Home / ಲೇಖನ / ಇತರೆ / ಕೋಳಿ ಮೊದಲೋ… ಮೊಟ್ಟೆ ಮೊದಲೋ…

ಕೋಳಿ ಮೊದಲೋ… ಮೊಟ್ಟೆ ಮೊದಲೋ…

ಒಮ್ಮೆ- ಅಕ್ಷರ ಮಹಾರಾಜ ಸಭೆಯ ಮಧ್ಯದಲ್ಲಿ ವಿನೋದಕ್ಕಾಗಿ “ಕೋಳಿ ಮೊದಲೋ? ಮೊಟ್ಟೆ ಮೊದಲೋ?? ಇದನ್ನು ಜಾಣ್ಮೆಯಲ್ಲಿ ಉತ್ತರಿಸಬೇಕು. ಇಲ್ಲವಾದರೆ ತಲೆ ದಂಡ ಖಂಡಿತ” ಎಂದು ಆಸ್ಥಾನಿಕರೆಲ್ಲರನೂ ಕೇಳುತ್ತಾ ಹೋದ.

ಒಬ್ಬ ಪಂಡಿತ ಎದ್ದು ನಿಂತು – “ಪ್ರಭು ಕೋಳಿ ಮೊದಲು, ಕೋಳಿ ಇದ್ದರಲ್ಲದೇ ಮೊಟ್ಟೆ ಉತ್ಪತ್ತಿಯಾಗುವುದು” ಎಂದ. ಅಲ್ಲಿದ್ದವರೆಲ್ಲಗೊಳ್ಳನೆ ನಕ್ಕರು.

ಅಲ್ಲಿದ್ದ ಕವಿಯೊಬ್ಬ ಎದ್ದು ನಿಂತು “ಪ್ರಭು… ಮೊಟ್ಟೆ ಮೊದಲು. ಮೊಟ್ಟೆಯಿದ್ದರಲ್ಲವೇ ಕೋಳಿ ಜನ್ಮಿಸುವುದು…” ಎಂದು ವಾದ ಮಂಡಿಸಿದ.

ಅಲ್ಲಿದ್ದವರೆಲ್ಲ ಮತ್ತೇ ಬಿದ್ದು ಬಿದ್ದು ನಕ್ಕರು.

ಇನ್ನೊಬ್ಬ ಪಂಡಿತ ಎದ್ದು ನಿಂತು “ಪ್ರಭು… ಕೋಳಿ ಮತ್ತು ಮೊಟ್ಟೆ ಏಕಕಾಲಕ್ಕೆ ಅಸ್ಥಿತ್ವಕ್ಕೆ ಬಂದಿವೆ. ಇಲ್ಲಿ ಯಾವುದು ಮೊದಲು ಯಾವುದು ಆನಂತರ ಎನ್ನುವುದು ಮುಖ್ಯವಲ್ಲ. ಕೋಳಿ ಮತ್ತು ಮೊಟ್ಟೆ ನಮಗೆ ಎರಡೂ ಮುಖ್ಯ” ಎಂದ.

ಆಸ್ಥಾನಿಕರೆಲ್ಲ ತಲೆದೂಗಿ ಕಣ್ಣು ಕಿವಿ ಮೂಗು ಅರಳಿಸಿ ಕುಳಿತರು.

ಅನುಭಾವಿಯೊಬ್ಬ ಎದ್ದು ನಿಂತು “ಮಹಾಪ್ರಭು… ಕೋಳಿ ಎನ್ನುವುದೂ ಸತ್ಯ ಮೊಟ್ಟೆ ಎನ್ನುವುದೂ ಸತ್ಯ. ಯಾವುದು ಮೊದಲು ಯಾವುದು ಅನಂತರ ಎನ್ನುವುದೆಲ್ಲ ಗೊಂದಲ…” ಎಂದು ವಾದ ಮಂಡಿಸುತ್ತಾ ನಿಂತ.

ಅಕ್ಷರ ಮಹಾರಾಜರದ್ದು ತಲೆ ಕೆಟ್ಟು ಹೋಯಿತು.

ಅಷ್ಟರಲ್ಲಿ- ಬೀರಬಲ್ಲ ಎದ್ದು ನಿಂತು ಮಹಾರಾಜರಿಗೆ, ಸಭೆಗೆ, ವಂದಿಸಿ. “ಮಹಾಪ್ರಭು ದೇವರು ಆರಂಭದಲ್ಲಿ ಅನಂತ ಸೃಷ್ಟಿ ಕ್ರಿಯೆಗಳಲ್ಲಿ ಪಕ್ಷಿಗಳನ್ನು ಮೊದಲು ಸೃಷ್ಠಿಸಿದ! ಆ ಪಕ್ಷಿ ಪ್ರಭೇದಗಳಲ್ಲಿ ಕೋಳಿಯೂ ಒಂದು ಎಂದು ಬ್ರಹ್ಮಾಂಡ ಸೃಷ್ಠಿ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ಕೋಳಿಯಿಂದ ಮೊದಲು ಮೊಟ್ಟೆ ! ನಂತರ ಮೊಟ್ಟೆಯಿಂದ ಕೋಳಿ ಹೀಗೆ ಸೃಷ್ಟಿ ಪ್ರತಿ ಸೃಷ್ಠಿಯಾಗುತ್ತಾ ನಿರಂತರವಾಗಿ ಸಾಗಿದೆಯೇ ವಿನಹ… ಕೂದಲು ಸೀಳುವ ಕೆಲಸದಿಂದ ಯಾರಿಗೆ ಲಾಭವಿಲ್ಲ… ಕೋಳಿ ಮೊದಲೋ ಮೊಟ್ಟೆ ಮೊದಲೋ… ಎನ್ನುವ ಪ್ರಶ್ನೆಯೇ ಅಲ್ಲ! ಆದ್ದರಿಂದ – ಗತ್ತಿನಲ್ಲಿ ಕೋಳಿ ಮೊದಲು, ಕೋಳಿಯಿಂದ ಮೊಟ್ಟೆ ಅನಂತರ ಬಂದಿದೆ… ಅದಕ್ಕೆ ಸೃಷ್ಠಿ ಪುರಾಣ ಕಥೆಯೇ ಮೂಲ ಆಧಾರ..” ಎಂದು ತನ್ನ ವಾದ ಮಂಡಿಸುತ್ತಾ ನಿಂತ.

“ಶಹಭಾಶ್… ಬೀರಬಲ್ಲ….! ನಿನ್ನ ವಾದ ಪ್ರೌಢಿಮೆ, ಜಾಣತನ, ನಿನ್ನ ತರ್ಕ ವಿನೋದ ಸದಾ ಚೈತನ್ಯದ ಚಿಲುಮೆ. ಮೆಚ್ಚಿದೆ. ನಿನ್ನ ವಾದವನ್ನು ನಾನೂ ಅನುಮೊದಿಸಿದ್ದೇನೆ” ಎಂದು ಸ್ವತಃ ಪ್ರಭುಗಳೇ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಉಳಿದವರೆಲ್ಲ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಸಭೆಯು ಮುಕ್ತಾಯವಾಗಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...