Home / ಕವನ / ಕವಿತೆ / ಬೆಳೆದು ಬಂದ ಬಯಕೆ

ಬೆಳೆದು ಬಂದ ಬಯಕೆ

ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ
ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ
ಹಗಲು ಇರುಳು ನೆನವೆ ಬುತ್ತಿ
ಹೃದಯದೊರತೆಯಲ್ಲ ಬತ್ತಿ
ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ.
ಜೀವ ಮೌನ ತಾಳಿದೆ.
ಇಂದು ನಗುವೆ ಇಲ್ಲವಾಯ್ತು
ಮೌನ ಭಾರದಿಂದ ಸೋತು
ದೇಹ ಭೂಮಿಗಿಳಿದಿದೆ
ಧೂಳಿಯಲ್ಲಿ ನರಳಿದೆ;
ನನ್ನ ಸುತ್ತು ಮುತ್ತಲೇನು
ಮುಖವನೆತ್ತಿ ನೋಡಲೇನು
ಚಣ ಚಣಕೂ ಕರುಳ ಕೆಣಕಿ ಕಣ್ಣಿರಿಯುವ ಕತ್ತಲೆ
ಅದರ ಕುಣಿತ ಬತ್ತಲೆ!
ದುಃಖ ಅತಿಥಿಯಂತೆ ಬಂದು
ಮನೆಯ ಹೊಸ್ತಿಲಾಚೆ ನಿಂದು
ನನ್ನ ಕೂಗಿ ಕರೆದರೆ
ಬಾಗಿಲನ್ನು ಬಡಿದರೆ
ಕರುಣೆ ಇಲ್ಲದವರ ತೆರದಿ ಅದಕೆ ಬೇಡವೆನ್ನಲೆ?
ನನ್ನತನವ ಮರೆಯಲೆ?
ತಾಳ್ಮೆ ಬಾನ ಬಿತ್ತರ
ಹಿಮಾಲಯಕು ಎತ್ತರ
ಅದರ ಪೂರ್ವ ಪುಣ್ಯವೇನೊ
ಸೌಭಾಗ್ಯದ ಚಿಹ್ನೆಯೇನೊ
ಹೃದಯದಾಳದಲ್ಲಿ ಮೌನ ಗರ್ಭಧರಿಸಿದಂತಿದೆ.
ಬೆಳಕಿಗಾಗಿ ತಪಿಸಿದೆ.
ನನ್ನ ಎದೆಯ ಮೂಡಲಲ್ಲಿ
ಕನಸು ಮನಸು ಕೂಡುವಲ್ಲಿ
ಇಂದು ಇಲ್ಲವಾದರೂ
ಮುಂದೆ ಒಮ್ಮೆಯಾದರೂ
ಹಾಲು ಹಣ್ಣು ಹೂವು ಜೇನು ಹೊತ್ತು ಬರನೆ ಚಂದಿರ
ಕಣ್-ಮನಕೂ ಸುಂದರ!
ಪೂರ್ಣಕಲಾ ಪುಣ್ಯಮಾಯಿ
ಬೆಳುದಿಂಗಳ ಹಾಲ ತಾಯಿ
ಇರುಳ ಜೋಗುಳನ್ನು ಹಾಡಿ
ಕಣ್ಣು ತುಂಬುವಂತೆ ನೋಡಿ
ಈ ಚಂದ್ರಮ ಈ ಸಂಭ್ರಮ-ನಿನಗೆ ಇರಲಿ ಎನ್ನಳೆ?
ಉಡಿಯ ತೆರೆದ ಕರೆಯಳೆ!
*****
Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...