Home / ಕವನ / ಕವಿತೆ / ಹೂವು ಹಣ್ಣು ಬಿಡಲಿ

ಹೂವು ಹಣ್ಣು ಬಿಡಲಿ

ಗಳಿಗೆ ಗಳಗೆಗೂ ಎಜೆಯ ಕಡಲಿನಲಿ
ಅಳಲ ತೆರೆಗಳೆದ್ದು;
ದಡಕೆ ಅಪ್ಪಳಿಸಿ ಮನವ ಕಲಕುತಿವೆ
ಕಳೆದ ನೆನಹು ತಂದು.
ಹಗಲು ಮನಸಿನಲಿ ಇರುಳು ಕನಸಿನಲಿ
ಚಿತ್ರ ನೂರು ನೂರು!
ಮುಗಿಲ ತೇರಿನಲಿ ತೇಲಿ ಬಂದಿರಲು
ಕಣ್ಣ ತುಂಬ ನೀರು.
ಕರುಣೆ ಹೂವಿನಲಿ ಎದೆಯ ಹಾಲಿನಲಿ
ನಕ್ಕ ತಂಗಿ ತಾಯಿ!
ಅಗಲಿ ಹೋಗಿಹರು ಮರಳಿ ಬರದಿಹರು
ಅಕ್ಕ ಅಣ್ಣ ಗೌರಿ.
ಅವರ ಎದೆಯ ಉಲಿ ಮೌನವಾಂತಿರಲು
ಶಿವನೆ ಬಾಳಿದೇನು!
ಏಸೊ ನೆನಹುಗಳು ‘ಪ್ರೀತಿ ಗುರುತು’ಗಳು
ಎಲ್ಲ ಕನಸು ಏನು?
ಮನವು ಮಿಡಿದಿರಲು ಹೃದಯವಳುತಿರಲು
ಕಣ್ಣು ತುಂಬಿ ಹರಿದು;
ನನ್ನ ಕರುಣಾಳು ತಾಯಿ ಕನಸಿನಲಿ
ನುಡಿವಳೆದೆಗೆ ಬಂದು.
ಅಗಲಿ ಹೋದವರು ಮರಳಿ ಬರದಿರಲು
ಮೂಕ ಶೋಕವೇನು?
ಬರಲಿ ಬಂದವರು ಎಲ್ಲ ನಿನ್ನವರು
ಕೊನೆಗೆ ನಿನಗೆ ನೀನು.
ನಿನ್ನ ಇರವಿನಲಿ ಧೈರ್ಯನವಿರುತಿರಲಿ
ಮರೆತೆಯೇನು ಎಲ್ಲ?
ಮಾತು ಮಾತಿನಲಿ ಪ್ರೀತಿ ಹರಿದಿರಲಿ
ಬಾಳು ಬೇವು ಬೆಲ್ಲ.
ನಿನ್ನ ಎದೆಯ ಗಿರಿ ಕರಗಿ ನೀರಾಗಿ
ಹರಿದು ಬರುವೆ ನಾನು;
ಕವಿಯ ಬಾಳ್ಗುರಿಗೆ ತೋರು ಬೆರಳಾದ
ಅನ್ನಪೂರ್ಣೆ ನಾನು.
ನಿನ್ನ ಕಣ್ಣಿನಲಿ ನನ್ನ ಹೃದಯವನು
ಅಳೆದು ನೋಡಬಹುದು;
ಕಣ್ಣ ಮಿಂಚಿನಲಿ ಕಂಡ ಬೆಳಕಿನಲಿ
ಗುರಿಯ ಕಾಣಬಹುದು.
೧೦
ನಾನು ಹರಿದಿರುವ ಎದೆಯ ಭೂಮಿಯಲಿ
ಕಾವ್ಯ ಸಸಿಯು ಉದಿಸಿ
ನಭಕು ಬೆಳೆದಿರಲಿ ನೆರಳು ನೀಡಿರಲಿ
ಹೂವು ಹಣ್ಣು ಬಿಡಲಿ!
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...