Home / ಕವನ / ಕವಿತೆ / ಏಕಮೇವ

ಏಕಮೇವ

ಕಿನ್ನರ ಕಿಂಪುರುಷರ ನೌಕೆಗಳಂತೆ
ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,-
ನೂರೊಂದು ಕಡೆಗೆ ತೇಲುತಿಹುದು ನೋಡಾ!
ಬೆಣ್ಣೆ ಕಡಿದ ಮಜ್ಜಿಗೆಯಂತೆ
ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ!
ತಪತಪನೆ ಕಾಯ್ದು ಕೋಟಿ ಸೂರ್ಯರಂತೆ
ಕಣ್ಣು ಕುಕ್ಕಿ ಸುವದು ನೋಡಾ ಸಾಗರವು!
ಹೆಡೆಯಲ್ಲಿ ಪ್ರಷ್ಟರಾಗವಿಹ ಕಾಳಸರ್ಪಗಳಂತೆ
ಸಾಗಿಹುದು ನೋಡಾ ಸಾವಿರ ತೆರೆಗಳ ವೈಭವವು!

ಹಚ್ಚಹಸಿರಿತ್ತು, ಹಿಂದೀ ಮಹಾಸಾಗರದ ಬಣ್ಣ,
ಕಪ್ಪುಹಸಿರಿತ್ತು ಮತ್ತೆ!
ಅರಬ್ಬಿಯ ಮುನ್ನೀರಿಗೆ ಕರಿನೀಲಿ ಬಣ್ಣವುಂಟು;
ಮುಂದೆ ಬಂದಿಹುದು ಕೆಂಪು ಸಮುದ್ರವೊಂದು.
ನಿನ್ನ ಬಣ್ಣವಾವುದು, ಸಮುದ್ರರಾಜ?
ಸಪ್ತವರ್ಣದ ಇಂದ್ರಧನುಸ್ಸನ್ನು ಹಿಡಿದು
ಆಕಾಶರಾಜನ ಸರಿಗಟ್ಟಿದೆ ನೀನು.
ಚಣಕೊಮ್ಮೆ ಬಣ್ಣವ ಬದಲಿಸಿ ಚೆಲುವಿಕೆಯನಾಂತು
ಭೂದೇವಿಯನು ಪಾತಾಳಕೆ ಮೆಟ್ಟಿದೆ ನೀನು!

ಮುಗಿಲಿಗಿಂತ ಮಿಗಿಲು ಸಾಗರದ ನೀಲಿ!
ಸಾಗರದ ತುದಿ ತಟ್ಟಿ ಮುಗಿಲೆಲ್ಲ ನೀಲಿಯಾಗಿಹುದು.
ಮುಗಿಲನಂತತೆಯೆಲ್ಲ ಮುನ್ನೀರ ಗರ್ಭಪಿಂಡ!
ಮೋಡಗಳೆಂಬ ಓಡಗಳು ಬಾಂದಳದಿ ತೇಲುವಲ್ಲಿ
ಹಕ್ಕಿಯೆಂಬ ಚಿಕ್ಕಿ ಮಿನುಗಿದವು ಕಡಲಿನೊಡಲ ಮೇಲ್ಗಡೆಗೆ!
ಗಾಳಿಯಲಿ ರೆಕ್ಕೆ ಬೀಸುತಿದೆ ಪಕ್ಷಿಗಣವು,-
ಈಸುತಿದೆ ಗಾಳಿ, ನೀರಿನಲಿ ರೆಕ್ಕೆ ಬಡೆದು!

ನೆಲ ಗಾಳೆಯುರಿ, ಮುಗಿಲು,-
ಪೆಡಂಭೂತಗಳಿವು ನಾಲ್ಕು.
ಈ ಮಹಾಭೂತಗಳ ನುಂಗಿ ನೀರ್ಕುಡಿಯುತ್ತ
ಮತ್ತಮದಗಜದಂತೆ ಕ್ರೀಡಿಸುತ ನಿಂತ ಪಂಚಾನನ!
ನಿನ್ನೆದುರು ನರನೆಂಬ ಪಿಳ್ಳೆ, ಬರಿ ನೀರ್ಗುಳ್ಳಿ;
ಕೆರಳದಿರು! ಕರುಣಿಸು! ಶರಣು! ಶರಣು!!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...