Home / ಲೇಖನ / ವಿಜ್ಞಾನ / ಅಂಗೈಯಲ್ಲಿ ಕಂಪ್ಯೂಟರ್ ಮೊಬೈಲ್

ಅಂಗೈಯಲ್ಲಿ ಕಂಪ್ಯೂಟರ್ ಮೊಬೈಲ್

ವೈಫೈ ಉಪಯೋಗಗಳು : ಮನೆಯಲ್ಲಿಯ ಹಿರಿಯರ ಆರೋಗ್ಯವನ್ನು ಆಗಿಂದಾಗ್ಗೆ ಎಲ್ಲಿದ್ದರೂ ವಿಚಾರಿಸಿ ಕೊಳ್ಳಬಹುದು. ಇಂಟೆಲ್‌ ಮೂಲಕ ಅವರ ಸ್ವಭಾವಗಳನ್ನು ಅಧ್ಯಯನ ಮಾಡಬಹುದು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಈ ವೈಪೈ ಸಂಕೇತಗಳನ್ನು ನೀಡುತ್ತದೆ. ರೇಡಿಯೋ ತರಂಗಗಳನ್ನು ಪತ್ತೆ ಹಚ್ಚುವ ಚಿಪ್‌ನಲ್ಲಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ಸಂಗ್ರಹಿಸಬಹುದು. ಅದನ್ನು ನಿಮ್ಮಗಡಿಯಾರದೊಳಗೋ, ಆಭರಣ ದೊಳಗೋ ಬಚ್ಚಿಟ್ಟು ಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಇದು ತುಂಬ ಅನುಕೂಲ. ಶಾಲೆಯಲ್ಲಿರುವ ಆಯಾಕೂಡ ಇವನ್ನು ಕಂಪ್ಯೂಟರನಲ್ಲಿಹಾಕಿ ನೋಡಬಹುದು. ಮನೆಯಾಚೆ ಹೋದ ಮಕ್ಕಳು ಹೇಗಿದ್ದಾರಪ್ಪ ಎಂದು ತಲೆಕೆಡಿಸಿಕೊಳ್ಳುವ ಅಮ್ಮಂದಿರರಿಗೆ ವೈಪೈ ಇದ್ದರೆ ನಿಶ್ಚಿಂತೆ. ರೇಡಿಯೋ ತರಂಗ ಪತ್ತೆ ಹಚ್ಚುವ ಚಿಪ್‌ನಲ್ಲಿ ಮಕ್ಕಳ ಹೆಸರನ್ನು ಸಂಗ್ರಹಿಸಿಟ್ಟುಕೊಂಡರೆ ಸಾಕು. ಆ ಮೂಲಕ ಅವರೆಲ್ಲಿದ್ದರೂ ಅವರ ಜತೆ ಸಂಪರ್ಕ ಸಾಧಿಸಬಹುದು. ಕಾರು ಓಡಿಸುತ್ತಿರುವ ಮಗನನ್ನು ಹದ್ದುಬಸ್ತಿನಲ್ಲಿಡಬಹುದು. ವೈಫೈಯಲ್ಲಿ ಟಿ.ವಿ ಕಾರ್ಯಕ್ರಮಗಳನ್ನು ನೋಡಬಹುದು. ನಿಮಗಿಷ್ಟವಿರುವ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿಕೊಳ್ಳಬಹುದು. ಅಷ್ಟೇಕೆ ನಿಮ್ಮ ಮನೆಯಲ್ಲೇನಾದರೂ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರೆ, ಅದರ ನೇರ ಪ್ರಸಾರವನ್ನು ಸಂಬಂಧಿಕರಿಗೆ ತಲುಪಿಸಬಹುದು. ಅವರ ಹೆಸರಲ್ಲೊಂದು ವೆಬ್‌ಸೈಟ್ ಇದ್ದರೆ ಸಾಕಷ್ಟೆ. ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳ ಬಗ್ಗೆ ಪಕ್ಕದ ಅಂಗಡಿಗೆ ಮಾಹಿತಿ ಕೊಟ್ಟರೆ ಸಾಕು. ಅದಕ್ಕೆ ಯಾರಾದರೂ ಬೇಡಿಕೆ ಸಲ್ಲಿಸಿದರೆ ತಕ್ಷಣ ಅಂಗಡಿಯಾತ ನಿಮಗೆ ಮಾಹಿತಿ ತಲುಪಿಸಬಹುದು. ಹಾದು ಹೋಗುವ ದಾರಿಯಲ್ಲಿ ಟ್ರಾಫಿಕ್‌ಜಾಮ್ ಆಗಿದ್ದರೆ ತಕ್ಷಣ ಈ ಕಂಪ್ಯೂಟರ್‌ ನಿಮ್ಮನ್ನು ಎಚ್ಚರಿಸುತ್ತದೆ. ನೀವು ಪ್ರಯಾಣ ಮಾಡುತ್ತಿದ್ದರೆ ವಿಡಿಯೋ ಕಾನ್ಫರೇನ್ಸ್ ಮೂಲಕ ಮನೆಯವರ ಯೋಗ ಕ್ಷೇಮ ವಿಚಾರಿಸಬಹುದು. ಬೆನ್ನು ಮುರಿಯುವಂತಹ ಪುಸ್ತಕಗಳನ್ನು ಹೊತ್ತುತಿರುಗುವ ಮಕ್ಕಳಿಗೂ ಇದು ಅನುಕೂಲ. ನಮ್ಮೆಲ ಪಠ್ಯಗಳನು ಕಂಪ್ಯೂಟರ್ ಒಳಗೆ ಹಾಕಿ ಆರಾಮವಾಗಿ ಓಡಾಡಬಹುದು.

