Home / ಕವನ / ಕವಿತೆ / ದಾಮಿನಿ

ದಾಮಿನಿ

ಯಾವ ಹೆಸರಿನಿಂದ ಕರೆಯಲೇ ನಿನಗೆ
ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ|
ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ
ನಿನ್ನ ಹೆಸರು ನನಗೆ ಗೊತ್ತೇ ಇಲ್ಲ
ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ|

ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ
ಪೀಡಿತಗಳ ನ್ಯಾಯಕ್ಕೆ ದಿಲ್ಲಿಯಿನ್ನೂ ಮಲಗಿಲ್ಲ
ಜಾರಿಯಿದೆ ನ್ಯಾಯದ ಹಕ್ಕಿನ ಹೋರಾಟವಿನ್ನೂ
ಗಡಿಗಳಲ್ಲೂ ಸಲ್ಲುತ್ತಿದೆ ಮೌನ ಶೃದ್ಧಾಂಜಲಿ
ಉರಿವ ಕೊಳ್ಳಿ ಹಿಡಿದು ಮನಕಲಕುವ ಪ್ರಾರ್ಥನೆ|

ನಿರಂತರ ಉರಿಯುತ್ತಿರುವ ಈ ಕೊಳ್ಳಿ ಮೇಲಾಣೆ
ಇಷ್ಟಿಷ್ಟೇ ನಿಂತು ಹೋದ ನಿನ್ನ ಉಸಿರಿನಾಣೆ
ಹೊತ್ತಿದ ಬತ್ತಿಗಳು ಉರಿಯಲೇಬೇಕು
ಹೋರಾಟಕೆ ಪ್ರತಿಫಲ ದೊರಕಲೇಬೇಕು
ಒಂದು ದಿನ… ಆ ಒಂದು ದಿನ
ಕಂಡೇ ಕಾಣುವೆವು ನಿನ್ನ ಕಣ್ಣಲ್ಲಿ ನಕ್ಷತ್ರ ಬೆಳಕ|

ದುಃಖದ ಸುನಾಮಿ ಅಲೆಗಳು ಅಪ್ಪಳಿಸುತ್ತಿವೆ
ನೀನಿರುವಲ್ಲಿಂದಲೇ ಒಮ್ಮೆ ಇಣಕಿ ನೋಡು ದಾಮಿನಿ
ಎಲ್ಲರ ಮನದಲಿ ನೀನು ಜೀವಂತವಾಗಿರುವೆ
ಮಾನಿನಯರ ಮಾನ ಕಾಯಲು ಕಾರಣವಾಗಿರುವೆ
ನಿನ್ನಾಣೆ ನಿನ್ನ ನಿಲ್ಲುತ್ತಿರುವ ಉಸಿರಿನಾಣೆ
ಹುಸಿಯಾಗದು ಲಕ್ಷಾಂತರ ಜನರ ಪ್ರಾರ್ಥನೆ.

ಹೋರಾಟದ ದೈತ್ಯ ಅಲೆಗಳ ಮುಂದೆ
ಯಾವ ಶಕ್ತಿಯೂ ನಿಲ್ಲಲಾರದು ನೋಡು
ಹಕ್ಕು ಪಡೆದೇ ತೀರುವ ಛಲವಿದೆ
ಉರಿವ ಕೊಳ್ಳಿ ಹಿಡಿದ ಹೊಸ ವರ್ಷದ ಬೆಳಗು
ಪೀಡಿತ ಹೆಣ್ಣುಗಳಿಗೆ ಸಮರ್ಪಿತ ನೋಡು

ಲೋಕವೇ ಏನಾಗಿದೆ ನಿನ್ನ ಕರುಳಿಗೆ
ದಾಮಿನಿಯ ಉಸಿರು ವ್ಯರ್ಥವಾಗಬೇಕೆ?
ಅವಳು ಬದುಕಿದ್ದಾಳೆ ನನ್ನಲಿ ನಿನ್ನಲಿ ಎಲ್ಲರಲಿ
ಧೈರ್ಯ ಸಾಹಸದ ಕುರುಹಾಗಿ,
ಜೀವನೋತ್ಸಾಹದ ಚಿಲುಮೆಯಾಗಿ
ಬರುವ ನಾಳೆಯ ಭರವಸೆಯ ಬೆಳಕಾಗಿ|

ಹೀಗೆಯೇ ಬಿಡಲಾರೆವು ಆ ಬಲತ್ಕಾರಿಗಳನ್ನು
ಎದೆ ಮೆಟ್ಟಿ ನ್ಯಾಯ ಕೇಳುವ ಬಲವಿದೆ.
ಹಕ್ಕು ಪಡೆದೇ ತೀರುವ ಛಲವಿದೆ.
ಗಲ್ಲು ಶಿಕ್ಷೆ ನೀಡಿಯೇ ತೀರುತ್ತೇವೆ
ಬಲತ್ಕರಿಸಿ, ಸಾಯಿಸಿದ ಎಲ್ಲ ಸೀತೆಯರ ಲೆಕ್ಕ
ಚುಕ್ತಾ ಮಾಡುತ್ತೇವೆ ಇಲ್ಲಿಯೇ ಈ ಭೂಮಿ ಮೇಲೆಯೆ|
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...