Home / ಕವನ / ಕವಿತೆ / ಜೋಕುಮಾರ

ಜೋಕುಮಾರ

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ ಹಾಲ ಕರೆಯಲಿ| ಹರಿಯಾಗ
ಕಾತೆದ್ದು ಮಸರ ಕಡೆಯಾಲಿ ೧

ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ
ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨

ಹಾಸ್ಹ್ಯಾಸಿ ಮಳೆಬಡದ, ಬೀಸ್ಬೀಸಿ ಕೆರೆತುಂಬಿ
ಬಾಸಿಂಗದಂಥ ತೆನೆಬಾಗಿ || ಜೋ || ಗೌಡಽರ
ರಾಸಿಯ ಮ್ಯಾಲೆ ಸಿರಿಬಂದ || ಜೋ || ೩

ಕರುಣುಳ್ಳ ಕುಮರಾನ, ಕೆರೆ ನೋಡ ಹೋದಾನ
ಕರದು ಕಾರ್ಗಾಲ ಮಳೆ ಬಂತ || ಜೋ || ಗೌಡಽರು
ಕರೆದು ಹಚ್ಚಡ ಹೊಚ್ಚ್ಯಾರ || ಜೋ || ೪

ಕೆಂಚ ನಮ್ಮ ಕುಮಾರ, ಬೆಂಚೀಯ ನೋಡ ಹೋದ
ಮಿಂಚಾವ ಕಾರ ಮಳೆಬಂದ || ಜೋ || ಗೌಡಽರು
ಕೆಂಪು ಹಚ್ಚಡ ಹೊಚ್ಚ್ಯಾರ || ಜೋ || ೫

ಹುಟ್ಟಿದೇಳು ದಿವಸದಲಿ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗನ || ಜೋ || ಕೋಮರಾಗ
ಕೊಟ್ರವ್ವೇಳು ದಿನಗಳ || ಜೋ || ೬

ವುಂಡಿಯ ವಲ್ಲೆ ನಂಜು, ಕೊಂಡು ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ || ಜೋ || ನಮದೇವಿ
ಹೊಂಬಳಿ ಸರವ ಬಗೆಸಿದಳ || ಜೋ || ೭

ಚಕ್ಕೋಟಿ ರಸಪಲ್ಲೆ, ಇಕ್ಕೊಂಡು ಉಣಲಿಲ್ಲ
ದಿಕ್ಕನಾಳವನ ಬಂಕ್ಯಾಗ || ಜೋ || ನಮದೇವಿ
ಚೊಕ್ಕ ಮುತ್ತಿನ ಸರಬರೆಸಿ || ಜೋ || ೮

ಅರಕೊಂಬ ಅರಿಷಿಣವ, ದರಬಟ್ಲ ಒಳ್ಳೆಣ್ಣೆ
ನರ ನಮ ದೇವಿ ಕುಲಿ ಹೊಕ್ಕ || ಜೋ || ಎರಕೊಂಡ
ತೆರೆಬಂದು ನೀರು ಬಾಗಿಲಕ || ಜೋ || ೯

ಬಾಲ ಹುಟ್ಟಿದನಂತ, ಬನಕ ತೊಟ್ಟಿಲ ಕಟ್ಟಿ,
ಬಾಲಗನ್ನೆರು ನೆರೆಯುತಲಿ | ಜೋ || ಹಾಡಿದರ
ಕೋಲೆನು ಜನಕ ಜಯಜಯವ || ಜೋ || ೧೦

ಕಬ್ಬುಳ್ಳ ತ್ವಾಟ್ದಾಗ ಇಬ್ಬನ್ನಿ ಹಿರದ್ಹಂಗ
ಇಬ್ಬರು ತೂಗಲು ಮಲಗನ || ಜೋ || ನಮದೇವಿ
ಹೆಬ್ಬುಲಿ ಮಗನ ಹಡೆದಾಳ || ಜೋ || ೧೧

ಹಾರೂರ ಕೇರ್ಯಾಗ, ಹಾರಿ ಚಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ || ಜೋ || ಚೆಂಡಾಡಿ
ಊರ ಭೂಮೆಲ್ಲ ಬೆಳಿಬಂದ || ಜೋ || ೧೨

ಒಕ್ಕಽಲಗೇರ್ಯಾಗ, ಹೊಕ್ಕ ಚೆಂಡಾಡ್ಯಾನ
ಅಕ್ಕನ ಮಗನವ ಕೊಮರಯ್ಯ || ಜೋ || ಆಡಿದರ
ಅಕ್ಕಿ ನಾಡೆಲ್ಲ ಬೆಳಿಬಂದ || ಜೋ || ೧೩

ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ || ಜೋ || ಕೊಮರಾಮ
ಕುಸುರಾದ ಗೆಜ್ಜೆ ಕೆಸರಾಗಿ || ಜೋ || ೧೪

ಸಂದಿಯಾ ಮನೆಯನ್ನ ಗೋಂದಿಯಾ ಮನೆಯನ್ನ
ಗೊಂಜಾಳದನ್ನ ಕೆಸರನ್ನ || ಜೋ || ನಮಕೊಮರ
ಸಂದೀಯ ಹೊಕ್ಕ ನಡುಗೇರಿ || ಜೋ || ೧೫

ಹಾದಿಽಯ ಮನೆಯನ್ನ ಬೀದಿಽಯ ಮನೆಯನ್ನ
ಬಾಜರದನ್ನ ಮೊಸರನ್ನ || ಜೋ || ಕೋಮರಯ್ಯ
ಗೌಳೇರೋಣಿ ಹೊಕ್ಕಾನ || ಜೋ || ೧೬