ಅಮೇರಿಕಾ ದೇಶದಲ್ಲಿ ಇನ್ನೊಂದು ವಿಶಿಷ್ಟವಾದ ಕಂಪ್ಯೂಟರ್ ಮೊಬೈಲ್ Phone ನನ್ನು ಕಂಡು ಹಿಡಿಯಲಾಗಿದೆ. ಇಲ್ಲಿಯ ಹಾಕಿನ್ಸ್ ಕಂಪನಿ ಹೊರತಂದಿರುವ ಹೊಸ ಮೊಬೈಲ್‌ಗೊಂದು ಕಂಪ್ಯೂಟರ್‌ ಕೀ ಬೋರ್‍ಡ್‌ ಕೂಡ ಅಟ್ಯಾಚ್ ಆಗಿದೆ. ಮತ್ತೊಂದು Phone ಮುಚ್ಚಿಕೊಂಡಿದ್ದರೆ ಸೆಲ್ Phone ಬಿಚ್ಚಿದರೆ ಕಂಪ್ಯುಟರ್ ಕಾಣುತ್ತದೆ. ಇನ್ನು ಕೆಲವು ವರ್ಷಗಳ ನಂತರ ಯಾರೂ ಕಂಪ್ಯೂಟರನ್ನೇ ಕೊಂಡುವಂತಿಲ್ಲ. ಏಕೆಂದರೆ ಈ ಪ್ರತಿ ಮೊಬೈಲ್ Phone ರಲ್ಲಿಯೇ ಎಲವೂ ಇದೆ; ಎಂದು ನಿರ್ಮಾಪಕರು ಹೇಳುತ್ತಾರೆ. ಈ ಫೋನ್‌ನಲಿ ಮಾತಾಡಿದ್ದು ಸೊಗಸಾದ ಭಾಷೆಯಲ್ಲಿ ರೀಕಾರ್ಡ್‌ ಆಗುತ್ತದೆ. ಅದನ್ನೇ ದಾಖಲೆಯಾಗಿ ಸೆವ್ ಮಾಡಿಕೊಳ್ಳಬಹುದು. ಬಾಯಿಮಾತು ಎಂದು ತಳ್ಳಿಹಾಕುವಂತಿಲ್ಲ ಮಾತಾಡಿದ್ದೆಲ್ಲ ಅಲ್ಲಿ ಸಂಗ್ರಹವಾಗಿ ಬಿಡುತ್ತದೆ. ಆಗ ಮಾತಿಗೆ ನಿಜಕ್ಕೂ ಬೆಲೆ ಬರುತ್ತದೆ. ಹತ್ತು ವಾರಗಳ ಹಿಂದೆ ಹೇಳಿದ್ದನ್ನು ಈವೊತ್ತು ಆಡಿದ ಮಾತಿಗೆ ತಾಳೆ ಹಾಕಬಹುದು. ಸ್ಯಾಮ್ಸಂಗ್ ಸಂಸ್ಥೆ ಉಪಗ್ರಹ ಚಾನಲ್‌ಗಳ ಸಂಕೇತಗಳನ್ನು ಸ್ವೀಕರಿಸುವಂತಹ ಫೋನನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇಡೀ ಜಗತ್ತು ನಿಮ್ಮ ಮುಷ್ಟಿಯಲ್ಲಿರುತ್ತದೆ. ನೀವು ಎಲ್ಲಿಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಅನ್ನುವುದನ್ನು ನಿಮ್ಮ ಪೋಲಿಸರಿಂದ ಹಿಡಿದು ನಿಮ್ಮ ಹೆಂಡತಿಯ ತನಕ ಯಾರಿಗೆ ಬೇಕಾದರೂ ತಿಳಿಸಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...