Home / ಲೇಖನ / ಇತರೆ / ರ್‍ಯೂಹೈ ಕತೆ

ರ್‍ಯೂಹೈ ಕತೆ

ರ್‍ಯೂಹೈ ಎಂದರೆ… ಚೀನಾ ಭಾಷೆ, ವಿಷಕಾರಿ, ರಾಸಾಯನಿಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಬೃಹತ್ ಸಂಗ್ರಹವಿದ್ದ ಗೋದಾಮು ಎಂದು ಅರ್ಥ.

ದಿನಾಂಕ ೧೨-೦೮-೧೫ ರ ರಾತ್ರಿ ೧೧.೨೦ ಸುಮಾರಿಗೆ ಈ ರ್‍ಯುಹೈನಲ್ಲಿ ಭಾರೀ ಅನರ್ಥ ಸಂಭವಿಸಿದೆ. ಅಲ್ಲಿ ಅವಳಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಗೋದಾಮಿನ ಕಟ್ಟಡ ಛಿದ್ರವಿಚಿದ್ರವಾಗಿದೆ.

ಈ ಸ್ಫೋಟದಿಂದ ಸಿಡಿದ ಬೆಂಕಿಯ ತುಣುಕುಗಳಿಂದ ಸುತ್ತಮುತ್ತಲಿನ ಕಟ್ಟಡ ಹಾಗೂ ಗೋದಾಮುಗಳಿಗೂ ಬೆಂಕಿ ಹತ್ತಿಕೊಂಡಿದೆ.

ಇಲ್ಲಿ ಇನ್ನೊಂದು ದುರಂತವನ್ನು ಹೇಳಲೇಬೇಕು! ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ೨೧ ಮಂದಿ ಬೆಂಕಿಗೆ ಆಹುತಿಯಾಗಿರುವರು.

ಇದು ಉತ್ತರ ಚೀನಾದ ಪ್ರಮುಖ ಬಂದರು ಪಟ್ಟಣ ಟೈನ್‌ಜಿನ್‌ನ ಪ್ರದೇಶವಾಗಿದ್ದು ಈವರೆಗೆ ೫೦ ಮಂದಿ ಮೃತರಾಗಿರುವರು.

ಈ ಸರಣಿ ಸ್ಫೋಟದಲ್ಲಿ ೭೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ ೭೧ ಗಾಯಾಳುಗಳ ಸ್ಥಿತಿ-ಗತಿ ತುಂಬಾ ಗಂಭೀರವಾಗಿದೆ.

ಈ ದುರಂತದಲ್ಲಿ ಇನ್ನೊಂದು ದುರಂತವೆಂದರೆ… ಸುಮಾರು ೨೧ ಮಂದಿ ಈಗಾಗಲೇ ನಾಪತ್ತೆಯಾಗಿರುವರು.

ಅಬ್ಬಾ! ಸುರಕ್ಷತೆಯ ತೀವ್ರ ದೃಷ್ಠಿಯಿಂದ ಸ್ಫೋಟದ ಸ್ಥಳದಿಂದ ಸುಮಾರು ೧೦,೦೦೦ ಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆಂದು ಅಲ್ಲಿನ ಅಧಿಕಾರಿಗಳು ಈಗಾಗಲೇ ದೃಢಪಡಿಸಿರುವರು.

ಈ ಘಟನಾ ಸ್ಥಳದಲ್ಲಿ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕಿರುವ ಸಾಧ್ಯತೆಗಳಿವೆಯೆಂದೂ ಇನ್ನೂ ಸಾವು ನೋವಿನ ಸಂಖ್ಯೆ ದುಪ್ಪಟ್ಟಾಗುವ ಎಲ್ಲ ಅವಕಾಶಗಳು ಹೆಚ್ಚಿವೆಯೆಂದೂ ಇದು ಬೃಹತ್ ಚೀನಾದಲ್ಲಿನ ಈವರೆಗಿನ ಬಹು ದೊಡ್ಡ ಕೈಗಾರಿಕಾ ಅವಘಡವಾಗಿಯೆಂದೂ ಚೀನಾದ ರಕ್ಷಣಾ ಕಾರ್ಯಕರ್ತರು ತೀವ್ರ ಶಂಕೆ ವ್ಯಕ್ತಪಡಿಸಿರುವರು!

ಮುದ್ದು ಮಕ್ಕಳೆ. ಈವತ್ತು ನಾವೆಲ್ಲ ಭಾರಿ ಭಾರೀ ಮುಂದುವರೆದಿದ್ದೇವೆಂದು ಭ್ರಮಿಸಿದ್ದೇವೆ. ಅಪಾಯ-ದುರಂತ ಸಂಭವಿಸಿದಾಗ ಅದರಿಂದ ಪಾರಾಗಲು ಇನ್ನು ಸಾಧ್ಯವಾಗುತ್ತಿಲ್ಲವೆಂಬುದನ್ನು ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು. ಗರ್ವ ಪಡಲು ಇಲ್ಲಿ ಅಂಥಾ ಸಾಧನೆಯಾಗಿಲ್ಲವೆಂಬುದನ್ನು ಅರಿತು ವಿನಯದಿಂದ ಬಾಳಿದರೆ ಜೀವನ ಸಾರ್ಥಕವಾಗುವುದು ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...