Home / ಲೇಖನ / ಇತರೆ / ಪಂಚಮ ವೇದಗಳು

ಪಂಚಮ ವೇದಗಳು

ಭವ್ಯ ಭಾರತದ ರಾಷ್ಟ್ರ ಪತಿಗಳೂ ಮಕ್ಕಳ ಪ್ರೇಮಿ ಭಾರತದ ಕನಸುಗಾರ ಸರ್ವ ಜನಾಂಗದ ನೊಬೆಲ್ ಮ್ಯಾನ್ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ತೀರಿಕೊಂಡರು. ತೀರಿಕೊಳ್ಳಬಾರದಿತ್ತು!

ಅವರು ಸಾಹಿತ್ಯ ಪ್ರೇಮಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿರುವರು. ಇವರ ಬಹುಮುಖ್ಯವಾದ ಐದು ಕೃತಿಗಳನ್ನು ಪಂಚಮವೇದವೆಂದು ಕರೆಯಬಹುದು.

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಈ ಐದು ಕೃತಿಗಳನ್ನಾದರೂ ಓದಲೇಬೇಕು.

ಅವುಗಳನ್ನು ನಾವು ಪಂಚಮ ವೇದಗಳೆಂದು ಕರೆಯಬಹುದು. ಅದರಲ್ಲಿ ಪಂಚಶೀಲತತ್ವಗಳಿವೆ. ಏನೆಲ್ಲ ಇದೆಯೆಂಬುದನ್ನು ನಮ್ಮ ಭಾರತೀಯರೆಲ್ಲ ಹೆಮ್ಮೆ ಪಡಬೇಕಾಗಿದೆ.

೧. ವಿಂಗ್ಸ್ ಆಫ್ ಫೈರ್- ಇದೊಂದು ಆತ್ಮಕಥೆ. ಹುಟ್ಟಿನಿಂದ ತಮ್ಮಳ್ಳಿಯಿಂದ ದಿಲ್ಲಿಯತನಕ ೧೯೯೨ರ ತನಕದ ಕಥೆ ಸಾಗುತ್ತದೆ. ಒಬ್ಬ ಬಡ ಹುಡುಗ ಪೇಪರ್ ಹಾಕುವ ಹುಡುಗ ರಾಷ್ಟ್ರಪತಿಯಾಗುವ ತನಕ ಬೆಳೆಯಬಹುದು, ಅದಕ್ಕೆ ಬೇಕಾಗಿರುವುದು ಪರಿಶ್ರಮ, ಸಂಶೋಧನಾ ರಂಗದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಹಲವು ಮಹನಿಯರನ್ನು ಪರಿಚಯಿಸುತ್ತಲೇ ವಿಕ್ರಮ್ ಸಾರಾಬಾಯ್, ಡಾ|| ಬ್ರಹ್ಮಪ್ರಕಾಶ್ ಅವರನ್ನು ಸ್ಮರಿಸುವರು.

೨. ಎರಡನೆಯ ವೇದ ಸಮಾನವಾದ ಕೃತಿ. ಟರ್ನಿಂಗ್ ಪಾಯಿಂಟ್ ಆಗಿದ್ದು, ೧೯೯೨ ರಿಂದ ಮುಂದುವರೆದ ಕಥೆಯಾಗಿದೆ. ಇದು ವಿಂಗ್ಸ್ ಆಫ್ ಫೈರ್ ಕೃತಿಯ ಮುಂದಿನ ಭಾಗವು. ವಿಷನ್ ೨೦೨೦ ಗೆ ಮುನ್ನುಡಿಯಾಗಿದೆ.

೩. ಇಂಡಿಯಾ ೨೦೨೦. ಭವ್ಯ ಭಾರತವು ಇಡೀ ವಿಶ್ವದಲ್ಲೇ ಬೃಹತ್ ರಾಷ್ಟ್ರವಾಗಿ ನಾಲ್ಕನೆಯ ಮುಂದುವರೆದ ಆದರ್ಶ ರಾಷ್ಟ್ರವಾಗುವುದೆಂದು ಭವಿಷ್ಯ ನುಡಿದಿರುವರು. ನಮ್ಮ ದೇಶ ಹಸಿರುಕ್ರಾಂತಿ, ಬಾಹ್ಯಾಕಾಶ ಸಂಶೋಧನೆಯಿಂದಲೇ ಪ್ರಬಲ ರಾಷ್ಟ್ರವಾಗಲು ಸಾಧ್ಯವೆಂದು ಅಂಕಿ ಅಂಶಗಳ ಒದಗಿಸಿರುವರು.

