿಗಿಸೇನೊ || ೯

ಮಲ್ಲಯ್ಯಗ್ಹೋದವರು ನಿಲ್ಲದಲಿ ಬಾರರ
ಅಲ್ಲಿ ರಾಚೋಟಿ ಶರಬಾಗ || ಹೋದವರು
ಪಲ್ಲೇವ ಬಿತ್ತಿ ಬೆಳೆದಾರ || ೧೦

ಕಂಬಿಯ ಹೊತ್ತಣ್ಣ ಇಂಬಾಗಿ ಹಾಯಣ್ಣ
ಕಂಬಿ ಕಂಬಿಗೆ ಕದಲ್ಯಾವ || ನಮನಿಮಗ
ಡಂಬಿ ತಾಗ್ಯಾವೊ ಗಿರಿಯಾಗೊ || ೧೧

ಕಂಬಿಯ ಹೊತ್ತಣ್ಣ ಕಂಬ ಕಾವಡಿ ಜೋಕೆ
ಅನಗಾಲ ಹಾದಿ ಅವಜೋಕೆ || ಕಂಬ್ಯಯ್ಯ
ಗಿರಿಯಿಳಿಯುಮುಂದ ಜೀವ್‌ಜೋಕೆ || ೧೨

ಕಂಬಿ ಹೊತ್ತಣ್ಣನ ತಂಗೇನು ಉಟ್ಟಾಳ
ಲಿಂಬಿ ಪಪ್ಪಳ ಜರತಾರೋ || ಉಟಗೊಂಡು
ಕಂಬಿಗಾರುತಿ ಬೆಳಗ್ಯಾಳೊ || ೧೩
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...