ಹಳ್ಳಕ ತಾ ಹೋಗಿ ಸಣ್ಣವ್ನ ಇಟ್ಟಾನ
ಕನ್ನುಡಿ ತಗೆದು ಮೊಕನೊಡೊ || ಜೋ || ಕೋಮರಾಮ
ಕಣ್ಣು ಮೂಗಿಲೆ ಕರಚಲುವ || ಜೋ || ೧೭

ಅಳಕೂತ ಬಳಕೂತ, ಬಂದಾಳ ಗುಳಕವ್ವ
ಬಂದು ನಿಂತಾಳ ಅಗಸ್ಯಾಗ || ಜೋ || ಗೌಡಽರು
ತಂದು ಇಳಿಸ್ಯಾರ ಸೆಳಿಮಂಚ || ಜೋ || ೧೮

ಕೊಮಾರ ತಾ ಬರ್ತಾನಂತ, ಕೋಣೀಯ ಸಾರಿಸಿ
ಜಣ ಒಕ್ಕಲಗಿತ್ತಿ ಚದರಿಽಯ || ಜೋ || ಮನಿಯಾಗ
ಒಂದಾರ ಜಾವ ಇರಲಿಲ್ಲ || ಜೋ || ೧೯

ಹೋಗೂತ ಹೊನ್ನೀ ಮುರಿದ, ಬರೂತ ಬನ್ನೀ ಮುರಿದ
ಕಂಡಕಂಡಲ್ಲಿ ಕರಿಬೇವ || ಜೋ || ಮುಡುವಂತ
ಪುಂಡನ್ನ ದೇವಿ ಹಡೆದಾಳ || ಜೋ || ೨೦

ಅಕ್ಕ ಹಡೆದಾಳಂತ, ಏನೊಯ್ದೆ ಬನವಯ್ಯ
ಮುತ್ತಿನ ಚೆಂಡ ಕಾರ್ಮುಗಿಲ || ಜೋ || ಸುರಿಮಳೆಯ
ಅರತಿಲಿ ಒಯ್ದೆ ಹರಳೆಲೆಯ || ಜೋ || ೨೧

ಬೆಣ್ಣಿಽಯ ತಾ ಮುದ್ದಿ, ಕನ್ಯುಳ್ಳ ಕೊಮರಾಗ
ಹೊನ್ನ ಮಾಳಿಗೆ ಮನೆಯವ್ವ || ಜೋ || ಕೆನೆ ಮೊಸರ
ಬಿನ್ನಾಯ ಹೇಳ ಕೊಮರಾಗ || ಜೋ || ೨೨

ಹಾಲ ತಾ ಮಗಿತುಂಬಿ, ಬಾಲ ನಮ್ಮ ಕುವರಾಗ
ಮೇಲ ಮಾಳಿಗೆ ಮನೆಯವ್ವ || ಜೋ || ನೀ ಕೊಟ್ರ
ಮೇಲಾಗಿ ಬೆಳಿಲಿ ನಿಂಭೂಮಿ || ಜೋ || ೨೩

ಅಳೂತಲಿ ಸಿರಿತಾನು, ಬಳಲುತಲಿ ಬಂದಾಳು
ಅಳಕಾದಂಬಲಿ ತಡೆದಾವು || ಜೋ || ನಮಕೊಮರ
ಕಳೆದೇಳು ದಿನಕ ಮರಣವ್ವ || ಜೊ || ೨೪

ಹುಟ್ಟಿದ ಏಳ್ದಿನಕ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗ || ಜೋ || ಕೊಮರಾಗ
ಬರೆದಾಳ ಸೆಟವಿ ಏಳ್ದಿನ || ಜೋ || ೨೫

ಪುಂಡಽನ ಪುಂಡಾಟ್ಕ, ಹಿಂಡ ಮಂದಿ ಕೂಡ್ಯಾರ
ಕಂಡಲಿ ಕಲ್ಲೀಗೆ ಬಡಿದಾರ || ಜೋ || ರಾತ್ರ್ಯಾಗ
ಅಗಸರ ಕಲ್ಲಾಗ ತುರಿಕ್ಯಾರ || ಜೋ || ೨೬

ಜಂಗಮ ನಾನಲ್ಲ, ಜೋಗಯ್ಯ ನಾನಲ್ಲ
ತಿಂಗಳಿಗೆ ಬರುವ ತಿರುಕಲ್ಲ || ಜೋ || ತಾಯವ್ವ
ತುಂಬಿ ಮೊರ ಜೋಳ ನೀಡವ್ವ || ಜೋ || ೨೭

ಕಲ್ಗಳಿಗಿ ಕಬ್ಬಿಣದ, ಮೆಟ್ಟ್ಹಚ್ಚಿ ಏರ್ಯಾಳ
ಬಳಕೂತ ಬಳತವ ತಗೆದಾಳ || ಜೋ || ಒಕ್ಕಲಗಿತ್ತಿ
ಬಿಳಿ ಎಳ್ಳ ತುಂಬಿ ನೀಡಾಳ || ಜೋ || ೨೮

ಜಯ ಜಯ ಕೊಮರಾಗ, ಜಯ ಜಯ ಹಾಡಿಽರೆ
ಜಯ ಜಯ ಭೂಮಿ ಬೆಳಸಿಽಗೆ ||ಜೋ|| ಹಡದವ್ವ
ಜಯ ಜಯವಿರಲಿ ಜಗದಾಗ ||ಜೋ || ೨೯
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...