Home / ಕವನ / ಕವಿತೆ / ಕಾಣ್ಕೆ

ಕಾಣ್ಕೆ

ಸಾಕ್ಷಿಕ ಭೂಮಿಕೆಯೊಳಿಹ ನಿಲಿಂಪ
ಛಳಿಜ್ವರವಲ್ಲವು ಸಾತ್ತ್ವಿಕ ಕಂಪ
ಚೈತ್ಯ ಶಿಖೆಯೊಳಿದೆ ಶ್ರೀನಕ್ಷತ್ರ
ನಿರೀಕ್ಷಿಸುತ್ತಿದೆ ಸಾಹಸ ಕ್ಷೇತ್ರ
ಕರೆಯಬೇಡವೇ ಜೀವೋದ್ಗೀತಾ
ಅಪೂರ್ವ ಭಾವದ ನವನವನೀತಾ
ಹಣ್ಣಲ್ಲವು ಈ ಸ್ವಯಂಭು ಕಣ್ಣು
ಪರ್ವ ಪರ್ವ ನಿಪ್ಪೊಸತೀ ಗಣ್ಣು.
ಕಳಿತ ಪದಾರ್ಥವು ಕೊಳೆಯುವದುಂಟು
ಬೃಹದ್ವಸ್ತುವದು ಬೆಳೆಯುವದುಂಟು.
ಓ ಅಶ್ವತ್ಥಾ! ಎತ್ತಿಂದೆತ್ತಾ?
ನಡುವಿನಲ್ಲಿ ಇದೆ ನೀರಿನ ಮುತ್ತಾ!
ಮುತ್ತು ಮೂರ್ತಿಸಲು ಆಯಿತು ಮಗುವು
ಸ್ತಿಮಿತ ಅಸ್ಮಿತೆಯ ಸಸ್ಮಿತ ಜಗವು
ಆಚೆ ಈಚೆಗೂ ಚಾಚಿದೆ ಕೈಯ್ಯಾ,
ಕೆಳಗೂ ಮೇಲೂ ನೀಡಿದೆ ಮೈಯ್ಯಾ,
ಹಿಂದೂ ಮುಂದೂ ತೂಗುತ ನಿಂತೆ
ಒಳಗೂ ಹೊರಗೂ ತುಂಬಿರುವಂತೆ
ನಿಷ್ಫಲವಲ್ಲವು ನನ್ನೀ ಠಾವು
ಅರಿವು ಎಂಬುದಿದು ಅತ್ತಿಯ ಹೊವು.
ಅಶೀರ್ವಾದವು ನೀಡಿದೆ ಮೇಲೆ:-
ತಾಯಿಯ ತೊಡೆಯಲೆ ಕಲೆಗಳ ಶಾಲೆ
ನಿಃಶಬ್ದದ ಒಳ ತೊಟ್ಟಿಲೊಳಿತ್ತು
ನುಡಿಯದ ಸೊಲ್ಲನೆ ನುಡಿಸುವ ಗತ್ತು
ಊದಿ ತುಂಬುತಿರು ಅಂತಃಪ್ರಾಣ
ಅನಿರ್ದೇಶ್ಯದಲೆ ಮನೆಯನು ಕಟ್ಟು
ಬೀಡಾಡಿಯ ಚಂಚಲತೆಯ ಬಿಟ್ಟು
ಅರಸಗೆ ಬೇರೆಯ ಅರಮನೆ ಬೇಕೆ?
ಬೆಳಕಿನ ಕುದುರೆಗೆ ಬಣ್ಣಗಳೇಕೆ?
ಅಲ್ಲ ಅಲ್ಲವಿದು ಮೌನದ ಭಂಗ.
ನಾದ ತರಂಗಿಣಿ ನುಡಿಸು ಮೃದಂಗ
ಅಂಗೈಯೊಳಗೇ ಅಡಗಿದೆ ಬೆಟ್ಟಾ
ವಧುವಿನ ಸ್ಪರ್ಶಕೆ ವರ ತೆರದಿಟ್ಟಾ
ಪಾರ್ವನದಾರೋ ಪಾರ್ವತಿ ಯಾರೋ
ಕಾಣ್ಕೆಯ ನೀಡಲು ಮೇರುವನೇರೋ
ಬೆಡಗು ಎನ್ನದಿರು ಈ ಬಗೆಯಾಟ
ನೋಟವೆ ನೈಗೊಂಡಿರೆಯಾ ಮಾಟ?
ಮಾತಲ್ಲವು ಆಕಾಶದ ತೂತು
ಬೆರಗುಗೊಳಿಸುತಿದೆ ಬೆಳಕೇ ಹೂತು.
*****
Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...