Home / ಕವನ / ಅನುವಾದ / ಕಾಳಗದ ಪದ

ಕಾಳಗದ ಪದ

ಕಾಳೆ, ಹರೆ, ಕೊಂಬುಗಳ
ಏಳಿ, ಮೊಳಗಿ, ಏಳಿ,
ನಾಡುಗಳ ಕುಳಗಳನು
ಕೂಡಿಕೊಳ ಹೇಳಿ.
ಬನ್ನಿರಣ್ಣ, ಬನ್ನಿರಣ್ಣ,
ಅದೊ ಕೂಗು, ಕೇಳಿ.
ಮನ್ನೆಯರ, ಬಂಟರಿರ,
ಒದಗಿ, ಏಳಿ, ಏಳಿ.
ಕಣಿವೆಗಳ, ಬೆಟ್ಟಗಳ
ಗಡಿಯಿಂದ ಬನ್ನಿ.
ಕಣೆ, ಬಿಲ್ಲು, ಕುಡುಗೋಲು,
ಕೊಡಲಿಗಳ ತನ್ನಿ.
ಕೆಚ್ಚೆದೆಯ ಮಕ್ಕಳಿರ,
ಮೈಜೋಡ ತೊಡಿರೊ!
ಬಿಚ್ಚುಗತ್ತಿಯ ಝಳವ
ಕೈಝಾಡಿಸಿಡಿರೋ!
ಬಿಡಿ ಇರಲಿ ಮಂದೆಗಳು,
ಹೊಸ ಉತ್ತ ಮಣ್ಣು.
ಬಿಡಿ ಇರಲಿ ಸತ್ತ ಹೆಣ
ಹಸೆಮಣೆಯ ಹೆಣ್ಣು
ಬಿಡಿ ಹುಲ್ಲೆ, ಬಿಡಿ ಹಂದಿ,
ಬಲೆದೋಣಿಗಳನು,
ಹಿಡಿದುಕೊಳಿ ಮುಟ್ಟುಗಳ,
ಹಲಗೆ ಕತ್ತಿಯನು.
ಕಾಡ ಸೀಳುತ ಗಾಳಿ
ಬರುವಂತೆ ಬನ್ನಿ
ಓಡ ಕೊಚ್ಚುತ ಕಡಲು
ಬರುವಂತೆ ಬನ್ನಿ.
ಓಡಿ ಬನ್ನಿ, ಓಡಿ ಬನ್ನಿ,
ಓಡಿ ಓಡಿ ಬನ್ನಿ
ಗೌಡ, ಕುಳ ; ಆಳು , ದಣಿ ;
ನಾಡ ದಳ ಬನ್ನಿ.
ಬಂದರಣ್ಣ ಬಂದರಣ್ಣ
ಕಿಕ್ಕಿರಿದು ನೆರೆದು,
ಚೆಂದದಲಿ ಹೂವು ಗರಿ
ಸೆಕ್ಕಿ ತಲೆ ಮೆರೆದು-
ಹಿರಿ, ಕತ್ತಿ! ಇರಲಿ, ಸುರಗಿ!
ಸರಿ, ಮುಂದೆ. ಆಳು!
ಅರಿಯೆದೆಯ ಬಿರಿ, ಕಾಳೆ!
ತರಿ, ಕೊಲ್ಲ ಹೇಳು!
*****
SCOTT (1771 -1832 ) : Gathering Song
Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...