Home / ಲೇಖನ / ಇತರೆ / ಮೂರು ಕತೆ

ಮೂರು ಕತೆ

ಒಮ್ಮೆ- ರಮಣಮಹರ್ಷಿಗಳು ತಮ್ಮ ಶಿಷ್ಯರಿಗೆ ಉಪದೇಶ ನೀಡುತ್ತಿದ್ದರು. ಉಪದೇಶದ ಮಧ್ಯೆ ಒಂದು ಪ್ರಶ್ನೆ ಎತ್ತಿದರು. ‘ಜೀವನದಲ್ಲಿ ಮೂರು ಸೂತ್ರಗಳ್ಯಾವುವು?’ ಎಂದು ಅಲ್ಲಿದ್ದ ಶಿಷ್ಯರೆಲ್ಲರನ್ನೂ ಕೇಳುತ್ತಾ ಹೋದರು.

ಮೊತ್ತ ಮೊದಲು ಮರುಳ ಸಿದ್ದಯ್ಯ ಸ್ವಾಮಿಗಳದ್ದು- ಸ್ವಾಮಿಗಳ ಜೀವನದಲ್ಲಿ ಮಾತು, ಮಾನ, ಮರ್‍ಯಾದೆ ಎಂಬ ಮೂರು ಮುತ್ತುಗಳು ಒಡೆದು ಹೋಗದಂತೆ ಬಲು ಎಚ್ಚರಿಕೆಯಿಂದ ಬದುಕಬೇಕು…’ ಎಂದ.

“ಜೀವನದಲ್ಲಿ ನಾಲಿಗೆ-ಕಚ್ಛೆ-ಪಂಚೆ ಈ ಮೂರು ಜಾರದಂತೆ ಎಚ್ಚರಿಕೆ ವಹಿಸಬೇಕು. ಈ ಮೂರು ಒಮ್ಮೆ ಜಾರಿದರೆ ಇನ್ನೂ ಫಲವಿಲ್ಲ ಸ್ವಾಮಿಗಳೆ…” ಎಂದ ಮೃತ್ಯುಂಜಯ.

ಅಲ್ಲಿದ್ದ ಸೀನ್ಯ ಎದ್ದು ನಿಂತು ‘ಬಾಲ್ಯ, ಪ್ರೌಢ, ಯೌವ್ವನ ಈ ಮೂರು ಹಂತಗಳು ಹಾಳಾಗದಂತೆ ಬಲು ಎಚ್ಚರಿಕೆಯಿಂದ ಜೋಪಾನ ಮಾಡತಕ್ಕದ್ದು’ ಎಂದ.

ಗೌಡಪ್ಪನ ಸರದಿ ಬಂತು “ಸ್ವಾಮಿ… ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ಕೇಳಬೇಡ ಎಂಬ ಮೂರು ಸೂತ್ರ ಪಾಲಿಸಿದರೆ ಯಾವುದೇ ಭಯವಿಲ್ಲ” ಎಂದ.

ವಲಿಯ ಎದ್ದು ನಿಂತ ‘ಸ್ವಾಮಿ… ಬ್ರಹ್ಮ ವಿಷ್ಣು ಮಹೇಶ್ವರರ ನಿತ್ಯ ಮರೆಯಬಾರದು ಅವರೇ ಜೀವನ ಆಧಾರವೆಂದ.’

ಎಲಿವಾಳ ಅವರು ಎದ್ದು ನಿಂತು – ‘ಗುರುಗಳೆ ಜೀವನದಲ್ಲಿ ನಾನು ಎಂಬುದ ಬಿಡಬೇಕು. ನಾವು ಎಂಬುದ ಹಿಡಿಬೇಕು. ಇನ್ನೊಬ್ಬರ ಬಗ್ಗೆ ಅಸಹ್ಯ ಪಡುವುದ ಬಿಡಬೇಕು’ ಎಂದ.

ರಮಣ ಮಹರ್ಷಿಗಳು ಕ್ಷಣ ಮೌನ ವಹಿಸಿ- ‘ಶಿಷ್ಯರೆ… ಮಾನವ ಜನ್ಮ ದೊಡ್ಡದು. ಅದನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರೆ…. ಮೊದಲು ಸರಳ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಎರಡನೆಯದಾಗಿ ಮೌನವೇ ಆಭರಣ ಎಂಬುದನ್ನು ಪಾಲಿಸಬೇಕು. ದೇವರಿಗೆ ಸದಾ ಶರಣಾಗುವುದು. ಈ ಮೂರು ಸೂತ್ರದಲ್ಲಿ ಏನೆಲ್ಲ ಅಡಗಿದೆ. ಈ ಮೂರು ತತ್ವಗಳ ಪಾಲಿಸುವುದು ಕಡು ಕಷ್ಟ. ಈ ಮೂರು ಸೂತ್ರ ಪಾಲಿಸಿದರೆ ೧೪ ಲೋಕಂಗಳ ಗೆಲ್ಲಬಹುದು…’ ಎಂದರು.

ಶಿಷ್ಯರೆಲ್ಲ.. ಗುರುಗಳಿಗೆ ಅಡ್ಡ ಬಿದ್ದರು. ಮಹರ್ಷಿಗಳು ಹರ್ಷದಿ ಆಶೀರ್‍ವಾದಿಸಿದರು.

ಅಲ್ಲಿಗೆ ಅಂದಿನ ಉಪದೇಶಾಮೃತ ಮುಕ್ತಾಯಗೊಂಡಿತು. ಗುರುಗಳು ಧ್ಯಾನಸಕ್ತರಾದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...