Home / ಕವನ / ಕವಿತೆ / ದಾಮಿನಿ

ದಾಮಿನಿ

ಯಾವ ಹೆಸರಿನಿಂದ ಕರೆಯಲೇ ನಿನಗೆ
ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ|
ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ
ನಿನ್ನ ಹೆಸರು ನನಗೆ ಗೊತ್ತೇ ಇಲ್ಲ
ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ|

ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ
ಪೀಡಿತಗಳ ನ್ಯಾಯಕ್ಕೆ ದಿಲ್ಲಿಯಿನ್ನೂ ಮಲಗಿಲ್ಲ
ಜಾರಿಯಿದೆ ನ್ಯಾಯದ ಹಕ್ಕಿನ ಹೋರಾಟವಿನ್ನೂ
ಗಡಿಗಳಲ್ಲೂ ಸಲ್ಲುತ್ತಿದೆ ಮೌನ ಶೃದ್ಧಾಂಜಲಿ
ಉರಿವ ಕೊಳ್ಳಿ ಹಿಡಿದು ಮನಕಲಕುವ ಪ್ರಾರ್ಥನೆ|

ನಿರಂತರ ಉರಿಯುತ್ತಿರುವ ಈ ಕೊಳ್ಳಿ ಮೇಲಾಣೆ
ಇಷ್ಟಿಷ್ಟೇ ನಿಂತು ಹೋದ ನಿನ್ನ ಉಸಿರಿನಾಣೆ
ಹೊತ್ತಿದ ಬತ್ತಿಗಳು ಉರಿಯಲೇಬೇಕು
ಹೋರಾಟಕೆ ಪ್ರತಿಫಲ ದೊರಕಲೇಬೇಕು
ಒಂದು ದಿನ… ಆ ಒಂದು ದಿನ
ಕಂಡೇ ಕಾಣುವೆವು ನಿನ್ನ ಕಣ್ಣಲ್ಲಿ ನಕ್ಷತ್ರ ಬೆಳಕ|

ದುಃಖದ ಸುನಾಮಿ ಅಲೆಗಳು ಅಪ್ಪಳಿಸುತ್ತಿವೆ
ನೀನಿರುವಲ್ಲಿಂದಲೇ ಒಮ್ಮೆ ಇಣಕಿ ನೋಡು ದಾಮಿನಿ
ಎಲ್ಲರ ಮನದಲಿ ನೀನು ಜೀವಂತವಾಗಿರುವೆ
ಮಾನಿನಯರ ಮಾನ ಕಾಯಲು ಕಾರಣವಾಗಿರುವೆ
ನಿನ್ನಾಣೆ ನಿನ್ನ ನಿಲ್ಲುತ್ತಿರುವ ಉಸಿರಿನಾಣೆ
ಹುಸಿಯಾಗದು ಲಕ್ಷಾಂತರ ಜನರ ಪ್ರಾರ್ಥನೆ.

ಹೋರಾಟದ ದೈತ್ಯ ಅಲೆಗಳ ಮುಂದೆ
ಯಾವ ಶಕ್ತಿಯೂ ನಿಲ್ಲಲಾರದು ನೋಡು
ಹಕ್ಕು ಪಡೆದೇ ತೀರುವ ಛಲವಿದೆ
ಉರಿವ ಕೊಳ್ಳಿ ಹಿಡಿದ ಹೊಸ ವರ್ಷದ ಬೆಳಗು
ಪೀಡಿತ ಹೆಣ್ಣುಗಳಿಗೆ ಸಮರ್ಪಿತ ನೋಡು

ಲೋಕವೇ ಏನಾಗಿದೆ ನಿನ್ನ ಕರುಳಿಗೆ
ದಾಮಿನಿಯ ಉಸಿರು ವ್ಯರ್ಥವಾಗಬೇಕೆ?
ಅವಳು ಬದುಕಿದ್ದಾಳೆ ನನ್ನಲಿ ನಿನ್ನಲಿ ಎಲ್ಲರಲಿ
ಧೈರ್ಯ ಸಾಹಸದ ಕುರುಹಾಗಿ,
ಜೀವನೋತ್ಸಾಹದ ಚಿಲುಮೆಯಾಗಿ
ಬರುವ ನಾಳೆಯ ಭರವಸೆಯ ಬೆಳಕಾಗಿ|

ಹೀಗೆಯೇ ಬಿಡಲಾರೆವು ಆ ಬಲತ್ಕಾರಿಗಳನ್ನು
ಎದೆ ಮೆಟ್ಟಿ ನ್ಯಾಯ ಕೇಳುವ ಬಲವಿದೆ.
ಹಕ್ಕು ಪಡೆದೇ ತೀರುವ ಛಲವಿದೆ.
ಗಲ್ಲು ಶಿಕ್ಷೆ ನೀಡಿಯೇ ತೀರುತ್ತೇವೆ
ಬಲತ್ಕರಿಸಿ, ಸಾಯಿಸಿದ ಎಲ್ಲ ಸೀತೆಯರ ಲೆಕ್ಕ
ಚುಕ್ತಾ ಮಾಡುತ್ತೇವೆ ಇಲ್ಲಿಯೇ ಈ ಭೂಮಿ ಮೇಲೆಯೆ|
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