Home / ಲೇಖನ / ಇತರೆ / ರ್‍ಯೂಹೈ ಕತೆ

ರ್‍ಯೂಹೈ ಕತೆ

ರ್‍ಯೂಹೈ ಎಂದರೆ… ಚೀನಾ ಭಾಷೆ, ವಿಷಕಾರಿ, ರಾಸಾಯನಿಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಬೃಹತ್ ಸಂಗ್ರಹವಿದ್ದ ಗೋದಾಮು ಎಂದು ಅರ್ಥ.

ದಿನಾಂಕ ೧೨-೦೮-೧೫ ರ ರಾತ್ರಿ ೧೧.೨೦ ಸುಮಾರಿಗೆ ಈ ರ್‍ಯುಹೈನಲ್ಲಿ ಭಾರೀ ಅನರ್ಥ ಸಂಭವಿಸಿದೆ. ಅಲ್ಲಿ ಅವಳಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗೆ ಗೋದಾಮಿನ ಕಟ್ಟಡ ಛಿದ್ರವಿಚಿದ್ರವಾಗಿದೆ.

ಈ ಸ್ಫೋಟದಿಂದ ಸಿಡಿದ ಬೆಂಕಿಯ ತುಣುಕುಗಳಿಂದ ಸುತ್ತಮುತ್ತಲಿನ ಕಟ್ಟಡ ಹಾಗೂ ಗೋದಾಮುಗಳಿಗೂ ಬೆಂಕಿ ಹತ್ತಿಕೊಂಡಿದೆ.

ಇಲ್ಲಿ ಇನ್ನೊಂದು ದುರಂತವನ್ನು ಹೇಳಲೇಬೇಕು! ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ೨೧ ಮಂದಿ ಬೆಂಕಿಗೆ ಆಹುತಿಯಾಗಿರುವರು.

ಇದು ಉತ್ತರ ಚೀನಾದ ಪ್ರಮುಖ ಬಂದರು ಪಟ್ಟಣ ಟೈನ್‌ಜಿನ್‌ನ ಪ್ರದೇಶವಾಗಿದ್ದು ಈವರೆಗೆ ೫೦ ಮಂದಿ ಮೃತರಾಗಿರುವರು.

ಈ ಸರಣಿ ಸ್ಫೋಟದಲ್ಲಿ ೭೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ ೭೧ ಗಾಯಾಳುಗಳ ಸ್ಥಿತಿ-ಗತಿ ತುಂಬಾ ಗಂಭೀರವಾಗಿದೆ.

ಈ ದುರಂತದಲ್ಲಿ ಇನ್ನೊಂದು ದುರಂತವೆಂದರೆ… ಸುಮಾರು ೨೧ ಮಂದಿ ಈಗಾಗಲೇ ನಾಪತ್ತೆಯಾಗಿರುವರು.

ಅಬ್ಬಾ! ಸುರಕ್ಷತೆಯ ತೀವ್ರ ದೃಷ್ಠಿಯಿಂದ ಸ್ಫೋಟದ ಸ್ಥಳದಿಂದ ಸುಮಾರು ೧೦,೦೦೦ ಕ್ಕೂ ಹೆಚ್ಚು ಜನರನ್ನು ತೆರವು ಮಾಡಲಾಗಿದೆಂದು ಅಲ್ಲಿನ ಅಧಿಕಾರಿಗಳು ಈಗಾಗಲೇ ದೃಢಪಡಿಸಿರುವರು.

ಈ ಘಟನಾ ಸ್ಥಳದಲ್ಲಿ ಮತ್ತಷ್ಟು ಜನರು ಅಪಾಯಕ್ಕೆ ಸಿಲುಕಿರುವ ಸಾಧ್ಯತೆಗಳಿವೆಯೆಂದೂ ಇನ್ನೂ ಸಾವು ನೋವಿನ ಸಂಖ್ಯೆ ದುಪ್ಪಟ್ಟಾಗುವ ಎಲ್ಲ ಅವಕಾಶಗಳು ಹೆಚ್ಚಿವೆಯೆಂದೂ ಇದು ಬೃಹತ್ ಚೀನಾದಲ್ಲಿನ ಈವರೆಗಿನ ಬಹು ದೊಡ್ಡ ಕೈಗಾರಿಕಾ ಅವಘಡವಾಗಿಯೆಂದೂ ಚೀನಾದ ರಕ್ಷಣಾ ಕಾರ್ಯಕರ್ತರು ತೀವ್ರ ಶಂಕೆ ವ್ಯಕ್ತಪಡಿಸಿರುವರು!

ಮುದ್ದು ಮಕ್ಕಳೆ. ಈವತ್ತು ನಾವೆಲ್ಲ ಭಾರಿ ಭಾರೀ ಮುಂದುವರೆದಿದ್ದೇವೆಂದು ಭ್ರಮಿಸಿದ್ದೇವೆ. ಅಪಾಯ-ದುರಂತ ಸಂಭವಿಸಿದಾಗ ಅದರಿಂದ ಪಾರಾಗಲು ಇನ್ನು ಸಾಧ್ಯವಾಗುತ್ತಿಲ್ಲವೆಂಬುದನ್ನು ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕು. ಗರ್ವ ಪಡಲು ಇಲ್ಲಿ ಅಂಥಾ ಸಾಧನೆಯಾಗಿಲ್ಲವೆಂಬುದನ್ನು ಅರಿತು ವಿನಯದಿಂದ ಬಾಳಿದರೆ ಜೀವನ ಸಾರ್ಥಕವಾಗುವುದು ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...