Home / ಕವನ / ಕವಿತೆ / ದಾಮಿನಿ

ದಾಮಿನಿ

ಯಾವ ಹೆಸರಿನಿಂದ ಕರೆಯಲೇ ನಿನಗೆ
ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ|
ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ
ನಿನ್ನ ಹೆಸರು ನನಗೆ ಗೊತ್ತೇ ಇಲ್ಲ
ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ|

ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ
ಪೀಡಿತಗಳ ನ್ಯಾಯಕ್ಕೆ ದಿಲ್ಲಿಯಿನ್ನೂ ಮಲಗಿಲ್ಲ
ಜಾರಿಯಿದೆ ನ್ಯಾಯದ ಹಕ್ಕಿನ ಹೋರಾಟವಿನ್ನೂ
ಗಡಿಗಳಲ್ಲೂ ಸಲ್ಲುತ್ತಿದೆ ಮೌನ ಶೃದ್ಧಾಂಜಲಿ
ಉರಿವ ಕೊಳ್ಳಿ ಹಿಡಿದು ಮನಕಲಕುವ ಪ್ರಾರ್ಥನೆ|

ನಿರಂತರ ಉರಿಯುತ್ತಿರುವ ಈ ಕೊಳ್ಳಿ ಮೇಲಾಣೆ
ಇಷ್ಟಿಷ್ಟೇ ನಿಂತು ಹೋದ ನಿನ್ನ ಉಸಿರಿನಾಣೆ
ಹೊತ್ತಿದ ಬತ್ತಿಗಳು ಉರಿಯಲೇಬೇಕು
ಹೋರಾಟಕೆ ಪ್ರತಿಫಲ ದೊರಕಲೇಬೇಕು
ಒಂದು ದಿನ… ಆ ಒಂದು ದಿನ
ಕಂಡೇ ಕಾಣುವೆವು ನಿನ್ನ ಕಣ್ಣಲ್ಲಿ ನಕ್ಷತ್ರ ಬೆಳಕ|

ದುಃಖದ ಸುನಾಮಿ ಅಲೆಗಳು ಅಪ್ಪಳಿಸುತ್ತಿವೆ
ನೀನಿರುವಲ್ಲಿಂದಲೇ ಒಮ್ಮೆ ಇಣಕಿ ನೋಡು ದಾಮಿನಿ
ಎಲ್ಲರ ಮನದಲಿ ನೀನು ಜೀವಂತವಾಗಿರುವೆ
ಮಾನಿನಯರ ಮಾನ ಕಾಯಲು ಕಾರಣವಾಗಿರುವೆ
ನಿನ್ನಾಣೆ ನಿನ್ನ ನಿಲ್ಲುತ್ತಿರುವ ಉಸಿರಿನಾಣೆ
ಹುಸಿಯಾಗದು ಲಕ್ಷಾಂತರ ಜನರ ಪ್ರಾರ್ಥನೆ.

ಹೋರಾಟದ ದೈತ್ಯ ಅಲೆಗಳ ಮುಂದೆ
ಯಾವ ಶಕ್ತಿಯೂ ನಿಲ್ಲಲಾರದು ನೋಡು
ಹಕ್ಕು ಪಡೆದೇ ತೀರುವ ಛಲವಿದೆ
ಉರಿವ ಕೊಳ್ಳಿ ಹಿಡಿದ ಹೊಸ ವರ್ಷದ ಬೆಳಗು
ಪೀಡಿತ ಹೆಣ್ಣುಗಳಿಗೆ ಸಮರ್ಪಿತ ನೋಡು

ಲೋಕವೇ ಏನಾಗಿದೆ ನಿನ್ನ ಕರುಳಿಗೆ
ದಾಮಿನಿಯ ಉಸಿರು ವ್ಯರ್ಥವಾಗಬೇಕೆ?
ಅವಳು ಬದುಕಿದ್ದಾಳೆ ನನ್ನಲಿ ನಿನ್ನಲಿ ಎಲ್ಲರಲಿ
ಧೈರ್ಯ ಸಾಹಸದ ಕುರುಹಾಗಿ,
ಜೀವನೋತ್ಸಾಹದ ಚಿಲುಮೆಯಾಗಿ
ಬರುವ ನಾಳೆಯ ಭರವಸೆಯ ಬೆಳಕಾಗಿ|

ಹೀಗೆಯೇ ಬಿಡಲಾರೆವು ಆ ಬಲತ್ಕಾರಿಗಳನ್ನು
ಎದೆ ಮೆಟ್ಟಿ ನ್ಯಾಯ ಕೇಳುವ ಬಲವಿದೆ.
ಹಕ್ಕು ಪಡೆದೇ ತೀರುವ ಛಲವಿದೆ.
ಗಲ್ಲು ಶಿಕ್ಷೆ ನೀಡಿಯೇ ತೀರುತ್ತೇವೆ
ಬಲತ್ಕರಿಸಿ, ಸಾಯಿಸಿದ ಎಲ್ಲ ಸೀತೆಯರ ಲೆಕ್ಕ
ಚುಕ್ತಾ ಮಾಡುತ್ತೇವೆ ಇಲ್ಲಿಯೇ ಈ ಭೂಮಿ ಮೇಲೆಯೆ|
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...