೪. ನಾಲ್ಕನೆಯ ವೇದವಾಗಿ ಇವರ ಇಗ್ನೈಟೆಡ್ ಮೈಂಡ್ ಕೃತಿ ನಮ್ಮೆದುರಿಗೆ ಎದ್ದು ನಿಲ್ಲುವುದು. ಮಕ್ಕಳೊಂದಿಗೆ ಇವರೂ ಮಕ್ಕಳಾಗಿ ಕಾಲ ಕಳೆದ ರಸ ಘಳಿಗೆಗಳನ್ನು ಬಲು ರಸವತ್ತಾಗಿ ದಾಖಲಿಸಿರುವರು. ಬಲು ದೊಡ್ಡದಾಗಿ ಕನಸು ಕಾಣಬೇಕು. ಬಹು ದೊಡ್ಡದಾಗಿ ಯೋಚಿಸಬೇಕೆಂದೂ ಇಗೋ+ಸ್ಪಿರಿಟ್ ಭ್ರೂಣಗಳ ಸಂವಾದವು ಮುಂದಾಲೋಚನೆಗೆ ಉತ್ತಮ ಸಂವಾದವಾಗಿದೆ. ಈ ಕೃತಿ ೨೦೦೨ ರಲ್ಲಿ ಹೊರ ಬಂದಿದೆ. ಜಗತ್ತಿಗೆ ಸುಪರಿಚಿತವಾಗಿದೆ.

೫. ಪಂಚಮ ವೇದವಾಗಿ ಇನ್‌ಡಾಮಿಟೇಬಲ್ ಸ್ಪಿರಿಟ್- ಈ ಕೃತಿ ಭವ್ಯ ಭಾರತದ ಆದರ್ಶಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಅಪ್ಪಟ ವೀರ ಸನ್ಯಾಸಿಯಾಗಿ ಆದರ್ಶ ಬ್ರಹ್ಮಚಾರಿಯಾಗಿ ಭಾರತೀಯ ನಾರಿಮಣಿಯರನ್ನು ದೇವತೆಗಳೆಂದು ಹೃದಯ ತುಂಬಿ ಒಪ್ಪಿ ಅಪ್ಪಿ ಹಾಡಿ ಹೊಗಳಿರುವರು. ಇದು ಇವರ ಹೃದಯ ಶ್ರೀಮಂತಿಕೆಯನ್ನು ಸಾರುವುದು.

ಈ ಎಲ್ಲ ಕೃತಿಗಳು ನೊಬೆಲ್ ಬಹುಮಾನ ಕೃತಿಗಳಿಗೂ ಮಿಗಿಲು. ಯಾಕೋ ಇವರಿಗೆ ಸಲ್ಲಬೇಕಾದ ಕೀರ್ತಿ ಲಭಿಸಲಿಲ್ಲವೆಂದು ನನ್ನ ಭಾವನೆ.

ಇವಲ್ಲದೆ ಇನ್ನು ಮಹತ್ತರ ಕೃತಿಗಳನ್ನು ರಚಿಸಿರುವರು. ಇವರ ಕುರಿತು ರಚಿತವಾದ ಕೃತಿಗಳು ನೂರಾರು. ಎಲ್ಲ ಭಾಷೆಗಳಲ್ಲಿ ಬಂದಿವೆ. ಅವರಿನ್ನೂ ಜೀವಂತವಿರುವರು.

ಈಗ ಅವರ ಕೃತಿಗಳು ಮಾತನಾಡುತ್ತಿವೆ. ಜೀವನವೆಂದರೆ ಇದಲ್ಲವೇ? ಪಂಚಮವೇದವಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...