Home / ಕವನ / ಕವಿತೆ / ದಾಮಿನಿ

ದಾಮಿನಿ

ಯಾವ ಹೆಸರಿನಿಂದ ಕರೆಯಲೇ ನಿನಗೆ
ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ|
ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ
ನಿನ್ನ ಹೆಸರು ನನಗೆ ಗೊತ್ತೇ ಇಲ್ಲ
ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ|

ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ
ಪೀಡಿತಗಳ ನ್ಯಾಯಕ್ಕೆ ದಿಲ್ಲಿಯಿನ್ನೂ ಮಲಗಿಲ್ಲ
ಜಾರಿಯಿದೆ ನ್ಯಾಯದ ಹಕ್ಕಿನ ಹೋರಾಟವಿನ್ನೂ
ಗಡಿಗಳಲ್ಲೂ ಸಲ್ಲುತ್ತಿದೆ ಮೌನ ಶೃದ್ಧಾಂಜಲಿ
ಉರಿವ ಕೊಳ್ಳಿ ಹಿಡಿದು ಮನಕಲಕುವ ಪ್ರಾರ್ಥನೆ|

ನಿರಂತರ ಉರಿಯುತ್ತಿರುವ ಈ ಕೊಳ್ಳಿ ಮೇಲಾಣೆ
ಇಷ್ಟಿಷ್ಟೇ ನಿಂತು ಹೋದ ನಿನ್ನ ಉಸಿರಿನಾಣೆ
ಹೊತ್ತಿದ ಬತ್ತಿಗಳು ಉರಿಯಲೇಬೇಕು
ಹೋರಾಟಕೆ ಪ್ರತಿಫಲ ದೊರಕಲೇಬೇಕು
ಒಂದು ದಿನ… ಆ ಒಂದು ದಿನ
ಕಂಡೇ ಕಾಣುವೆವು ನಿನ್ನ ಕಣ್ಣಲ್ಲಿ ನಕ್ಷತ್ರ ಬೆಳಕ|

ದುಃಖದ ಸುನಾಮಿ ಅಲೆಗಳು ಅಪ್ಪಳಿಸುತ್ತಿವೆ
ನೀನಿರುವಲ್ಲಿಂದಲೇ ಒಮ್ಮೆ ಇಣಕಿ ನೋಡು ದಾಮಿನಿ
ಎಲ್ಲರ ಮನದಲಿ ನೀನು ಜೀವಂತವಾಗಿರುವೆ
ಮಾನಿನಯರ ಮಾನ ಕಾಯಲು ಕಾರಣವಾಗಿರುವೆ
ನಿನ್ನಾಣೆ ನಿನ್ನ ನಿಲ್ಲುತ್ತಿರುವ ಉಸಿರಿನಾಣೆ
ಹುಸಿಯಾಗದು ಲಕ್ಷಾಂತರ ಜನರ ಪ್ರಾರ್ಥನೆ.

ಹೋರಾಟದ ದೈತ್ಯ ಅಲೆಗಳ ಮುಂದೆ
ಯಾವ ಶಕ್ತಿಯೂ ನಿಲ್ಲಲಾರದು ನೋಡು
ಹಕ್ಕು ಪಡೆದೇ ತೀರುವ ಛಲವಿದೆ
ಉರಿವ ಕೊಳ್ಳಿ ಹಿಡಿದ ಹೊಸ ವರ್ಷದ ಬೆಳಗು
ಪೀಡಿತ ಹೆಣ್ಣುಗಳಿಗೆ ಸಮರ್ಪಿತ ನೋಡು

ಲೋಕವೇ ಏನಾಗಿದೆ ನಿನ್ನ ಕರುಳಿಗೆ
ದಾಮಿನಿಯ ಉಸಿರು ವ್ಯರ್ಥವಾಗಬೇಕೆ?
ಅವಳು ಬದುಕಿದ್ದಾಳೆ ನನ್ನಲಿ ನಿನ್ನಲಿ ಎಲ್ಲರಲಿ
ಧೈರ್ಯ ಸಾಹಸದ ಕುರುಹಾಗಿ,
ಜೀವನೋತ್ಸಾಹದ ಚಿಲುಮೆಯಾಗಿ
ಬರುವ ನಾಳೆಯ ಭರವಸೆಯ ಬೆಳಕಾಗಿ|

ಹೀಗೆಯೇ ಬಿಡಲಾರೆವು ಆ ಬಲತ್ಕಾರಿಗಳನ್ನು
ಎದೆ ಮೆಟ್ಟಿ ನ್ಯಾಯ ಕೇಳುವ ಬಲವಿದೆ.
ಹಕ್ಕು ಪಡೆದೇ ತೀರುವ ಛಲವಿದೆ.
ಗಲ್ಲು ಶಿಕ್ಷೆ ನೀಡಿಯೇ ತೀರುತ್ತೇವೆ
ಬಲತ್ಕರಿಸಿ, ಸಾಯಿಸಿದ ಎಲ್ಲ ಸೀತೆಯರ ಲೆಕ್ಕ
ಚುಕ್ತಾ ಮಾಡುತ್ತೇವೆ ಇಲ್ಲಿಯೇ ಈ ಭೂಮಿ ಮೇಲೆಯೆ|
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...